ಫಾನ್ಫೋನ್ ತೂಫಾನಿನ ಅಬ್ಬರಕ್ಕೆ ಕನಿಷ್ಠ 28 ಸಾವು
ಮನಿಲಾ, ಡಿಸೆಂಬರ್ 27: ಕ್ರಿಸ್ ಮಸ್ ದಿನದಿಂದ ಫಿಲಿಪ್ಪೀನ್ಸ್ನ ಕೇಂದ್ರ ಭಾಗದ ವಿವಿಧ ದ್ವೀಪಗಳ ಮೇಲೆ ಅಪ್ಪಳಿಸಿರುವ ಭೀಕರ ಫಾನ್ಫೋನ್ ತೂಫಾನು ಸೃಷ್ಟಿಸಿರುವ ಅನಾಹುತಕ್ಕೆ ಕನಿಷ್ಠ 28 ಮಂದಿ ಬಲಿಯಾಗಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ವಿವಿಧ ಪ್ರಾಂತ್ಯಗಳಲ್ಲಿ ವೇಗವಾಗಿ ಬೀಸುತ್ತಿರುವ ಚಂಡಮಾರುತದಿಂದ ಮಂಗಳವಾರ ಅನೇಕ ಕಡೆ ಭೂಕುಸಿತದಿಂದ ತೀವ್ರ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅನೇಕ ಕಡೆ ಮನೆಗಳು ನೆಲಕಚ್ಚಿವೆ. ರಾಷ್ಟ್ರೀಯ ವಿಪತ್ತು ಅಪಾಯ ನಿಯಂತ್ರಣ ಸಮಿತಿಯ ಪ್ರಕಾರ 12 ಜನರು ನಾಪತ್ತೆಯಾಗಿದ್ದಾರೆ.
ಫಾನ್ಫೋನ್ ತೂಫಾನಿನಿಂದಾಗಿ 58,000ಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಜತೆಗೆ ರಜೆ ಸಮಯ ಕಳೆಯಲು ಬಂದು ಸಿಲುಕಿದ್ದ ಸಾವಿರಾರು ಮಂದಿ ಪ್ರವಾಸಿಗರನ್ನು ಕೂಡ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ತೂಫಾನಿನಿಂದ ಧರೆಗುರುಳಿದ ಮರಗಳ ಅಡಿ ಸಿಲುಕಿ ಸತ್ತಿದ್ದರೆ, ಇನ್ನು ಕೆಲವರು ವಿದ್ಯುದಾಘಾತ ಹಾಗೂ ಪ್ರವಾಹದಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ.

ಫಾನ್ಫೋನ್ ತೂಫಾನು ಈ ವರ್ಷ ಫಿಲಿಪ್ಪೀನ್ಸ್ಗೆ ಅಪ್ಪಳಿಸಿರುವ ಏಳನೇ ಚಂಡಮಾರುತವಾಗಿದೆ. ಪಿಲಿಪ್ಪೀನ್ಸ್ನ ಅತ್ಯಂತ ಮಾರಕ ತೂಫಾನು ಎಂದೇ ಪರಿಗಣಿಸಲಾಗಿರುವ ಹೈಯಾನ್ ತೂಫಾನು 2013ರಲ್ಲಿ 6,000ಕ್ಕೂ ಅಧಿಕ ಮಂದಿಯ ಜೀವ ತೆಗೆದಿತ್ತು. ಗಂಟೆಗೆ 200 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಫಾನ್ಫೋನ್ ಚಂಡಮಾರುತ ಕೂಡ ಅಷ್ಟೇ ಭೀಕರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿದ್ದ ಫಿಲಿಪ್ಪೀನ್ಸ್ನ ಜನತೆಯ ಖುಷಿಯನ್ನು ಫಾನ್ಫೋನ್ ಕಸಿದುಕೊಂಡಿದೆ. ವಿಸಯಾಸ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿರುವ ಮೂರು ಪ್ರಮುಖ ದ್ವೀಪಗಳು ಚಂಡಮಾರುತದಿಂದ ಅತಿ ಹೆಚ್ಚು ಹಾನಿಗೊಳಗಾಗಿವೆ. ಪ್ರಸಿದ್ಧ ಪ್ರವಾಸಿ ದ್ವೀಪ ಬೊರಾಕೇ ಕೂಡ ಚಂಡಮಾರುತದಿಂದ ಅಪಾರ ಹಾನಿಗೊಳಗಾಗಿದೆ. ಅನೇಕ ಮನೆಗಳು ಕುಸಿದಿದ್ದು, ಮೊಬೈಲ್ ಫೋನ್ ಹಾಗೂ ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications