ಶ್ರೀಲಂಕಾದ ಕೋಮುಗಲಭೆ, ತುರ್ತು ಪರಿಸ್ಥಿತಿ ನಿರ್ಮಾಣ
ಕೊಲಂಬೋ, ಮಾರ್ಚ್ 06: ಬೌದ್ಧ ಧರ್ಮೀಯರು ಹಾಗೂ ಮುಸ್ಲಿಮರ ನಡುವೆ ಆರಂಭವಾದ ಗಲಭೆ, ಕಿತ್ತಾಟ ಈಗ ದೇಶದೆಲ್ಲೆಡೆ ವ್ಯಾಪ್ತಿಸಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಕ್ಯಾಂಡಿಯಲ್ಲಿ ಬೌದ್ಧ ಧರ್ಮೀಯರೊಬ್ಬರನ್ನು ಕೊಲೆಗೆ ಮುಸ್ಲಿಮರು ಕಾರಣ ಎಂದು ಆರೋಪಿಸಿ ಶುರುವಾದ ಹಿಂಸಾಚಾರ, ಎಲ್ಲೆಡೆ ವ್ಯಾಪಿಸಿದೆ. 10 ದಿನಗಳ ದೇಶವ್ಯಾಪಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಶ್ರೀಲಂಕಾದಲ್ಲಿ 2 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ ಶೇ10 ರಷ್ಟು ಮುಸ್ಲಿಮ್ ಜನಾಂಗದವರಿದ್ದಾರೆ. ಶೇ 75ರಷ್ಟು ಬೌದ್ಧ ಧರ್ಮೀಯರಿದ್ದಾರೆ. ಶೇ 13ರಷ್ಟು ಹಿಂದೂಗಳಿದ್ದಾರೆ.
2018ರ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮುಸ್ಲಿಮರಿಗೆ ಸೇರಿದ ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸಲಾಯಿತು. ಬಲವಂತದ ಮತಾಂತರ ವಿಷಯ ಮುಂದಿಟ್ಟುಕೊಂಡು ಮೂಲಭೂತವಾದಿಗಳು ಹಿಂಸಾಚಾರಕ್ಕೆ ಇನ್ನಷ್ಟು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ.












Click it and Unblock the Notifications