ಸಾವಿಗೂ ಮೊದಲು ಶಕೀಲ್ - ದಾವೂದ್ ಭೇಟಿಯಾದ ಗೌಪ್ಯ ಮನೆ ಇದು
ಇಸ್ಲಮಾಬಾದ್, ಜನವರಿ 5: ಛೋಟಾ ಶಕೀಲ್ ನಿಧನದೊಂದಿಗೆ ದಾವೂದ್ ಇಬ್ರಾಹಿಂ ಪಾಕಿಸ್ತಾನ ಬಿಡಲು ಯೋಜನೆ ರೂಪಿಸಿದ್ದಾನಾ? ಡಾನ್ ಭಾರತಕ್ಕೆ ವಾಪಾಸಾಗಲು ಯೋಚಿಸಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ದಾವೂದ್ ಮುಂದೆ ಬೇರೆ ಆಲೋಚನೆಗಳೂ ಇವೆ.
ದಾವೂದ್ ಹಲವು ಸಮಸ್ಯೆಯಿಂದ ಬಳಲುತ್ತಿದ್ದಾನೆ. ಛೋಟಾ ಶಕೀಲ್ ನನ್ನು ಕಳೆದುಕೊಂಡಿದ್ದು ಆತನಿಗೆ ಭಾರೀ ಹೊಡೆತ ನೀಡಿದೆ. ಜತೆಗೆ ಆರೋಗ್ಯವೂ ಕೈಕೊಡುತ್ತಿದೆ. ಕಳೆದ ವರ್ಷದ ಮಾರ್ಚ್ ನಲ್ಲಿ ದಾವೂದ್ ಐಸಿಯು ಕೂಡ ಸೇರಿದ್ದ. ಆದರೆ ನಂತರ ಚೇತರಿಕೆ ಕಂಡಿದ್ದ. ಮೂಲಗಳ ಪ್ರಕಾರ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಆತ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಜತೆಗೆ ಹೈಪರ್ ಟೆನ್ಷನ್ ಮತ್ತು ಮಧುಮೇಹದ ಖಾಯಿಲೆಯೂ ಆತನಿಗಿದೆ.
ಇತ್ತೀಚಿನ ಮಾಹಿತಿಗಳ ಪ್ರಕಾರ ದಾವೂದ್ ಕೇಂದ್ರ ಅಮೆರಿಕಾದ ಕೋಸ್ಟರಿಕಾ ಅಥವಾ ಡೋಮಿನಿಕ್ ರಿಪಬ್ಲಿಕ್ ದೇಶಗಳಿಗೆ ಹೋಗಲು ಯೋಜನೆ ಹಾಕಿಕೊಂಡಿದ್ದಾನೆ.

ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಜತೆ ದಾವೂದ್ ನಿರಂತರ ಸಂಪರ್ಕದಲ್ಲಿದ್ದು ಪಾಕಿಸ್ತಾನದಿಂದ ಹೊರಹೋಗದಂತೆ ಅದು ಆತನಿಗೆ ಸಲಹೆ ನೀಡಿದೆ. ಹೀಗಾಗಿ ಸದ್ಯಕ್ಕೆ ದಾವೂದ್ ನಡೆ ನಿಗೂಢವಾಗಿದೆ.
ಹಾಗೆ ನೋಡಿದರೆ ದಾವೂದ್ ನನ್ನು ಬೆನ್ನತ್ತುವುದು ಅಷ್ಟು ಸುಲಭವಲ್ಲ. ಆತ ಯಾವತ್ತೂ ಫೋನ್ ಬಳಸುವುದಿಲ್ಲ. ಆತ ಬಳಸುವುದು ಏನಿದ್ದರೂ ಸ್ಯಾಟಲೈಟ್ ಫೋನ್. ಜತೆಗೆ ಶಕೀಲ್ ಫೋನ್ ನೀಡಿದರೆ ಮಾತ್ರ ಆತ ಅದಕ್ಕೆ ಕಿವಿಗೊಡುತ್ತಿದ್ದ.
ಆತ ಎನ್ಕ್ರಿಪ್ಟೆಡ್ ಸ್ಯಾಟಲೈಟ್ ಫೋನ್ ಬಳಸುವುದರಿಂದ ತನಿಖಾ ಸಂಸ್ಥೆಗಳಿಗೂ ಅದನ್ನು ಬೆನ್ನಟ್ಟುವುದು ಕಷ್ಟವಾಗಿದೆ. ಶಕೀಲ್ ಬದುಕಿದ್ದಾಗ ಆತ ದಾವೂದ್ ಇಬ್ರಾಹಿಂನನ್ನು 6/ಎ, ಕಜವಬಾಮ್ ತನ್ಜೀಮ್, ಫೇಸ್ 5, ಡಿಫೆನ್ಸ್ ಹೌಸಿಂಗ್ ಏರಿಯಾ, ಕರಾಚಿಯಲ್ಲಿ (6/A Kjauabam Tanzeem, Phase-5, Defence Housing Area, Karachi) ಅಥವಾ ಇಸ್ಲಮಾಬಾದ್ ನ ಸೇಫ್ ಹೌಸ್ ನಲ್ಲಿ ಭೇಟಿಯಾಗುತ್ತಿದ್ದ. ಆ ಮನೆಯ ಚಿತ್ರ ಇಲ್ಲಿದೆ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications