23 ವಯಸ್ಸಿನ ಪಾಕಿಸ್ತಾನದ ಅತ್ಯಾಚಾರಿ, ಸರಣಿ ಹಂತಕನಿಗೆ ಗಲ್ಲು ಶಿಕ್ಷೆ
ಲಾಹೋರ್, ಅಕ್ಟೋಬರ್ 17: ಪಾಕಿಸ್ತಾನಿ ಸರಣಿ ಹಂತಕನೊಬ್ಬನನ್ನು ಬುಧವಾರ ಲಾಹೋರ್ ನ ಜೈಲಿನಲ್ಲಿ ನೇಣಿಗೇರಿಸಲಾಗಿದೆ. ಆತನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂಬ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು. ಈ ರೀತಿ ಮನವಿ ಮಾಡಿದ್ದು ಆತನಿಂದ ಅತ್ಯಾಚಾರಕ್ಕೆ ಈಡಾದ ಏಳು ವರ್ಷದ ಬಾಲಕಿಯ ತಂದೆ.
ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಿಕ್ಷೆಯಾಗಿದ್ದವನ ಹೆಸರು ಇಮ್ರಾನ್ ಅಲಿ. ಲಾಹೋರ್ ನಿಂದ ಐವತ್ತು ಕಿ.ಮೀ. ದೂರದ ಕಸೂರ್ ನಗರದಲ್ಲಿ ಈ ವರ್ಷದ ಆರಂಭದಲ್ಲಿ ಆತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಬುಧವಾರ ಬೆಳಗ್ಗೆ ಲಾಹೋರ್ ನ ಕೋಟ್ ಲಖಪತ್ ಕೇಂದ್ರ ಕಾರಾಗೃಹದಲ್ಲಿ ಇಮ್ರಾನ್ ಅಲಿಗೆ ನೇಣು ಹಾಕಲಾಯಿತು.
ಮ್ಯಾಜಿಸ್ಟ್ರೇಟ್ ಅದಿಲ್ ಸರ್ವಾರ್ ಹಾಗೂ ಬಾಲಕಿಯ ತಂದೆಯ ಸಮ್ಮುಖದಲ್ಲಿ ಇಮ್ರಾನ್ ಅಲಿಗೆ ನೇಣು ಹಾಕಲಾಯಿತು. ಆ ಸಂದರ್ಭದಲ್ಲಿ ಬಾಲಕಿಯ ಸಂಬಂಧಿ ಕೂಡ ಜೈಲಿನಲ್ಲಿ ಹಾಜರಿದ್ದರು. ಅಪರಾಧಿಯ ಸೋದರ ಹಾಗೂ ಇಬ್ಬರು ಸ್ನೇಹಿತರು ಕೂಡ ಬಂದಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಸಾರ್ವಜನಿಕವಾಗಿ ನೇಣು ಹಾಕಬೇಕೆಂದು ಮನವಿ
ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು ಎಂದು ಬಾಲಕಿಯ ತಂದೆ ಮಾಡಿದ್ದ ಮನವಿಯನ್ನು ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಲಾಹೋರ್ ಹೈಕೋರ್ಟ್ ಪೀಠವು ಮಂಗಳವಾರ ತಿರಸ್ಕರಿಸಿತು. ಈ ವರ್ಷದ ಜನವರಿ ಕೊನೆಗೆ ಇಮ್ರಾನ್ ಅಲಿಯನ್ನು ಕೊಲೆ-ಅತ್ಯಾಚಾರ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.

ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಆ ವೇಳೆಗೆ ಬಾಲಕಿಯ ಮೇಲೆ ಅತ್ಯಾಚಾರ ನಡೆ, ಹತ್ಯೆ ಮಾಡಿ, ಕಸೂರ್ ನ ಕಸದ ತೊಟ್ಟಿಯೊಂದಕ್ಕೆ ಬಿಸಾಡಿ ಎರಡು ವಾರ ಕಳೆದಿತ್ತು. ಆ ನಂತರ ಪಾಕಿಸ್ತಾನದಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು. ಇಪ್ಪತ್ಮೂರು ವರ್ಷದ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಲಾಯಿತು. ಆ ವೇಳೆ ನಡೆದ ಪ್ರತಿಭಟನೆ ಸಮಯದಲ್ಲಿ ಎರಡು ಜೀವ ಹೋಗಿತ್ತು.

ಐದು ಪ್ರಕರಣಗಳಲ್ಲಿ ಕೋರ್ಟ್ ತೀರ್ಪು
ಕಸೂರ್ ನ ನಿವಾಸಿಯಾದ ಅಲಿ ಮೇಲೆ ಈ ರೀತಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಒಂಬತ್ತು ಪ್ರಕರಣಗಳಿವೆ. ಐದು ಪ್ರಕರಣಗಳಲ್ಲಿ ಕೋರ್ಟ್ ತೀರ್ಪು ನೀಡಿತು. ಅಲಿ ಪರವಾಗಿ ವಾದ ಮಾಡಿದ್ದ ವಕೀಲರು ಕೂಡ ಆತನನ್ನು ಜೈಲಿನಲ್ಲಿ ನೇಣು ಹಾಕುವುದನ್ನು ನೇರ ಪ್ರಸಾರ ಮಾಡಲು ಅವಕಾಶ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಮನವಿ ತಿರಸ್ಕೃತವಾಯಿತು.

ಕೋಟ್ ಲಖಪತ್ ಜೈಲಿನ ಸುತ್ತ ಭಾರೀ ಕಾವಲು
ಅಲಿಗೆ ಶಿಕ್ಷೆ ಜಾರಿ ಆಗುವ ಸಂದರ್ಭದಲ್ಲಿ ಕೋಟ್ ಲಖಪತ್ ಜೈಲಿನ ಸುತ್ತ ಭಾರೀ ಕಾವಲು ಹಾಕಲಾಗಿತ್ತು. ನೇಣು ಹಾಕುವುದರ ದೃಶ್ಯಗಳ ನೇರ ಪ್ರಸಾರಕ್ಕೆ ಅಧಿಕಾರಿಗಳು ಒಪ್ಪಬೇಕಿತ್ತು. ನನ್ನ ಮಗಳು ಬದುಕಿದ್ದರೆ ಅವಳಿಗೆ ಏಳು ವರ್ಷದ ಎರಡು ತಿಂಗಳು ಆಗಿರುತ್ತಿತ್ತು. ಮಗಳ ಕೊಲೆಯ ದುಃಖದಿಂದ ನನ್ನ ಹೆಂಡತಿ ಇನ್ನೂ ಆಚೆಬಂದಿಲ್ಲ ಎಂದು ಬಾಲಕಿಯ ತಂದೆ ಮಾಧ್ಯಮದ ಮುಂದೆ ಹೇಳಿದ್ದಾರೆ. ಅಲಿಯನ್ನು ಕೋರ್ಟ್ ನಲ್ಲಿ ಗಲ್ಲಿಗೇರಿಸಿದ ನಂತರ, ಶವವನ್ನು ಕಸೂರ್ ಗೆ ತೆಗೆದುಕೊಂಡು ಹೋಗುವ ವೇಳೆ ಆತನ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications