ಸೌರ ಮಂಡಲಕ್ಕೆ ಬಂದ 'ಹೊಸ ಅತಿಥಿ'ಯ ಕುತೂಹಲಕಾರಿ ಕಥೆ
ವಾಷಿಂಗ್ಟನ್, ನವೆಂಬರ್ 25: ಸೌರ ಮಂಡಲದೊಳಗೆ ಹೊಸ ಅತಿಥಿಯ ಆಗಮನವಾಗಿದೆ. ಆತನಿಗೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- 'ನಾಸಾ'ದ ವಿಜ್ಞಾನಿಗಳು ಇಟ್ಟ ಹೆಸರು ಕ್ಷುದ್ರಗ್ರಹ 1I/2017 U1 ಅಥವಾ 'Oumuamua (ಒಮುಮಾಮುವಾ). ಒಮುಮಾಮುವಾ ಅಂದರೆ ಹವಾಯಿ ಭಾಷೆಯಲ್ಲಿ 'ಬಲು ದೂರದಿಂದ ಬಂದ ಚೊಚ್ಚಲ ಸಂದೇಶ.'
ಈತನ ವಿಶೇಷ ಏನು ಗೊತ್ತಾ, ಈತ ವಿಜ್ಞಾನಿಗಳಿಗೆ ಗೊತ್ತಿರುವ ಹಾಗೆ ನಮ್ಮ ಸೌರ ಮಂಡಲದೊಳಕ್ಕೆ ಬೇರೆ ಸೌರ ಮಂಡಲದಿಂದ ಬಂದ ಮೊದಲ ಅತಿಥಿ. ಈ ಕಾರಣಕ್ಕೆ ವಿಜ್ಞಾನಿಗಳ ಅಚ್ಚರಿಯ ಕಣ್ಣಿಗೆ ಈತ ಆಹಾರವಾಗಿದ್ದಾನೆ.
ಅಕ್ಟೋಬರ್ 19ರಂದು ಈತನನ್ನು ಹವಾಯಿಯಲ್ಲಿರುವ PAN STARRS1 ದೂರದರ್ಶಕದ ಮೂಲಕ ಪತ್ತೆ ಹಚ್ಚಲಾಯಿತು. ಅಲ್ಲಿಂದ ವಿಜ್ಞಾನಿಗಳು ಈತನ ಬಗ್ಗೆ ತುಂಬಾ ಅಧ್ಯಯನಗಳನ್ನು ನಡೆಸಿದ್ದಾರೆ. ಇನ್ನೂ ನಡೆಸುತ್ತಲೇ ಇದ್ದಾರೆ.

ಮಹತ್ವದ ಸಂಶೋಧನೆ
ಈತ ನಡೆದು ಬಂದ ದಾರಿ, ವೇಗ ನೋಡಿ ವಿಜ್ಞಾನಿಗಳು ಹೊರಗಿನ ಸೌರ ಮಂಡಲದಿಂದ ಈತ ನಮ್ಮ ಸೌರ ಮಂಡಲದೊಳಕ್ಕೆ ಗಡಿ ದಾಟಿ ಬಂದಿದ್ದಾನೆ ಎಂದು ವಿಶ್ಲೇಷಿಸಿದ್ದಾರೆ. ಹಾ.. ಅಷ್ಟೇ ಅಲ್ಲ ವೈಜ್ಞಾನಿಕವಾಗಿ ಇದೊಂದು ಮಹತ್ವದ ಸಂಶೋಧನೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ವಿಚಿತ್ರ ಆಕಾರ
ಬೇರೆ ಸೌರ ಮಂಡಲದಿಂದ ಪ್ರತ್ಯೇಕಗೊಂಡು, ಸಾವಿರಾರು ವರ್ಷ ಕ್ರಮಿಸಿ ಈತ ನಮ್ಮ ಸೌರ ಮಂಡಲದೊಳಗೆ ಬಂದಿದ್ದಾನೆ. 400 ಮೀಟರ್ ಉದ್ದ, 40 ಮೀಟರ್ ನಷ್ಟು ಅಗಲವಾಗಿರುವ ವಸ್ತು ಈತನಾಗಿದ್ದು, ವಿಚಿತ್ರ ಆಕಾರದಲ್ಲಿದ್ದಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಗಿಲ್ಲ ಸಮಸ್ಯೆ
ನಮ್ಮ ಸೌರ ಮಂಡಲದಲ್ಲಿರುವ ಕ್ಷುದ್ರ ಗ್ರಹಗಳಿಗಿಂತ ಈತ ಭಿನ್ನನಾಗಿದ್ದು, ಈತನಿಂದ ಭೂಮಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ವಿಜ್ಞಾನಿಗಳ ಹೇಳಿಕೆ.
ಈತ ಕೆಂಪು ಬಣ್ಣದಲ್ಲಿದ್ದಾನೆ. ದೀರ್ಘ ಕಾಲ ಸೌರ ಮಂಡಲದಲ್ಲಿದ್ದು, ಬಹುಶಃ ನಮ್ಮ ಸೂರ್ಯ ಮತ್ತು ಬೇರೆ ಸೌರ ಮಂಡಲದ ಸೂರ್ಯನ ಬೆಳಕಿನಿಂದ ಹಾಗಾಗಿರಬಹುದು ಎನ್ನುವುದು ವಿಜ್ಞಾನಿಗಳ ಅಂಬೋಣ. ಆದರೆ ಈತನ ಗಾತ್ರದ ಬಗ್ಗೆ ವಿಜ್ಞಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು ಈ ಗಾತ್ರ ಹೇಗೆ ಬಂತು ಎಂದು ಅಧ್ಯಯನ ನಡೆಸುತ್ತಿದ್ದಾರೆ.
ಮುಂದುವರಿದ ಅಧ್ಯಯನ
ಸ್ಪಿಟ್ಜರ್, ಹಬಲ್ ಸ್ಪೇಸ್ ಟೆಲಿಸ್ಪೋಪ್ ಮೊದಲಾದುವನ್ನು ಆತನತ್ತ ತಿರುಗಿಸಿ ಗಾತ್ರ, ರಚನೆಯ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುತ್ತಿದ್ದಾರೆ.
ಸದ್ಯಕ್ಕಿಷ್ಟು ಮಾಹಿತಿಗಳು ಸಿಕ್ಕಿವೆ. ಮುಂದೆ ಯಾವ ಮಾಹಿತಿಗಳು ಸಿಗುತ್ತವೆ ನೋಡೋಣ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications