ಪತಿಯ ಅಕ್ರಮ ಸಂಬಂಧ ಬಯಲುಮಾಡಿದ ಗಿಣಿರಾಮ!
ಕುವೈತ್, ಅಕ್ಟೋಬರ್, 27: ಮನೆಯಲ್ಲಿ ಸಾಕಿಕೊಂಡಿದ್ದ ಮಾತುಕಲಿತ ಗಿಣಿಯೊಂದು ತುಂಬಿದ ಸಂಸಾರದಲ್ಲಿ ಹುಳಿ ಹಿಂಡಿದೆ. ಮನೆಯ ಯಜಮಾನನಿಂದಲೇ ಮಾತು ಕಲಿತು ಯಾಜಮಾನನ ಹೆಂಡತಿಯನ್ನೇ ಅವನಿಂದ ದೂರ ಮಾಡಿದೆ.
ಮಾತು ಕಲಿತಿದ್ದ ಈ ಗಿಣಿ ಮನೆಯ ಯಜಮಾನ ಮನೆಕೆಲಸದವಳ ಜತೆ ಚಕ್ಕಂದ ಆಡುತ್ತ ಮತನಾಡಿದ ಎಲ್ಲ ಮಾತುಗಳನ್ನು ಕೇಳಿಸಿಕೊಂಡು ಮನೆಯೊಡತಿಯ ಮುಂದೆ ಉಚ್ಛರಿಸಿದೆ. ಈ ಘಟನೆ ಕುವೈತ್ ನಲ್ಲಿ ನಡೆದಿದೆ.
ಗಿಣಿಯ ಮಾತುಗಳಿಂದ ಮನೆಕೆಲಸದವಳ ಜತೆ ಪತಿ ರಾಸಲೀಲೆ ನಡೆಸುತ್ತಿದ್ದಾನೆ ಎಂಬ ವಿಷಯ ಹೆಂಡತಿಗೆ ತಿಳಿಸಿರುವುದರಿಂದ ಆಕ್ರೋಶಗೊಂಡ ಪತ್ನಿ ಪತಿಯ ಮೇಲೆ ಕೇಸು ದಾಖಲಿಸಿದ್ದಾಳೆ.
ನನ್ನ ಗಂಡ ಮತ್ತು ಮನೆಕೆಲಸದವಳು ಮಾತನಾಡಿಕೊಳ್ಳುತ್ತಿದ್ದ ಮಾತುಗಳನ್ನು ಗಿಣಿ ನನ್ನ ಮುಂದೆ ಪದೇ ಪದೇ ಉಚ್ಛರಿಸಿದೆ ಆದ್ದರಿಂದ ಅವರ ಮೇಲೆ ನನಗೆ ಅನುಮಾನ ಮೂಡಿದೆ. ದಯವಿಟ್ಟು ಇಬ್ಬರನ್ನೂ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಪತ್ನಿ ತಿಳಿಸಿದ್ದಾಳೆ.
ನನ್ನ ಗಂಡ ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡಿದ್ದಾನೆ ಎಂಬ ಅನುಮಾನ ನನ್ನಲ್ಲಿ ಹಲವು ದಿನಗಳಿಂದ ಇತ್ತು. ಈಗ ಗಿಣಿ ಮೂಲಕ ಹೊರಬಂದಿದೆ. ಎಂದು ಇಲ್ಲಿನ ಹವಾಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕುವೈತ್ ಕಾನುನಿನ ಪ್ರಕಾ ಅಕ್ರಮ ಸಂಬಂಧಗಳನ್ನು ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಆದರೆ ಪೊಲೀಸರು ಮಾತ್ರ " ಗಿಣಿಯ ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಕೇಸು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ಅದು ಟಿವಿಯಲ್ಲಿನ ಪಾತ್ರಗಳ ರಾಸಲೀಲೆಗಳ ಸಂಭಾಷಣೆ ಕೇಳಿಸಿಕೊಂಡು ಕೂಡ ಮಾತನಾಡಿರಬಹುದು" ಎಂದು ಹೇಳಿದ್ದಾರೆ.
ಈ ಘಟನೆಯನ್ನು ಸ್ಥಳೀಯ ಪತ್ರಿಕೆ 'ಅರಬ್ ಟೈಮ್ಸ್' ವರದಿ ಮಾಡಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications