80 ಗಿಡುಗಗಳ ಜೊತೆ ವಿಮಾನದಲ್ಲಿ ರಾಜಕುಮಾರನ ಪ್ರಯಾಣ: ಹೀಗೂ ಉಂಟೇ!
ಸೌದಿ ಅರೇಬಿಯಾದ ರಾಜಕುಮಾರ, ಒಂದಲ್ಲಾ,. ಎರಡಲ್ಲಾ ಬರೋಬ್ಬರಿ 80 ಗಿಡುಗಗಳ ಜೊತೆ ವಿಮಾನದಲ್ಲಿ ಪ್ರಯಾಣಸಿದ್ದ ಎನ್ನುವ ಸುದ್ದಿ ಮತ್ತು ಫೋಟೋ ಈಗ ಸಾಮಾಜಿಕ ತಾಣದಲ್ಲಿ ಸುದ್ದಿ ಮಾಡುತ್ತಿದೆ.
ವಿಮಾನದಲ್ಲಿ ಪ್ರಯಾಣಿಸುವುದು ಒಂದು ಮುದ ನೀಡುವ ಅನುಭವ, ಆದರೆ ಆಗಸದಲ್ಲಿ ಲೋಹದ ಹಕ್ಕಿಯ ಜೊತೆ ಹಾರುತ್ತಿರಬೇಕಾದರೆ ಗಿಡುಗಗಳೂ ಜೊತೆಗಿದ್ದರೆ ಹೇಗಿರಬಹುದು ಅನುಭವ?
ದುಡ್ಡಿನ ಸುಪ್ಪತ್ತಿಗೆಯಲ್ಲೇ ಮಲುಗುವಷ್ಟು ಆಗರ್ಭ ಶ್ರೀಮಂತರಾಗಿರುವ ಸೌದಿ ಅರೇಬಿಯಾದ ರಾಜಮನೆತನದ ' ರಾಜಕುಮಾರ' ನೊಬ್ಬ, ಒಂದಲ್ಲಾ,. ಎರಡಲ್ಲಾ ಬರೋಬ್ಬರಿ 80 ಗಿಡುಗಗಳ ಜೊತೆ ವಿಮಾನದಲ್ಲಿ ಪ್ರಯಾಣಸಿದ್ದ ಎನ್ನುವ ಸುದ್ದಿ ಮತ್ತು ಫೋಟೋ ಈಗ ಸಾಮಾಜಿಕ ತಾಣದಲ್ಲಿ ಸುದ್ದಿ ಮಾಡುತ್ತಿದೆ.
ಇದೊಂದು ತೀರಾ ಅಪರೂಪದ ಘಟನೆಯೆಂದು ಅನಿಸಿದರೂ, ಮಧ್ಯಪ್ರಾಚ್ಯ ಭಾಗದಲ್ಲಿ ತರಬೇತಿ ನೀಡಿರುವ ಗಿಡುಗಗಳನ್ನು (ಫಾಲ್ಕನ್ಸ್) ಜೊತೆಗೆ ಕರೆದುಕೊಂಡು ಹೋಗುವುದು, ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮತ್ತು ರಾಜಮನೆತನಕ್ಕೆ ಪ್ರತಿಷ್ಠೆಯ ವಿಷಯವಂತೆ. (ಸೌದಿ ಯುವರಾಜನಿಗೆ ಗಲ್ಲು ಶಿಕ್ಷೆ)

ರೆಡ್ಡಿಟ್ ಅಂತರ್ಜಾಲ ಬಿಡುಗಡೆ ಮಾಡಿರುವ ಫೋಟೋ ಅವಲೋಕಿಸುವುದಾದರೆ, 80 ಗಿಡುಗಗಳನ್ನ ಹಾರಲಾಗದಂತೆ ರೆಕ್ಕೆಗಳನ್ನ ಕಟ್ಟಿ ವಿಮಾನದ ಸೀಟಿನ ಮೇಲೆ ಕೂರಿಸಲಾಗಿದೆ.
ಅರಬ್ ಗಣರಾಜ್ಯ, ವಿಮಾನದಲ್ಲಿ ಗಿಡುಗಗಳನ್ನು ಸಾಗಿಸಲು ' ಫಾರೆಸ್ಟ್ ಗ್ರೀನ್' ಎನ್ನುವ ಹೆಸರಿನ ವಿಶೇಷ ಪಾಸ್ಪೋರ್ಟ್ ಇದಕ್ಕಾಗಿಯೇ ವ್ಯವಸ್ಥೆ ಮಾಡಿದೆಯಂತೆ. ಈ ಪಾಸ್ಪೋರ್ಟ್ ಇದ್ದರೆ ಬಹ್ರೈನ್, ಕುವೈಟ್, ಒಮನ್, ಕತಾರ್, ಸೌದಿ ಅರೇಬಿಯಾ, ಪಾಕಿಸ್ತಾನ, ಸಿರಿಯಾ ಮತ್ತು ಮೊರೊಕ್ಕೊ ದೇಶಕ್ಕೆ ಪ್ರಯಾಣಿಸಬಹುದು.
ಗಿಡುಗ ಅರಬ್ ಗಣರಾಜ್ಯದ ರಾಷ್ಟ್ರೀಯ ಪಕ್ಷಿಯಾಗಿದ್ದು, ಗಿಡುಗಗಳಿಗಾಗಿಯೇ ಅಲ್ಲಿನ ಸರಕಾರ ತನ್ನ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ವಿಶೇಷ ಕೌಂಟರ್ ಅನ್ನು ತೆರೆದಿರುತ್ತದೆ ಎಂದು ಬ್ಯುಸಿನೆಸ್ ಇನ್ಸೈಡರ್ ಅಂತರ್ಜಾಲ ವರದಿ ಮಾಡಿದೆ.
ಸೌದಿಯ ರಾಜಕುಮಾರ ಎಂಬತ್ತು ಗಿಡುಗಗಳ ಜೊತೆ ಕತಾರ್ ಏರ್ವೇಸ್ ನಲ್ಲಿ ಸೋಮವಾರ ಬೆಳಗ್ಗೆ (ಜ 30) ಪ್ರಯಾಣಿಸುತ್ತಿದ್ದ ಎಂದು ಹೇಳಲಾಗುತ್ತಿದ್ದರೂ, ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಒಂದು ಗಿಡುಗಗಳನ್ನು ವಿಮಾನದಲ್ಲಿ ಸಾಗಿಸಲು 200-500 ಡಾಲರ್ ವರೆಗೆ ವ್ಯಯಿಸಬೇಕಾಗುತ್ತದೆ.
80 ಗಿಡುಗಗಳಿಗೆ ತಗಲುವ ವೆಚ್ಚವನ್ನು ಸೌದಿಯ ರಾಜಕುಮಾರ ಪಾವತಿಸಿದ್ದ ಎನ್ನುವ ಸುದ್ದಿಯಿದೆ. (ಚಿತ್ರಕೃಪೆ: ರೆಡ್ಡಿಟ್)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications