ಚೀನಾಗೆ ಕತ್ತೆ, ನಾಯಿ ಮಾರಿ ಹಣ ಗಳಿಸಲಿರುವ ಪಾಕಿಸ್ತಾನ
ಇಸ್ಲಾಮಾಬಾದ್, ಅ. 4: ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಈಗ ಒಂದೊಂದು ರೂಪಾಯಿಯೂ ಮುಖ್ಯ ಎಂಬಂತಾಗಿದೆ. ಆರ್ಥಿಕ ದುಸ್ಥಿತಿ ಜೊತೆಗೆ ಮಳೆ, ಜಲಪ್ರವಾಹದ ಹೊಡೆತಕ್ಕೆ ಪಾಕಿಸ್ತಾನ ತತ್ತರಿಸಿಹೋಗಿದೆ. ಸಾಲದ ಶೂಲಕ್ಕೆ ಬಹುತೇಕ ಸಿಲುಕಿರುವ ಪಾಕಿಸ್ತಾನ ಹಳೆ ಸಾಲ ತೀರಿಸಲು ಹೊಸ ಸಾಲಗಳಿಗೆ ಅವರಿವರಲ್ಲಿ ಅಂಗಲಾಚುವ ಪರಿಸ್ಥಿತಿ ಇದೆ.
ಇದೇ ವೇಳೆ, ಪಾಕಿಸ್ತಾನದಲ್ಲಿ ಹೇರಳವಾಗಿ ಲಭ್ಯ ಇರುವ ಕತ್ತೆ, ನಾಯಿಗಳನ್ನು ರಫ್ತು ಮಾಡುವ ಮೂಲಕ ಒಂದಷ್ಟು ಆದಾಯ ಗಳಿಸಲಾಗುತ್ತಿದೆ. ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಪ್ರಕಾರ, ಕತ್ತೆಗಳನ್ನು ಆಮದು ಮಾಡಿಕೊಳ್ಳಲು ಚೀನಾ ಆಸಕ್ತಿ ತೋರಿರುವ ವಿಚಾರವನ್ನು ಸಂಸದೀಯ ಸ್ಥಾಯಿ ಸಮಿತಿ ಎದುರು ಪಾಕಿಸ್ತಾನದ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.
ವಾಣಿಜ್ಯ ಸ್ಥಾಯಿ ಸಮಿತಿಯ ಸದಸ್ಯನಾಗಿರುವ ದಿನೇಶ್ ಕುಮಾರ್ ಪ್ರಕಾರ ಪಾಕಿಸ್ತಾನದಿಂದ ಕತ್ತೆಗಳ ಜೊತೆ ನಾಯಿಗಳೂ ಬೇಕೆಂದು ಚೀನಾ ಬೇಡಿಕೆ ಇಟ್ಟಿದೆಯಂತೆ. ಚೀನಾದ ಮಾರುಕಟ್ಟೆ ಬಹಳ ದೊಡ್ಡದಾಗಿದ್ದು, ಅಲ್ಲಿ ಕತ್ತೆ, ನಾಯಿ ಇತ್ಯಾದಿ ಪ್ರಾಣಿಗಳ ಮಾಂಸಕ್ಕೆ ಒಳ್ಳೆಯ ಬೇಡಿಕೆ ಇದೆ.

ಈ ಹಿಂದೆಯೂ ಪಾಕಿಸ್ತಾನದಿಂದ ಕತ್ತೆ, ನಾಯಿ ಮಾಂಸ ಆಮದು ಮಾಡಿಕೊಳ್ಳಲು ಚೀನೀ ರಾಯಭಾರಿ ಹಲವು ಬಾರಿ ಮಾತುಕತೆ ನಡೆಸಿದ್ದರು. ಈಗ ಪಾಕಿಸ್ತಾನಕ್ಕೆ ಕಾಲ ಕೂಡಿ ಬಂದಂತಿದೆ.
ಪಾಕಿಸ್ತಾನದಲ್ಲಿ ಬಹಳ ಸಂಖ್ಯೆಯಲ್ಲಿ ಕತ್ತೆ ಮತ್ತು ನಾಯಿಗಳು ಇದ್ದರೂ ನೆರೆಯ ಅಫ್ಘಾನಿಸ್ತಾನದಲ್ಲಿ ಈ ಪ್ರಾಣಿಗಳು ಬಹಳ ಕಡಿಮೆ ಬೆಲೆಗೆ ದೊರೆಯುತ್ತವೆ. ಅಫ್ಘಾನಿಸ್ತಾನದಿಂದ ಈ ಪ್ರಾಣಿಗಳನ್ನು ಖರೀದಿಸಿ ನಂತರ ಅವುಗಳ ಮಾಂಸವನ್ನು ಚೀನಾಗೆ ರಫ್ತು ಮಾಡುವುದು ಪಾಕಿಸ್ತಾನದ ಆಲೋಚನೆ.

ಆದರೆ, ಇಲ್ಲೊಂದು ತಡೆ ಇದೆ. ದಕ್ಷಿಣ ಏಷ್ಯಾ ಭಾಗಗಳಲ್ಲಿ ಪ್ರಾಣಿಗಳಲ್ಲಿ ಚರ್ಮರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂದ ಅಫ್ಘಾನಿಸ್ತಾನದಿಂದ ಪ್ರಾಣಿಗಳನ್ನು ಆಮದು ಮಾಡಿಕೊಳ್ಳುವುದನ್ನು ಪಾಕಿಸ್ತಾನ ನಿಲ್ಲಿಸಿದೆ. ಈ ರೋಗ ಹತೋಟಿಗೆ ಬರುವವರೆಗೂ ಪಾಕಿಸ್ತಾನದಲ್ಲಿರುವ ಕತ್ತೆ ಮತ್ತು ನಾಯಿಗಳ ಮಾಂಸವನ್ನೇ ಚೀನಾಗೆ ರಫ್ತು ಮಾಡುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications