ಕಚೇರಿಯಲ್ಲಿ ಅಮೆರಿಕ ನೂತನ ಅಧ್ಯಕ್ಷರ ಮೊದಲ ದಿನ ಹೇಗಿತ್ತು?
ಅಧ್ಯಕ್ಷ ಗಾದಿಗೆ ಏರಿದ ಮರುಗಳಿಗೆಯಲ್ಲೇ ಟ್ರಂಪ್ ಅವರು ತಮ್ಮ ಚುನಾವಣೆ ಭಾಷಣಗಳಲ್ಲಿ ಘೋಷಿಸಿದ್ದ ಒಂದೊಂದೇ ವಾಕ್ಯಗಳನ್ನು ಅಕ್ಷರಶಃ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
ಅಮೆರಿಕದಲ್ಲಿ ನೂತನ ಅಧಿಕಾರದ ಯುಗ ಆರಂಭವಾಗಿದೆ. ಡೊನಾಲ್ಡ್ ಟ್ರಂಪ್ ಅವರು ಆ ದೇಶದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಈ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷರ ಮೊದಲ ದಿನ ಹೇಗಿತ್ತು.
ಅಧಿಕಾರ ಸ್ವೀಕಾರದ ನಂತರ ಮಾಡಿದ ಭಾಷಣದಲ್ಲಿ ನಮಗೆ ಕೇವಲ ಮಾತನಾಡುವ ರಾಜಕಾರಣಿಗಳು ಬೇಡ, ಕೆಲಸ ಮಾಡಿ ತೋರಿಸುವ ರಾಜಕಾರಣಿಗಳು ಬೇಕು ಎಂದು ಹೇಳಿರುವ ಅವರ ಮಾತುಗಳು ಅವರಿಗೂ ಅನ್ವಯವಾಗುತ್ತವಲ್ಲವೇ?
ಇರಲಿ. ಆದರೆ, ಮೊದಲ ದಿನ ಟ್ರಂಪ್ ಅವರ ಕೆಲಸ ಹೇಗಿತ್ತು, ಏನಿತ್ತು? ಕಚೇರಿಯಲ್ಲಿ ಅವರು ಮೊದಲ ದಿನವನ್ನು ಹೇಗೆ ಕಳೆದರು ಎಂಬುದರ ಕೆಲವಾರು ಮಾಹಿತಿಗಳು ಇಲ್ಲಿವೆ.

ಒಬಾಮಕೇರ್ ನಲ್ಲಿ ಬದಲಾವಣೆ
ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವಾಗಲೂ ಹೇಳುತ್ತಿದ್ದಂತೆ, ಅಮೆರಿಕ ಸರ್ಕಾರದ ವಿವಿಧ ಇಲಾಖೆಗಳಿಗೆ ಹೊರೆ ಎನ್ನುವಂತಿದ್ದ, ಒಬಾಮಕೇರ್ ಎಂದೇ ಅಡ್ಡಹೆಸರು ಪಡೆದಿರುವ ವೈದ್ಯಕೀಯ ಕಾಯ್ದೆಯನ್ನು ಸರಳೀಕರಣಗೊಳಿಸುವತ್ತ ಹೆಜ್ಜೆಯಿಟ್ಟಿದ್ದಾರೆ.

ಕ್ಲೈಮೇಟ್ ಚೇಂಜ್ ನಿಯಮಕ್ಕೆ ತಿಲಾಂಜಲಿ?
ಹವಾಮಾನ ಬದಲಾವಣೆ (ಕ್ಲೈಮೇಟ್ ಚೇಂಜ್) ಕುರಿತಂತೆ ಒಬಾಮ ಸರ್ಕಾರ ರೂಪಿಸಿದ್ದ ನಿಯಮಗಳನ್ನು ಹಿಂಪಡೆದಿದ್ದಾರೆ ಟ್ರಂಪ್. ಅದರ ಜಾಗದಲ್ಲಿ ಅವರ ಮೂಲಮಂತ್ರವಾದ ಅಮೆರಿಕವನ್ನು ಮತ್ತೊಮ್ಮೆ ದೈತ್ಯ ರಾಷ್ಟ್ರವನ್ನಾಗಿಸುವ ನಿಯಮಗಳನ್ನು ಅಳವಡಿಸಲಾಗುವುದಂತೆ.

ಚರ್ಚಿಲ್ ಪ್ರತಿಮೆ ಮತ್ತೆ ಪುನರ್ ಪ್ರತಿಷ್ಠಾಪನೆ
ಅಧಿಕಾರ ಸ್ವೀಕಾರದ ನಂತರ ಮೊದಲು ವೈಟ್ ಹೌಸ್ ಗೆ ತೆರಳಿದ್ದ ಟ್ರಂಪ್, ಆನಂತರ ಓವಲ್ ಕಚೇರಿಗೆ ತೆರಳಿದರು. ಅಲ್ಲಿ ಅವರು, ತಮ್ಮ ಚೇಂಬರಿನಲ್ಲಿ ತಮಗಾಗಿ ಪ್ರತಿಷ್ಠಾಪಿಸಿರುವ ಬ್ರಿಟನ್ ನ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಪ್ರತಿಮೆ ವೀಕ್ಷಿಸಿದರು.

ಒಬಾಮ ಸಂಪ್ರದಾಯ ತಿರುಗು ಮುರುಗು
ಈ ಹಿಂದೆ, ಬರಾಕ್ ಒಬಾಮ ಅವರು ಅಧ್ಯಕ್ಷರ ಕಚೇರಿ ಕೊಠಡಿಯಲ್ಲಿದ್ದ ಚರ್ಚಿಲ್ ಪ್ರತಿಮೆಯನ್ನು ವೈಟ್ ಹೌಸ್ ನಲ್ಲೇ ಇರುವ ತಮ್ಮ ಖಾಸಗಿ ನಿವಾಸವಾದ ಟ್ರಿಟಿ ಕೊಠಡಿಗೆ ರವಾನಿಸಿದ್ದರು. ಅವರ ಆ ಕ್ರಮ ಸಂಪ್ರದಾಯವಾದಿಗಳ ಟೀಕೆಗಳಿಗೆ ಕಾರಣವಾಗಿತ್ತು.

ಲೂಥರ್ ಪ್ರತಿಮೆ ಅಬಾಧಿತ
ಆದರೆ, ಒಬಾಮ ಅವರು, ತಮ್ಮ ಕಚೇರಿಯಲ್ಲಿ ಇರಿಸಿಕೊಂಡಿದ್ದ ಅಮೆರಿಕದ ಜನಪ್ರಿಯ ನಾಯಕ ಮಾರ್ಟಿನ್ ಕಿಂಗ್ ಲೂಥರ್ ಜೂನಿಯರ್ ಅವರ ಪ್ರತಿಮೆಯನ್ನು ತಮ್ಮ ಕಚೇರಿಯಲ್ಲೇ ಇರಲು ಟ್ರಂಪ್ ಅನುವು ಮಾಡಿಕೊಟ್ಟಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications