ಪುಲ್ವಾಮಾ ದಾಳಿಕೋರನನ್ನು ಸ್ವಾತಂತ್ರ್ಯ ಯೋಧ ಎಂದ ಪಾಕ್ ಪತ್ರಿಕೆ
ಇಸ್ಲಾಮಾಬಾದ್, ಫೆಬ್ರವರಿ 16: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ 49 ಯೋಧರ ಹತ್ಯೆಗೆ ಕಾರಣನಾದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೊತ್ಪಾದಕ ಆದಿಲ್ ಅಹ್ಮದ್ ದಾರ್ ನನ್ನು ಪಾಕಿಸ್ತಾನದ ಪತ್ರಿಕೆಯೊಂದು 'ಸ್ವಾತಂತ್ರ್ಯ ಯೋಧ' ಎಂದು ಕರೆಯುವ ಮೂಲಕ ವಿಕೃತಿ ಮೆರೆದಿದೆ.
ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?
ಪಾಕಿಸ್ತಾನದ 'ದಿ ನೇಷನ್' ಪತ್ರಿಕೆಯು ದಾರ್ ನನ್ನು ಸ್ವಾತಂತ್ರ್ಯ ಯೋಧ ಎಂದು ಕರೆದಿದ್ದು ಮಾತ್ರವಲ್ಲದೆ, ಈ ಘಟನೆಯಲ್ಲಿ ಜೈಷ್ ಇ ಮೊಹಮ್ಮದ್ ಪಾತ್ರವಿಲ್ಲ ಎಂದು ಬರೆದಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ.
'ನೀವು ವಿಡಿಯೋ ನೋಡುವ ವೇಳೆ ನಾನು ಸ್ವರ್ಗದಲ್ಲಿ ಸಂಭ್ರಮಿಸುತ್ತಿರುತ್ತೇನೆ' ಎಂದಿದ್ದ ಉಗ್ರ!
ಸ್ವತಃ ಜೆಇಎಂ ಈ ಕೃತ್ಯದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದರೂ, ದಿ ನೇಶನ್ ಈ ರೀತಿ ಬರೆಯುವ ಮೂಲಕ ವಿಶ್ವದ ಕೆಂಗಣ್ಣಿಗೆ ಪಾತ್ರವಾಗಿದೆ.
ಇಡೀ ವಿಶ್ವವೇ ಆದಿಲ್ ಅಹ್ಮದ್ ದಾರ್ ನನ್ನು ಭಯೋತ್ಪಾದಕ, ರಣಹೇಡಿ ಎಂದು ನಿಂದಿಸುತ್ತಿದ್ದರೆ ಪಾಕಿಸ್ತಾನೀ ಪತ್ರಿಕೆ ಈ ರೀತಿ ಬರೆದಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.