ಪ್ಯಾರಿಸ್ ಉಗ್ರರ ದಾಳಿ ಹಿಂದಿರುವವರು ಯಾರು?
ಬೆಂಗಳೂರು, ನವೆಂಬರ್ 14 : ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆದ ಉಗ್ರ ಅಟ್ಟಹಾಸದ ಹಿಂದಿರುವವರು ಯಾರು? ಎಂಬ ಪ್ರಶ್ನೆ ಎದ್ದಿದೆ. ಅಲ್ಖೈದಾ ಅಥವ ಐಎಸ್ಐಎಸ್ ನಂತಹ ಉಗ್ರ ಸಂಘಟನೆಗಳು ತಿಂಗಳುಗಟ್ಟಲೇ ಯೋಜನೆ ರೂಪಿಸಿ ಈ ಮಾರಣ ಹೋಮ ನಡೆಸಿವೆ ಎಂದು ಶಂಕಿಸಲಾಗುತ್ತಿದೆ. [ಪ್ಯಾರಿಸ್ ದಾಳಿಯ ಚಿತ್ರಗಳು]
ಪ್ಯಾರಿಸ್ಗೆ ನುಗ್ಗಿರುವ ಶಸ್ತ್ರ ಸಜ್ಜಿತ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ 150 ಜನರನ್ನು ಹತ್ಯೆ ಮಾಡಿದ್ದಾರೆ. ಇಬ್ಬರು ಆತ್ಮಾಹುತಿ ಬಾಂಬರ್ಗಳು ತಮ್ಮನ್ನು ಸ್ಫೋಟಿಸಿಕೊಂಡು ಇತರರ ಜೀವವನ್ನು ಬಲಿಪಡೆದಿದ್ದಾರೆ. ಆದ್ದರಿಂದ, ಈ ದಾಳಿಯ ಹಿಂದೆ ದೊಡ್ಡ ಭಯೋತ್ಪಾದಕ ಗುಂಪಿದೆ ಎಂದು ಅಂದಾಜಿಸಲಾಗುತ್ತಿದೆ. [ಪ್ಯಾರಿಸ್ : ಉಗ್ರರ ಅಟ್ಟಹಾಸ 150 ಸಾವು]

ಸಿರಿಯಾ ಅಥವ ಇರಾಕ್ನಲ್ಲಿ ಯೋಜನೆ : ಇಂತಹ ದೊಡ್ಡ ದಾಳಿ ನಡೆಸಲು ತಿಂಗಳುಗಟ್ಟಲೇ ಯೋಜನೆ ರೂಪಿಸಬೇಕಾಗುತ್ತದೆ. ಐಎಸ್ಐಎಸ್ ಉಗ್ರರು ತಮ್ಮ ಭದ್ರ ನೆಲೆಯಾದ ಸಿರಿಯಾ ಅಥವ ಇರಾಕ್ನಲ್ಲಿ ಈ ದಾಳಿಯ ಸಂಚು ರೂಪಿಸಿರಬಹುದು ಎಂಬುದು ಸದ್ಯದ ಮಾಹಿತಿ. [ಇರಾಕಿ ಉಗ್ರರ ವಿರುದ್ಧ ಕರ್ನಾಟಕ ಮಸೀದಿಗಳ ಯುದ್ಧ]
ಕೆಲವು ತಿಂಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಉಗ್ರರು ವಿವಿಧ ದೇಶಗಳಲ್ಲಿ ದಾಳಿ ನಡೆಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಈ ಯೋಜನೆಯ ಅಂಗವಾಗಿಯೇ ಪ್ಯಾರಿಸ್ನಲ್ಲಿ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗುತ್ತಿದೆ.
26/11ರ ಮುಂಬೈ ದಾಳಿಗೆ ಸಾಮ್ಯತೆ : ಪ್ಯಾರಿಸ್ನಲ್ಲಿ ನಡೆದ ಉಗ್ರರ ದಾಳಿಗೂ ಮುಂಬೈನಲ್ಲಿ ನಡೆದ 26/11ರ ದಾಳಿಗೂ ಹಳ ಸಾಮ್ಯತೆ ಇದೆ ಎನ್ನುತ್ತಾರೆ ತಜ್ಞರು. ಪ್ಯಾರಿಸ್ನಲ್ಲಿ ಒತ್ತೆಯಾಳಾಗಿ ಜನರನ್ನು ಹಿಡಿದಿಟ್ಟುಕೊಂಡರೂ ಯಾವುದೇ ಬೇಡಿಕೆ ಮುಂದಿಡದೇ ಅವರನ್ನು ಹತ್ಯೆ ಮಾಡಲಾಗಿದೆ.
ಉಗ್ರರಿಗೆ ತರಬೇತಿ : ಇಂತಹ ದಾಳಿಗಳನ್ನು ನಡೆಸುವಾಗ ಉಗ್ರರಿಗೆ ತರಬೇತಿ ನೀಡಲಾಗುತ್ತದೆ. ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಉಗ್ರರು ಅಕ್ರಮ ಸಾಗಣೆ ಮೂಲಕ ಪಡೆದಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications