ವಿಶ್ವದಾಖಲೆ : 350 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಪಿಂಕ್ ಡೈಮಂಡ್ ಮಾರಾಟ
ಕ್ರಿಸ್ಟೀಸ್ ಸಂಸ್ಥೆಯು 'ಗುಲಾಬಿ ಬಣ್ಣದ ಪರಂಪರೆ'ಯ ವಜ್ರವೊಂದನ್ನು ಜಿನೀವಾದಲ್ಲಿ ಮಂಗಳವಾರ ದಾಖಲೆ ಮೊತ್ತಕ್ಕೆ ಹರಾಜು ಹಾಕಿದೆ. ಅದರ ಶುಲ್ಕವೂ ಸೇರಿ $ 50 ಮಿಲಿಯನ್ ಗೂ ಹೆಚ್ಚು ಮೊತ್ತಕ್ಕೆ ಹರಾಜು ಹಾಕಲಾಗಿದೆ. ಈ ಮೂಲಕ ಗುಲಾಬಿ ಬಣ್ಣದ ವಜ್ರವೊಂದು ತಲಾ ಕ್ಯಾರೆಟ್ ಲೆಕ್ಕದಲ್ಲಿ ವಿಶ್ವ ದಾಖಲೆ ಮೊತ್ತಕ್ಕೆ ಹರಾಜಾಗಿದೆ.
ಕ್ರಿಸ್ಟೀಸ್ ಮಾತನಾಡಿ, ಹೆಸರಾಂತ ಆಭರಣಕಾರ ಹ್ಯಾರಿ ವಿನ್ ಸ್ಟನ್ ಈ ವಜ್ರ ಖರೀದಿಸಿದವರು ಎಂದು ತಿಳಿಸಲಾಗಿದೆ. ಹರಾಜು ಹಾಕಿದ ಸಂಸ್ಥೆಯು 19 ಕ್ಯಾರೆಟ್ ನ ಚೌಕಾಕಾರದ ಕತ್ತರಿಸಿದ ಈ ವಜ್ರಕ್ಕೆ 30ರಿಂದ 50 ಮಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹ ಆಗಬಹುದು ಎಂದು ಅಂದಾಜು ಮಾಡಿತ್ತು.
ಇತರ ಶುಲ್ಕಗಳೂ ಸೇರಿದಂತೆ ಈ ಗುಲಾಬಿ ಬಣ್ಣದ ವಜ್ರವು $ 50.375 ಮಿಲಿಯನ್ ಗೆ ಹರಾಜು ಆಗಿದೆ ಎಂದು ಹೇಳಿದ್ದಾರೆ. ಒಂದು ಕಾಲಕ್ಕೆ ಈ ವಜ್ರವು ಒಪ್ಪೆನ್ ಹೈಮರ್ ವಜ್ರ ಕುಟುಂಬಕ್ಕೆ ಸೇರಿತ್ತು. ರಾಸಾಯನಿಕವಾಗಿ ಶುದ್ಧವಾಗಿರುವ ಇದರಲ್ಲಿ ಸ್ವಲ್ಪ ಮಟ್ಟಿಗೆ ನೈಟ್ರೋಜನ್ ಇದೆ ಎಂದು ಕ್ರಿಸ್ಟೀಸ್ ತಿಳಿಸಿದೆ.

ಕ್ರಿಸ್ಟೀಸ್ ನ ಅಂತರರಾಷ್ಟ್ರೀಯ ಜ್ಯುವೆಲ್ಲರಿ ಮುಖ್ಯಸ್ಥ ರಾಹುಲ್ ಕಡಕಿಯಾ ಮಾತನಾಡಿ, ಸಂಸ್ಥೆಯ 251 ವರ್ಷಗಳ ಇತಿಹಾಸದಲ್ಲಿ 10 ಕ್ಯಾರೆಟ್ ಗಿಂತ ಹೆಚ್ಚಿನ ತೂಕದ ಈ ಬಣ್ಣದ ನಾಲ್ಕು ವಜ್ರಗಳನ್ನು ಮಾತ್ರ ಹರಾಜು ಹಾಕಲಾಗಿದೆ ಎಂದು ಹೇಳಿದ್ದಾರೆ.
'ಗುಲಾಬಿ ಬಣ್ಣದ ಪರಂಪರೆಯ' ಈ ವಜ್ರ ದಾಖಲೆ ಬೆಲೆಯಾದ $ 50 ಮಿಲಿಯನ್ ಗೆ ಮಾರಾಟವಾಗಿದೆ. ಅಂದರೆ ಪ್ರತಿ ಕ್ಯಾರೆಟ್ ಗೆ $ 2.6 ಮಿಲಿಯನ್ ನ ವಿಶ್ವ ದಾಖಲೆ ಮೊತ್ತ ಸಿಕ್ಕಂತಾಯಿತು. ಈ ಹಿಂದಿನ ದಾಖಲೆ ಇರುವುದು ಪ್ರತಿ ಕ್ಯಾರೆಟ್ ಗೆ $ 2.1 ಮಿಲಿಯನ್. ಆದರೆ ವಜ್ರವು 50 ಕ್ಯಾರೆಟ್ ಗಿಂತ ಹೆಚ್ಚಿತ್ತು ಎಂದು ಮಾಹಿತಿ ನೀಡಿದ್ದಾರೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications