ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ: ಪಾಕಿಸ್ತಾನ ಹೇಳಿದ್ದೇನು?
Recommended Video
ಇಸ್ಲಾಮಾಬಾದ್, ಸೆಪ್ಟೆಂಬರ್ 07: ಭಾರತದ ಬಹುನಿರೀಕ್ಷಿತ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ನಂತರ ಇಡೀ ಭಾರತವೂ ನಿರಾಸೆ ಅನುಭವಿಸುತ್ತಿದ್ದರೆ ಪಾಕಿಸ್ತಾನ 'ವಿಘ್ನಸಂತೋಷ' ಅನುಭವಿಸಿ ಬೀಗುತ್ತಿದೆ!
ಚಂದ್ರಯಾನ-2 ಮುಗಿದಿಲ್ಲ, ಆರ್ಬಿಟರ್ ನಿಂದ ಒಂದು ವರ್ಷ ಅಧ್ಯಯನ
ಅದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್, "ದಯವಿಟ್ಟು ನಿದ್ದೆ ಮಾಡಿ. ನೀವು ಕಳಿಸಿದ್ದ 'ಬೊಂಬೆ' ಚಂದ್ರನಲ್ಲಿ ಲ್ಯಾಂಡ್ ಆಗುವ ಬದಲು ಮುಂಬೈಯಲ್ಲಿ ಲ್ಯಾಂಡ್ ಆಗಿದೆ. ಭಾರತ ಸೋತಿದೆ(IndiaFailed)" ಎಂದು ಟ್ವೀಟ್ ಮಾಡಿದ್ದಾರೆ.
ಅವರ ಈ ಟ್ವೀಟ್ ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರಿಂದ, ಪ್ರತಿಕ್ರಿಯೆ ನೀಡಿದ ಹುಸೇನ್, "ನನ್ನ ಟ್ವೀಟ್ ಅನ್ನು ಟ್ರೋಲ್ ಮಾಡಿದ ಭಾರತೀಯರ ಪ್ರತಿಕ್ರೆಯೆಗೆ ನನಗೆ ಅಚ್ಚರಿಯಾಗುತ್ತಿದೆ! ಅವರೆಲ್ಲ ನಾನೇ ಚಂದ್ರಯಾನದ ಸೋಲಿಗೆ ಕಾರಣವೇನೋ ಎಂಬಂತೆ ಟ್ವೀಟ್ ಮಾಡಿದ್ದಾರೆ. ಭಾರತೀಯ ಸಂಸತ್ತು ಈ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೊಣೆ ಮಾಡಬೇಕು. ಅವರು ರಾಜಕಾರಣಿಯಾಗಿ ಖಳಗೋಳಶಾಸ್ತ್ರಜ್ಞರು ಎಂಬಂತೆ ಪೋಸು ನೀಡಿದ್ದಾರೆ! 'ಬಡ ದೇಶ'ದ ಜನರ ಭಾರೀ ಹಣವನ್ನು ವ್ಯರ್ಥಮಾಡಿದ್ದಾರೆ" ಎಂದು ಫವಾದ್ ಹುಸೇನ್ ಟ್ವೀಟ್ ಮಾಡಿದ್ದಾರೆ.