ಹೊಸ ವರ್ಷಕ್ಕೆ ಹೊಸ ನಿರ್ಧಾರ, ದುಶ್ಚಟಗಳನ್ನು ಬಿಡುವುದು ಸುಲಭ! New Year
2026 ಶುರುವಾಗಿದ್ದು ನಾವೆಲ್ಲಾ ಹೊಸ ವರ್ಷಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದೇವೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಹೊಸ ವರ್ಷಾಚರಣೆ ಭರ್ಜರಿಯಾಗಿ ನೆರವೇರಿದೆ. ಕೋಟ್ಯಂತರ ಜನರು ಹೊಸ ವರ್ಷಾಚರಣೆ ಮಾಡಿ ಖುಷಿಯಲ್ಲಿ ಕುಣಿದಾಡಿದ್ದಾರೆ. ಅಲ್ಲದೆ ಹೊಸ ವರ್ಷದಲ್ಲಿ ಏನೋ ಹೊಸ ಹುಮ್ಮಸ್ಸು ಸಿಗಲಿದೆ ಅಂತಾ ಕೂಡ ಕಾಯುತ್ತಿದ್ದಾರೆ. ಇಷ್ಟೆಲ್ಲಾ ಸಂಭ್ರಮದ ನಡುವೆಯೇ ದುಶ್ಚಟಗಳು ಹಲವರ ನೆಮ್ಮದಿಗೆ ಕೊಳ್ಳಿ ಇಟ್ಟಿರುತ್ತದೆ. ಹಾಗಾದರೆ, ದುಶ್ಚಟಗಳನ್ನು ಬಿಡುವುದು ಹೇಗೆ? ಬನ್ನಿ ತಿಳಿಯೋಣ.
ಹ್ಯಾಪಿ ನ್ಯೂ ಇಯರ್... ಹೀಗಂತ ಸಂಭ್ರಮಾಚರಣೆ ಮಾಡುವವರು ಕೈಯಲ್ಲಿ ಎಣ್ಣೆ & ಬಾಯಲ್ಲಿ ಸಿಗರೇಟ್ ಹಿಡಿದು ಸ್ಟೈಲ್ ಆಗಿ ಕುಣಿದಾಡಿರುತ್ತಾರೆ. ಅದರಲ್ಲೂ ಹೊಸ ವರ್ಷದ ದಿನ ಲಕ್ಷ ಲಕ್ಷ ಜನರು ಹೊಸದಾಗಿ ಎಣ್ಣೆ & ಸಿಗರೇಟು ಕಲಿತು ಅದರ ಮಾಯಾಜಾಲಕ್ಕೆ ಸಿಲುಕುವುದು ಗ್ಯಾರಂಟಿ. ಆದರೆ ಮುಂದೆ ಇದು ಅವರ ಭವಿಷ್ಯದ ಮೇಲೆ ಭಾರಿ ದೊಡ್ಡ ಅಡ್ಡ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ದುಶ್ಚಟಗಳಿಂದ ದೂರ ಇರಬೇಕು ಅನ್ನೋ ಮಾತನ್ನು ಹೇಳುತ್ತಾರೆ ದೊಡ್ಡವರು. ಹೀಗೆ ಇದ್ದಾಗ ಹೊಸ ವರ್ಷಕ್ಕೆ ದುಶ್ಚಟಗಳನ್ನು ಬಿಡುವುದು ಸುಲಭ...

1) ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ
ಮೊದಲಿಗೆ ನಿಮ್ಮ ಬದುಕಿನಲ್ಲಿ ದುಶ್ಚಟ ಬಿಟ್ಟು ಸುಂದರ ಜೀವನ ನಡೆಸಲು ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ. ಯೋಗ, ಜಿಮ್, ವಾಕಿಂಗ್... ಹೀಗೆ ಹಲವು ರೀತಿಯಲ್ಲಿ ನಿಮ್ಮ ಮನಸ್ಸು ಬೇರೆ ಕಡೆ ಡೈವರ್ಟ್ ಆಗುವಂತೆ ಮಾಡಿ. ತಕ್ಷಣಕ್ಕೆ ಇದು ಯಶಸ್ಸು ಕಾಣದೇ ಇದ್ದರೂ, ಹಂತ ಹಂತವಾಗಿ ಇದು ನಿಮ್ಮ ಜೀವನ ಬದಲಾಯಿಸುತ್ತದೆ.
2) ಊಟ, ನಿದ್ದೆ, ನೀರು ಅಚ್ಚುಕಟ್ಟಾಗಿರಲಿ
ನೀವು ದುಶ್ಚಟ ಬಿಟ್ಟ ತಕ್ಷಣ ನಿಮ್ಮ ದೇಹ ರಿಕವರಿ ಆಗಲ್ಲ, ಹೀಗಾಗಿ ಊಟ, ನಿದ್ದೆ ಮತ್ತು ನೀರು ಅಚ್ಚುಕಟ್ಟಾಗಿರಲಿ. ಪ್ರತಿದಿನ ಹಂತ ಹಂತವಾಗಿ ನಿಮ್ಮ ದೇಹಕ್ಕೆ ಅಗತ್ಯ ಇರುವ ಪ್ರಮಾಣದಲ್ಲಿ ನೀರು ಕುಡಿಯಿರಿ. ಆಗ ದುಶ್ಚಟಗಳ ಕಲ್ಮಶ ದೇಹದಿಂದ ಹೊರ ಹೋಗಿ ನಿಮ್ಮ ದೇಹ ಹಗುರಾಗಿ ಮನಸ್ಸು ಹಾಯಾಗಿ ಇರಲಿದೆ.
3) ದುಷ್ಟರ ಸಹವಾಸ ಬಿಟ್ಟರೆ ಒಳ್ಳೆಯದು
ಜೀವನದಲ್ಲಿ ಕಷ್ಟಕ್ಕೆ ಆಗುವವರು ಸ್ನೇಹಿತರು, ಆದರೆ ಕೆಲವು ಸ್ನೇಹಿತರಿಂದಲೇ ಜೀವನಕ್ಕೆ ಕಷ್ಟ ಎದುರಾಗುತ್ತದೆ. ಅಂತಹ ಸ್ನೇಹಿತರಿಂದ ದೂರ ಇರಿ ಮತ್ತು ದುಷ್ಟರ ಸಹವಾಸ ಬಿಟ್ಟರೆ ಒಳ್ಳೆಯದು. ಹೀಗಿದ್ದಾಗ ಮಾತ್ರ ನೀವು ದುಶ್ಚಟ ಬಿಟ್ಟು ಜೀವನದಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯ. ಸಂಜೆಯ ಸಮಯದಲ್ಲಿ ಕುಟುಂಬ ಸದಸ್ಯರ ಜೊತೆ ಖುಷಿ ಖುಷಿಯಾಗಿ ಸಮಯ ಕಳೆಯಿರಿ, ಅನಗತ್ಯವಾಗಿ ಸಂಜೆ ವೇಳೆ ಹೊರಗೆ ಹೋಗುವುದನ್ನು ತಪ್ಪಿಸಿ.
4) ವೈದ್ಯರನ್ನು ಸಂಪರ್ಕ ಮಾಡುವುದು
ದುಶ್ಚಟಗಳನ್ನು ದಿಢೀರ್ ಬಿಟ್ಟುಬಿಟ್ಟರೆ ಕೆಲವರಿಗೆ ಅದರಿಂದ ಅಡ್ಡಪರಿಣಾಮಗಳು ಶುರುವಾಗುವ ಭೀತಿ ಇರುತ್ತದೆ. ಈ ಬಗ್ಗೆ ನೀವು ಎಚ್ಚರದಿಂದ ಇರಿ, ನೀವು ದುಶ್ಚಟ ಬಿಟ್ಟಾಗ ನಿಮ್ಮ ದೇಹದಲ್ಲಿ ಏರುಪೇರು ಉಂಟಾದರೆ ತಕ್ಷಣವೇ ವೈದ್ಯರ ಸಂಪರ್ಕ ಮಾಡಿ. ಅಗತ್ಯ ಔಷಧಗಳನ್ನು ಕೊಡುತ್ತಾರೆ ಮತ್ತು ಇದರಿಂದ ನಿಮ್ಮ ದೇಹ ಸುಧಾರಿಸಲಿದೆ.
5) ಕೆಲಸದ ಒತ್ತಡವನ್ನು ನಿಭಾಯಿಸಿ
ಬಹುತೇಕರು ದುಶ್ಚಟ ಬಿಟ್ಟು ಮತ್ತೆ ಶುರು ಮಾಡುವುದೇ ಕೆಲಸದ ಒತ್ತಡಕ್ಕೆ ಎಂದು ಹೇಳುತ್ತಾರೆ. ಆದರೆ ಇದು ಸರಿಯಾದ ಮಾರ್ಗವಲ್ಲ, ಕೆಲಸದ ಒತ್ತಡವನ್ನು ಸೂಕ್ತವಾಗಿ ನಿಭಾಯಿಸಲು ನೀವು ಕಲಿಯಿರಿ. ಈ ಜಗತ್ತಿನಲ್ಲಿ ಕೆಲಸದ ಒತ್ತಡಕ್ಕೆ ಎಲ್ಲರೂ ದುಶ್ಚಟ ಮಾಡುವುದಿಲ್ಲ, ಆದರೆ ಇದೇ ರೀತಿ ನೀವು ದುಶ್ಚಟ ಮುಂದುವರಿಸಿದರೆ ಭವಿಷ್ಯದಲ್ಲಿ ನಿಮಗೇ ಕಂಟಕ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications