ರಷ್ಯಾ ವಿಮಾನ ದುರಂತ ಭೀಕರ ಚಿತ್ರ, ಇನ್ನಷ್ಟು
ಬೆಂಗಳೂರು, ನ.18: ರಷ್ಯಾ ವಿಮಾನವೊಂದು ಭಾನುವಾರ ರಾತ್ರಿ ಅಪಘಾತಕ್ಕೀಡಾಗಿ 50 ಮಂದಿ ಮೃತಪಟ್ಟಿರುವ ಸುದ್ದಿಯನ್ನು ಬೆಳಗ್ಗೆ ಇಲ್ಲಿ ಓದಿರುತ್ತೀರಿ. ಡೊಮೊಡೆಡೊವೊ ನಿಲ್ದಾಣದಿಂದ ಹೊರಟ ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾನವು ಟಾಟರ್ಸ್ತಾನ ಗಣರಾಜ್ಯದ ರಾಜಧಾನಿ ಕಜಾನ್ ನಿಲ್ದಾಣದಲ್ಲಿ ಭೂಸ್ಪರ್ಶದ ವೇಳೆ ದುರಂತ ಸಂಭವಿಸಿದ್ದು, ದುರಂತದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...
ವಿಮಾನದಲ್ಲಿ 44 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ರಷ್ಯಾ ತುರ್ತು ಪರಿಸ್ಥಿತಿ ಸಚಿವಾಲಯ ಪ್ರಕಟಿಸಿದೆ. ಸ್ಥಳೀಯ ಕಾಲಮಾನ ಸಂಜೆ 7.25ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.55ಕ್ಕೆ) ವಿಮಾನವು ರನ್ವೇಗೆ ಅಪ್ಪಳಿಸಿ, ಸ್ಫೋಟಗೊಂಡ ನಂತರ ಬೆಂಕಿಗೆ ಆಹುತಿಯಾಗಿದೆ ಎಂದು ರಷ್ಯಾ ತನಿಖಾ ಸಮಿತಿ ಹೇಳಿದೆ.
ರಷ್ಯಾದಲ್ಲಿ ದೇಶಿ ವಿಮಾನ ಸೇವೆಯ ಗುಣಮಟ್ಟ ಹದಗೆಟ್ಟಿದೆ. ಇದರಿಂದ ಆಡಳಿತಕ್ಕೆ ವಾಯುಯಾನ ಸುರಕ್ಷತೆ ಪ್ರಮುಖ ಸಮಸ್ಯೆಯಾಗಿದೆ. ಎರಡು ದಶಕಗಳಿಂದ ಸಣ್ಣ ಏರ್ ಲೈನ್ಸ್ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದ್ದು, ಆದರೆ ಅವು ನಿರ್ವಹಣೆ ಕೊರತೆ ಹೊಂದಿವೆ ಮತ್ತು ಕಡಿಮೆ ಅನುಭವದ ಪೈಲಟ್ ಗಳನ್ನು ಬಳಸುತ್ತಿವೆ ಎಂಬ ಕೂಗೆದ್ದಿದೆ.
ಉಳಿದಂತೆ ಇಂದಿನ ಚಿತ್ರ ಸುದ್ದಿಯಲ್ಲಿ ಮುಂಬೈನ ಫ್ಯಾಷನ್ ಶೋ, ಜರ್ಮನಿಯ ಎಫ್ 1 ಚಾಲಕ ವೆಟ್ಟೆಲ್ ಸಂಭ್ರಮ, ಅಮೃತಸರದಲ್ಲಿ ಗುರು ನಾನಕ್ ಜಯಂತಿ, ಕೋಲ್ಕತ್ತಾದಲ್ಲಿ ಬೆಂಗಾಳಿ ಬೆಡಗಿಯರು, ಕೊಯಮತ್ತೂರು, ಮದುರೈ, ಶಬರಿಮಲೆಗಳಲ್ಲಿ ಧಾರ್ಮಿಕ ಆಚರಣೆ, ಬಿಗ್ ಬಾಸ್ ಮನೆಯಲ್ಲಿ ಕರೀನಾ ಕಮಾಲ್ ಮುಂತಾದ ಚಿತ್ರಗಳಿವೆ...

ವಿಮಾನ ದುರಂತ
ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾನವು ಟಾಟರ್ಸ್ತಾನ ಗಣರಾಜ್ಯದ ರಾಜಧಾನಿ ಕಜಾನ್ ನಿಲ್ದಾಣದಲ್ಲಿ ಭೂಸ್ಪರ್ಶದ ವೇಳೆ ದುರಂತ

ವಿಮಾನ ದುರಂತ ಚಿತ್ರ
ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾನವು ಟಾಟರ್ಸ್ತಾನ ಗಣರಾಜ್ಯದ ರಾಜಧಾನಿ ಕಜಾನ್ ನಿಲ್ದಾಣದಲ್ಲಿ ಭೂಸ್ಪರ್ಶದ ವೇಳೆ ದುರಂತ

ತಮ್ಮವರಿಗಾಗಿ ಹುಡುಕಾಟ
ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾನವು ಟಾಟರ್ಸ್ತಾನ ಗಣರಾಜ್ಯದ ರಾಜಧಾನಿ ಕಜಾನ್ ನಿಲ್ದಾಣದಲ್ಲಿ ಭೂಸ್ಪರ್ಶದ ವೇಳೆ ದುರಂತ

ತುರ್ತು ವೈದ್ಯಕೀಯ ನೆರವು
ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾನವು ಟಾಟರ್ಸ್ತಾನ ಗಣರಾಜ್ಯದ ರಾಜಧಾನಿ ಕಜಾನ್ ನಿಲ್ದಾಣದಲ್ಲಿ ಭೂಸ್ಪರ್ಶದ ವೇಳೆ ದುರಂತ

ಲೋನಾವಾಲದಲ್ಲಿ ಕರೀನಾ
ಗೋರಿ ತೇರಾ ಪ್ಯಾರ್ ಮೇ ಚಿತ್ರ ಪ್ರಚಾರಕ್ಕಾಗಿ ಲೋನಾವಾಲದಲ್ಲಿರುವ ಬಿಗ್ ಬಾಸ್ ಮನೆಗೆ ಬಂದಿದ್ದ ನಟಿ ಕರೀನಾ ಕಪೂರ್ ಹಾಗೂ ಇಮ್ರಾನ್ ಖಾನ್

ಗುರ್ ಗಾಂವ್ ನಲ್ಲಿ
ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಇತ್ತೀಚಿಗೆ ನಡೆದ ಫ್ಯಾಷನ್ ಶೋವೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಶಬರಿಮಲೆಯಲ್ಲಿ
ಶಬರಿಮಲೆಯಲ್ಲಿ ಭಕ್ತರು ಮಾಲೆ ಧರಿಸಲು ಸರತಿ ಸಾಲಿನಲ್ಲಿ

ವೆಟ್ಟೆಲ್ ಸಂಭ್ರಮ
ಯುನೈಟೆಡ್ ಸ್ಟೇಟ್ಸ್ ಗ್ರಾಂಡ್ ಪ್ರಿಕ್ಸ್ ಗೆದ್ದ ಜರ್ಮನಿಯ ಎಫ್ 1 ಕಾರು ಚಾಲಕ ವೆಟ್ಟೆಲ್

ಕಾರ್ತಿಕ ಮಾಸ ಸಂಭ್ರಮ
ಕಾರ್ತಿಕ ಮಾಸದ ವಿಶೇಷ ಪೂಜಾ ಸಂಭ್ರಮದಲ್ಲಿ ಭಕ್ತರು

ತಮಿಳುನಾಡಿನಲ್ಲಿ
ಕೊಯಮತ್ತೂರಿನಲ್ಲಿ ಸುವಾಸಿನಿಯರು ವಿಶೇಷ ಸಾಮೂಹಿಕ ಪೂಜಾ ಕಾರ್ಯದಲ್ಲಿ ತೊಡಗಿದ್ದಾರೆ

ದೀಪ ಹಚ್ಚುತ್ತಿರುವ ಮುತ್ತೈದೆ
ತಮಿಳುನಾಡಿನ ಮದುರೈನಲ್ಲಿ ಕಾರ್ತಿಕ ಮಾಸದ ದೀಪ ಹಚ್ಚುತ್ತಿರುವ ಮುತ್ತೈದೆ

ಇತ್ತೀಚಿನ ಸುದ್ದಿಗಳು
ಕೋಲ್ಕತ್ತಾ :ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ರಾಣಿ ಮುಖರ್ಜಿ, ಸುಷ್ಮಿತಾ ಸೇನ್, ಬಿಪಾಶಾ ಬಸು

ಅಮೃತಸರದಲ್ಲಿ
ಅಮೃತಸರದಲ್ಲಿ ಗುರುನಾನಕ್ ಜಯಂತಿ ಅಂಗವಾಗಿ ಸಿಖ್ಖರ ಪವಿತ್ರ ದೇಗುಲ ಸ್ವರ್ಣ ಮಂದಿರ ದೀಪಾಲಂಕರದಿಂದ ಕಂಗೊಳಿಸಿತು












Click it and Unblock the Notifications