Get Updates
Get notified of breaking news, exclusive insights, and must-see stories!

ಸರ್ವಪಕ್ಷಗಳ ರಾಷ್ಟ್ರೀಯ ಸರ್ಕಾರ ರಚನೆಗೆ ಮುಂದಾದ ಶ್ರೀಲಂಕಾ

ಕೊಲಂಬೋ,ಜುಲೈ. 30: ದಿವಾಳಿಯಾಗಿರುವ ರಾಷ್ಟ್ರವನ್ನು ಭೀಕರ ಆರ್ಥಿಕ ಹಿಂಜರಿತದಿಂದ ಹೊರತರುವಂತೆ ಸಹಾಯ ಮಾಡಲು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಸಂಸತ್ತಿನ ಎಲ್ಲ ಸದಸ್ಯರಿಗೆ ಪತ್ರ ಬರೆದು ಸರ್ವಪಕ್ಷ ರಾಷ್ಟ್ರೀಯ ಆಡಳಿತವನ್ನು ಸ್ಥಾಪಿಸಲು ಆಹ್ವಾನಿಸಿದ್ದಾರೆ.

ವ್ಯವಸ್ಥಿತ ಆರ್ಥಿಕ ಕಾರ್ಯಕ್ರಮವನ್ನು ಜಾರಿಗೆ ತರಲು ಅಗತ್ಯವಾದ ಆರಂಭಿಕ ಯೋಜನೆಗಳನ್ನು ರೂಪಿಸಬೇಕಾಗಿದೆ. ಆದರೆ ಸಂಸತ್ತು, ಶೈಕ್ಷಣಿಕ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಎಲ್ಲಾ ರಾಜಕೀಯ ಪಕ್ಷಗಳ ಒಳಗೊಳ್ಳುವಿಕೆಯಿಂದ ಮಾತ್ರ ಇದನ್ನು ಕೈಗೊಳ್ಳಬಹುದಾಗಿದೆ. ಜೊತೆಗೆ, ಸಂವಿಧಾನದ 19ನೇ ತಿದ್ದುಪಡಿಯನ್ನು ಪುನಃ ಪರಿಚಯಿಸುವ ಬಗ್ಗೆ ಆಸಕ್ತ ಪಕ್ಷಗಳೊಂದಿಗೆ ಚರ್ಚೆ ನಡೆಸಲು ಅಧ್ಯಕ್ಷ ವಿಕ್ರಮ ಸಿಂಘೆ ಅವರು ಸಲಹೆ ನೀಡಿದ್ದಾರೆ.

ದೇಶವು ಇಂದು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಸೃಷ್ಟಿಸಲ್ಪಟ್ಟ ರಾಜಕೀಯ ಮತ್ತು ಸಾಮಾಜಿಕ ಅಶಾಂತಿಯನ್ನು ಕ್ರಮೇಣವಾಗಿ ಸಾಮಾನ್ಯ ಸ್ಥಿತಿಗೆ ತರಲು ಸರ್ಕಾರವು ಪ್ರಸ್ತುತ ಮಹತ್ತರವಾದ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದೆ ಎಂದು ವಿಕ್ರಮಸಿಂಘೆ ಪತ್ರದಲ್ಲಿ ತಿಳಿಸಿದ್ದಾರೆ.

ಸಂಸತ್ತನ್ನು ಕಾರ್ಯಕಾರಿ ಅಧ್ಯಕ್ಷರ ಮೇಲೆ ಇರಿಸುವ ಮೂಲಕ 19A ತಿದ್ದುಪಡಿಯನ್ನು 2015 ರಲ್ಲಿ ಅಂಗೀಕರಿಸಲಾಯಿತು. ಇದು ಅಧ್ಯಕ್ಷೀಯ ವ್ಯಾಪ್ತಿಯನ್ನು ಕಡಿಮೆಗೊಳಿಸಿತು. 2015 ರಲ್ಲಿ ವಿಕ್ರಮಸಿಂಘೆ ಅವರು 19ನೇ ತಿದ್ದುಪಡಿಯ ಪ್ರಾಥಮಿಕ ಪ್ರಾಯೋಜಕರಾಗಿ ಸೇವೆ ಸಲ್ಲಿಸಿದರು. ಆದರೆ 2019 ರ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋಟಬಯ ರಾಜಪಕ್ಸೆ ಗೆದ್ದ ನಂತರ 19A ಅನ್ನು ರದ್ದುಗೊಳಿಸಲಾಯಿತು.

 ಎಸ್‌ಎಲ್‌ಪಿಪಿಯಿಂದ ಹೆಚ್ಚಿನ ಮತಗಳು

ಎಸ್‌ಎಲ್‌ಪಿಪಿಯಿಂದ ಹೆಚ್ಚಿನ ಮತಗಳು

ಜುಲೈ 20 ರಂದು ಶ್ರೀಲಂಕಾದ ಸಂಸದರು ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರಾಗಿ ದ್ವೀಪ ರಾಷ್ಟ್ರವನ್ನು ಮುನ್ನಡೆಸಲು ಆಯ್ಕೆ ಮಾಡಿದರು. ಹೆಚ್ಚಿನ ಮತಗಳು ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ಸದಸ್ಯರಿಂದ ಬಂದವು. ಇದು ರಾಜಪಕ್ಸೆ ಅವರ ಸೋಲಿಗೆ ಕಾರಣವಾಯಿತು.

 ಕ್ಯಾಬಿನೆಟ್ 30 ಜನರಿಗೆ ಅವಕಾಶ

ಕ್ಯಾಬಿನೆಟ್ 30 ಜನರಿಗೆ ಅವಕಾಶ

ಶುಕ್ರವಾರ ಸಚಿವ ಸಂಪುಟಕ್ಕೆ ಎಸ್‌ಎಲ್‌ಪಿಪಿಯೇತರ ಇಬ್ಬರು ಶಾಸಕರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಸಂವಿಧಾನದ ಪ್ರಕಾರ, ಕ್ಯಾಬಿನೆಟ್ 30 ಜನರನ್ನು ಒಳಗೊಳ್ಳಬಹುದಾಗಿದೆ. 73 ವರ್ಷ ವಯಸ್ಸಿನ ಅಧ್ಯಕ್ಷ ರಾಜಪಕ್ಸೆ ಅವರು ಮೊದಲು ಸಿಂಗಾಪುರಕ್ಕೆ ಮತ್ತು ನಂತರ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ನಂತರ ಅವರ ಅವಧಿಯನ್ನು ಪೂರ್ಣಗೊಳಿಸಲು ವಿಕ್ರಮಸಿಂಘೆ ಅವರನ್ನು ಆಯ್ಕೆ ಮಾಡಲಾಯಿತು. ರಾಜಪಕ್ಸೆ ಅವರು 1948 ರ ನಂತರದ ದೊಡ್ಡ ಆರ್ಥಿಕ ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ ಎಂದು ರಾಷ್ಟ್ರದ ಜನರು ಆರೋಪಿಸಿದ್ದಾರೆ.

 ವಿದೇಶಿ ಸಾಲವನ್ನು ಪಾವತಿಸದೆ ದಿವಾಳಿ

ವಿದೇಶಿ ಸಾಲವನ್ನು ಪಾವತಿಸದೆ ದಿವಾಳಿ

ಗೋಟಬಯ ರಾಜಪಕ್ಸೆ ಅವರು ಮೇ ಮಧ್ಯದಲ್ಲಿ ವಿಕ್ರಮಸಿಂಘೆ ಅವರನ್ನು ಪ್ರಧಾನಿಯಾಗಿ ನೇಮಿಸಿದರು. ರಾಜಪಕ್ಸೆ ವಿರುದ್ಧ ವ್ಯಾಪಕ ಪ್ರತಿಭಟನೆಗೆ ಕಾರಣವಾದ ಇಂಧನ, ಅಡುಗೆ ಅನಿಲ ಮತ್ತು ವಿದ್ಯುತ್ ಕೊರತೆ ಸಮಸ್ಯೆಗಳಿಗೆ ತ್ವರಿತ ಪರಿಹಾರಗಳನ್ನು ಒದಗಿಸುವ ಮೂಲಕ ಆರ್ಥಿಕತೆಯನ್ನು ಪುನರಾರಂಭಿಸುವ ಜವಾಬ್ದಾರಿಯನ್ನು ವಿಕ್ರಮಸಿಂಘೆ ಅವರಿಗೆ ನೀಡಲಾಯಿತು. ಏಪ್ರಿಲ್ ಮಧ್ಯದಲ್ಲಿ ಸರ್ಕಾರವು ತನ್ನ ವಿದೇಶಿ ಸಾಲವನ್ನು ಪಾವತಿಸದೆ ದಿವಾಳಿತನವನ್ನು ಘೋಷಿಸಿತು.

 ಎಸ್‌ಎಲ್‌ಎಫ್‌ಪಿ ಜೊತೆ ವಿಕ್ರಮಸಿಂಘೆ ಮಾತುಕತೆ

ಎಸ್‌ಎಲ್‌ಎಫ್‌ಪಿ ಜೊತೆ ವಿಕ್ರಮಸಿಂಘೆ ಮಾತುಕತೆ

ವಿಕ್ರಮಸಿಂಘೆ ಅವರ ಪ್ರಕಾರ, ಜೂನ್‌ನಲ್ಲಿ ಭಾರತೀಯ ನೆರವಿನ ಭಾಗವಾಗಿ ಅಂತಿಮ ಸಹಾಯಹಸ್ತದ ಸರಕುಗಳು ರಾಷ್ಟ್ರಕ್ಕೆ ಬಂದ ನಂತರ ಪೆಟ್ರೋಲ್ ತೀವ್ರ ಕೊರತೆಯನ್ನು ಎದುರಿಸಿತು ಎಂದು ತಿಳಿಸಿದರು. ಮಾಜಿ ಅಧ್ಯಕ್ಷ ಮಿಯಾತ್ರಿಪಾಲ ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್‌ಎಲ್‌ಎಫ್‌ಪಿ) ಜೊತೆ ವಿಕ್ರಮಸಿಂಘೆ ಗುರುವಾರ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ, ಪ್ರಮುಖ ಪ್ರತಿಪಕ್ಷ ಸಮಗಿ ಜನ ಬಲವೇಗಯ (ಎಸ್‌ಜೆಬಿ) ಶ್ರೀಲಂಕಾ ಫೆಡರಲ್ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+