ಇರಾನ್ ಮಿತ್ರ ರಾಷ್ಟ್ರ ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷಿಸುವ ಮೂಲಕ ಸಂಚಲನ
ರಷ್ಯಾ ಶುಕ್ರವಾರ ತನ್ನ ಕಪುಸ್ಟಿನ್ ಯಾರ್ ಶ್ರೇಣಿಯಿಂದ ಅತ್ಯಂತ ರಹಸ್ಯವಾದ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM) ಅನ್ನು ಪರೀಕ್ಷಿಸಿದೆ ಎಂದು ವರದಿಯಾಗಿದೆ.
ರಷ್ಯಾದ ಮಾಧ್ಯಮ ಆರ್ಟಿ ಪ್ರಕಾರ, ಈ ಕ್ಷಿಪಣಿ ಪರಮಾಣು ದಾಳಿಯ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ರಕ್ಷಣಾ ಸಚಿವಾಲಯ ಈ ಕ್ಷಿಪಣಿ ದಾಳಿಯನ್ನು ಖಚಿತ ಪಡಿಸಿದೆ. ಈ ಕ್ಷಿಪಣಿಯಿಂ ರಷ್ಯಾದ ಭಧ್ರತೆ ಮತ್ತಷ್ಟು ಬಲಗೊಳ್ಳಲು ಸಹಾಯ ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ. ರಷ್ಯಾದ ಈ ಪರೀಕ್ಷೆಯಿಂದಾಗಿ ಉಕ್ರೇನ್ ಮತ್ತು ಅಮೆರಿಕ ಹೆಚ್ಚು ಉದ್ವಿಗ್ನಗೊಂಡಿವೆ. ಇದು ಇಸ್ರೇಲ್ನ ಆತಂಕದ ವಿಷಯವೂ ಆಗಿದೆ. ಏಕೆಂದರೆ ರಷ್ಯಾ ಮತ್ತು ಇರಾನ್ ಆಪ್ತ ಸ್ನೇಹಿತ.

ಏನಿದೆ ವಿಶೇಷತೆ?
ಈ ಮಿಸೈಲ್ ಘನ ಇಂಧನ ಕ್ಷಿಪಣಿಯಾಗಿದ್ದು, ಥರ್ಮೋ-ನ್ಯೂಕ್ಲಿಯರ್ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ನೆಲದ ಮೇಲೆ ಅಥವಾ ಚಲಿಸುವ ವಾಹನದ ಮೇಲೆ ಯಾವುದೇ ಸ್ಥಳದಲ್ಲಿ ಇಡಬಹುದಾಗಿದೆ. ಆದಾಗ್ಯೂ, ಪ್ರಸ್ತುತ ಇದರ ಸಾಮರ್ಥ್ಯಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ರಷ್ಯಾ ತನ್ನ ಮೊದಲ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಗಳ ರೆಜಿಮೆಂಟ್ ಅನ್ನು ನಿಯೋಜಿಸಿತು. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅಧ್ಯಕ್ಷ ಪುಟಿನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ರಷ್ಯಾ ಈ ಕ್ಷಿಪಣಿಯನ್ನು ಎಲ್ಲಿ ನಿಯೋಜಿಸಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ರಷ್ಯಾದ ಹೊಸ ಪೀಳಿಗೆಯ ಪರಮಾಣು ಶಸ್ತ್ರಾಸ್ತ್ರಗಳು ಪ್ರಪಂಚದ ಯಾವುದೇ ಮೂಲೆಯ ಮೇಲೆ ದಾಳಿ ನಡೆಸಬಲ್ಲದು. ಇದು ಯಾವುದೇ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಮತ್ತು ಭೇದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಯಾವುದೇ ದೇಶವು ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ.
ದ್ರವ ಇಂಧನ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಮೊದಲು ಇಂಧನ ತುಂಬಿಸಬೇಕು, ಇದು ಹಲವು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದೇ ಸಮಯದಲ್ಲಿ, ಘನ ಇಂಧನ ಕ್ಷಿಪಣಿಗಳನ್ನು ವೇಗವಾಗಿ ಹಾರಿಸಬಹುದು. ದ್ರವ ಇಂಧನದ ಬದಲಿಗೆ ಘನ ಇಂಧನವನ್ನು ಬಳಸಲಾಗುತ್ತಿತ್ತು. ಅಲ್ ಜಜೀರಾ ವರದಿಯ ಪ್ರಕಾರ ಘನ ಇಂಧನದಿಂದ ಚಲಿಸುವ ಕ್ಷಿಪಣಿಗಳು ಸುರಕ್ಷಿತವಾಗಿರುತ್ತವೆ.
ಹೈಪರ್ಸಾನಿಕ್ ಎಂದರೇನು?
ಹೈಪರ್ಸಾನಿಕ್ ಮಿಸೈಲ್ ಎಂದರೆ ಶಬ್ದದ ವೇಗಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸುವ ಮಿಸೈಲ್. ಈ ಮಿಸೈಲ್ ಗಂಟೆಗೆ 5000ರಿಂದ 12 ಸಾವಿರ ಕಿಲೋಮೀಟರ್ ವೇಗದಲ್ಲಿ ಉಡಾವಣೆ ಆಗುತ್ತವೆ. ವೇಗವಾದ ಉಡಾವಣೆ ಹಾಗೂ ಕಡಿಮೆ ಎತ್ತರದಲ್ಲಿ ಹಾರುವುದರಿಂದ ಇವುಗಳನ್ನು ಯಾವುದೆ ರಡಾರ್ ಪತ್ತೆ ಹೆಚ್ಚುವುದು ಕಷ್ಟ.
ಕಳೆದ ವರ್ಷ ಅಕ್ಟೋಬರ್ನಲ್ಲಿಯೂ ಸಹ ರಷ್ಯಾ ಪರಮಾಣು ಬಾಂಬ್ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಬುರೆವೆಸ್ಟ್ನಿಕ್ ಕ್ಷಿಪಣಿಯನ್ನು ಪರೀಕ್ಷಿಸಿತ್ತು. ಈ ಪರಮಾಣು ಕ್ಷಿಪಣಿ ಸಾವಿರಾರು ಮೈಲುಗಳ ದೂರದಿಂದಲೂ ದಾಳಿ ಮಾಡಬಲ್ಲದು ಎಂದು ಪುಟಿನ್ ಹೇಳಿದ್ದರು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications