ಚಿತ್ರಸುದ್ದಿ : ಕೊಚ್ಚಿ ಹಬ್ಬ, ಪರುಗ್ವೆ ನೃತ್ಯ ಅಬ್ಬಬ್ಬಾ!
ಬೆಂಗಳೂರು, ಫೆ.11: ಕೊಚ್ಚಿಯ ಶಿವ ದೇಗುಲದಲ್ಲಿ ಅಲಂಕೃತ ಆನೆಗಳ ಸಾಲುಗಳ ಜತೆಗೆ ಪೂರಂ ಹಬ್ಬ ಆಚರಿಸಲಾಗಿದೆ. ಅತ್ತ ಪರುಗ್ವೆಯಲ್ಲಿ ವಾರ್ಷಿಕ ಹಬ್ಬ ಜೋರಾಗಿ ನಡೆದಿದೆ. ಪರುಗ್ವೆಯ ಡಿಯಾ ಡೆ ಸ್ಯಾನ್ ಬ್ಲಾಸ್ ಕಾರ್ನಿವಲ್ ನ ಚಿತ್ರ ಇಲ್ಲಿದೆ
ಉಳಿದಂತೆ ಇಂದಿನ ಚಿತ್ರಸುದ್ದಿಯಲ್ಲಿ ಮುಂಬೈನಲ್ಲಿ ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ನೆಚ್ಚಿನ ತಬಲಾ ಹರಾಜಾಗಿದ ಚಿತ್ರ, ಕ್ಯಾನ್ಸರ್ ಜಾಗೃತಿಗಾಗಿ ದೆಹಲಿಗೆ ಬಂದಿರುವ ಕ್ರಿಕೆಟರ್ ಯುವರಾಜ್ ಸಿಂಗ್, ಸೋಚಿ ಚಳಿಗಾಲದ ಒಲಿಂಪಿಕ್ಸ್ ಚಿತ್ರ, ಬೆಂಗಳೂರಿನಲ್ಲಿ ಆಕರ್ಷಕ ಬಳೆಗಳ ಪ್ರದರ್ಶನ.ನೇಪಾಳದ ರಾಜಧಾನಿ ಕಠ್ಮಂಡು ವಿನಿಂದ 30 ಕಿ.ಮೀ ದೂರದಲ್ಲಿರುವ ಶಂಖು ಬಳಿಯ ಸಾಲಿನದಿಯಲ್ಲಿ ಮಹಿಳೆಯರು ಪವಿತ್ರಸ್ನಾನ ಕೈಗೊಂಡಿದ್ದಾರೆ. ದಕ್ಷಿಣ ಕೊರಿಯಾದ ಗಂಗ್ ನ್ಯೂಂಗ್ ಪ್ರದೇಶದಲ್ಲಿ 1 ಮೀಟರ್ ಗೂ ಅಧಿಕ ಹಿಮಪಾತದಿಂದಾಗಿ ರಸ್ತೆಗಳು ಸಂಪೂರ್ಣ ಹಿಮಮಯವಾಗಿದೆ. ಹಾಗೂ ಮಾರಾಟ ವಿವರ ಎಲ್ಲವೂ ಇದೆ ತಪ್ಪದೇ ನೋಡಿ...
ಪರುಗ್ವೆ ದೇಶದ ಸಾಂಪ್ರದಾಯಿಕ ನೃತ್ಯ ಅಬ್ಬಬ್ಬಾ!
ಪರುಗ್ವೆ ದೇಶದ ಸಾಂಪ್ರದಾಯಿಕ ಸಾಂಬಾ ನೃತ್ಯ ಶೈಲಿಯ ಚಿತ್ರ Encarnacion ನಗರದಲ್ಲಿ ನಡೆದಿರುವ ಡಿಯಾ ಡೆ ಸ್ಯಾನ್ ಬ್ಲಾಸ್ ಕಾರ್ನಿವಲ್ ಗೆ ದೇಶ ವಿದೇಶದಿಂದ ಪ್ರವಾಸಿಗರು ಆಗಮಿಸಿದ್ದಾರೆ. (Xinhua/Rene Gonzalez/IANS)
ಕೊಚ್ಚಿಯ ಶಿವ ದೇಗುಲದಲ್ಲಿ
ಕೇರಳದ ಕೊಚ್ಚಿಯ ಶಿವ ದೇಗುಲದಲ್ಲಿ ಅಲಂಕೃತ ಆನೆಗಳ ಸಾಲುಗಳ ಜತೆಗೆ ಪೂರಂ ಹಬ್ಬ ಆಚರಿಸಲಾಗಿದೆ.
ಕ್ಯಾನ್ಸರ್ ವಿರುದ್ಧ ಯುವರಾಜ್ ಸಿಂಗ್ ಸಮರ
ನವದೆಹಲಿ: ಕ್ಯಾನ್ಸರ್ ಜಾಗೃತಿಗಾಗಿ ದೆಹಲಿಗೆ ಬಂದಿರುವ ಕ್ರಿಕೆಟರ್ ಯುವರಾಜ್ ಸಿಂಗ್ ಹಾಗೂ ಅವರ ತಾಯಿ ಶಬ್ ನಮ್ ಸಿಂಗ್
ಆಕರ್ಷಕ ಬಳೆಗಳ ಪ್ರದರ್ಶನ ಹಾಗೂ ಮಾರಾಟ
ಬೆಂಗಳೂರಿನ ಸಫೀನಾ ಪ್ಲಾಜಾದಲ್ಲಿ ಆಕರ್ಷಕ ಬಳೆಗಳ ಪ್ರದರ್ಶನ ಹಾಗೂ ಮಾರಾಟ ಜಾರಿಯಲ್ಲಿದೆ. (Photo: IANS)
ಜರ್ಮನಿಯ ಚಿನ್ನದ ಪದಕ ವಿಜೇತೆ ಮರಿಯಾ
ಸೋಚಿ ಚಳಿಗಾಲ ಒಲಿಂಪಿಕ್ಸ್ 2014ರಲ್ಲಿ ಸೋಮವಾರ ಜರ್ಮನಿಗೆ ಚಿನ್ನದ ಪದಕ ಗೆಲ್ಲಿಸಿಕೊಂಡ ಮರಿಯಾ ಹೊಫಿಲ್ ರಿಸ್ಕ್. AP/PTI
ಝಾಕೀರ್ ಹುಸೇನ್ ನೆಚ್ಚಿನ ತಬಲಾ ಹರಾಜು
ಮುಂಬೈ: ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರು ತಮ್ಮ ತಂದೆ ಉಸ್ತಾದ್ ಅಲ್ಲಾ ರಖಾ ಅವರು ಬಳಸುತ್ತಿದ್ದ ತಬಲಾಗಳನ್ನು ಹರಾಜಾಗಿದ್ದಾರೆ. ಹರಾಜಿನಿಂದ ಬಂದ ಮೊತ್ತವನ್ನು ಸರ್ಕಾರೇತರ ಸಂಸ್ಥೆಯ ಉಪಯೋಗಕ್ಕೆ ನೀಡಿದ್ದಾರೆ.PTI Photo by Shashank Parade
ನೇಪಾಳದಲ್ಲಿ ಪವಿತ್ರ ಸ್ನಾನ ಆಚರಣೆ
ನೇಪಾಳದ ರಾಜಧಾನಿ ಕಠ್ಮಂಡು ವಿನಿಂದ 30 ಕಿ.ಮೀ ದೂರದಲ್ಲಿರುವ ಶಂಖು ಬಳಿಯ ಸಾಲಿನದಿಯಲ್ಲಿ ಮಹಿಳೆಯರು ಪವಿತ್ರಸ್ನಾನ ಕೈಗೊಂಡಿದ್ದಾರೆ. ಅಂದ ಹಾಗೆ , ನೇಪಾಳಿ ಕಾಂಗ್ರೆಸ್ ನ ಹಿರಿಯ ನಾಯಕ ಸುಶೀಲ್ ಕೊಯಿರಾಲ(75) ಸೋಮವಾರ ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೊರಿಯಾದಲ್ಲಿ ಕಂಡ ಹಿಮಮಯ ರಸ್ತೆ
ದಕ್ಷಿಣ ಕೊರಿಯಾದ ಗಂಗ್ ನ್ಯೂಂಗ್ ಪ್ರದೇಶದಲ್ಲಿ 1 ಮೀಟರ್ ಗೂ ಅಧಿಕ ಹಿಮಪಾತದಿಂದಾಗಿ ರಸ್ತೆಗಳು ಸಂಪೂರ್ಣ ಹಿಮಮಯವಾಗಿದೆ.