ಶಾಂತಿ ಮಂಡಳಿ ಸೇರಿದ ಪಾಕಿಸ್ತಾನ, ಅಮೆರಿಕಗೆ ಮತ್ತಷ್ಟು ಹತ್ತಿರವಾಗಲು ಪ್ಲಾನ್ | Pakistan Economy
ಪಾಕಿಸ್ತಾನದ ಆರ್ಥಿಕ ಅರಾಜಕತೆ ಮತ್ತೆ ಮುಂದುವರಿದಿದ್ದು, ಅಲ್ಲಿನ ಪರಿಸ್ಥಿತಿ ಈಗ ಹೇಗೆ ಆಗಿದೆ ಅಂದರೆ ತುತ್ತು ಅನ್ನಕ್ಕೂ ಜನ ಪರದಾಡುತ್ತಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರ ಮಾತ್ರ ಉಗ್ರರನ್ನು ಪೋಷಣೆ ಮಾಡುತ್ತಾ ಜಾಲಿ ಜಾಲಿಯಾಗಿ ಇದೆ. ಅಲ್ಲದೆ ಸೇನೆಗೆ ಕೂಡ ಸಾವಿರಾರು ಕೋಟಿ ರೂಪಾಯಿ ಹಣ ಸುರಿದು ಪಾಕಿಸ್ತಾನದ ರಾಜಕಾರಣಿಗಳು ಇಡೀ ದೇಶವನ್ನೇ ಬೀದಿಗೆ ತಂದಿದ್ದಾರೆ. ಮತ್ತೊಂದೆಡೆ ಜಗತ್ತಿನ ಬಹುತೇಕ ಎಲ್ಲಾ ಶ್ರೀಮಂತ ದೇಶಗಳ ಎದುರು ಭಿಕ್ಷೆ ಬೇಡಿ ಬಂದಿರುವ ಪಾಕಿಸ್ತಾನ ಸರ್ಕಾರ ಇದೀಗ ಅಮೆರಿಕ ಬಳಿ ಸಾಲಕ್ಕಾಗಿ ಕಾಲು ಹಿಡಿಯಲು ಶಾಂತಿ ಮಂಡಳಿ ಸೇರಿದೆ. ಗಾಜಾ ಶಾಂತಿ ಮಂಡಳಿಗೆ ಸೇರಿ ಟ್ರಂಪ್ ಅವರ ಜೊತೆಗೆ ಹತ್ತಿರವಾಗಲು ಇದೀಗ ಹೊಸ ಪ್ಲಾನ್ ಮಾಡಿಕೊಂಡಿದೆ.
ಭಾರತವನ್ನ ಎದುರು ಹಾಕಿಕೊಂಡು, ತನ್ನ ಪ್ರಜೆಗಳನ್ನು ಹಸಿವು & ಬಡತನದ ಬೇಗೆಯಲ್ಲಿ ಸಾಯುವಂತೆ ಮಾಡುತ್ತಿರುವ ಪಾಕಿಸ್ತಾನದ ರಾಜಕಾರಣಿಗಳಿಗೆ ಬುದ್ಧಿ ಬರಲ್ಲ. ಯಾಕಂದ್ರೆ ಅಲ್ಲಿನ ಭ್ರಷ್ಟ ವ್ಯವಸ್ಥೆಯ ಪರಿಣಾಮ ಇಡೀ ದೇಶ ಪರೋಕ್ಷವಾಗಿ ಉಗ್ರರ ಹಿಡಿತಕ್ಕೆ ಸಿಲುಕಿ ಒದ್ದಾಡುತ್ತಿದೆ. ಹಾಗೇ ಅಲ್ಲಿ ಇರುವ ರಾಜಕೀಯ ನಾಯಕರು ಕೂಡ ವ್ಯವಸ್ಥೆ ಮತ್ತಷ್ಟು ಹಾಳಾಗುವ ರೀತಿ ನಿರ್ಧಾರ ತೆಗೆದುಳ್ಳುತ್ತಿದ್ದಾರೆ. ಈ ಎಲ್ಲಾ ಪರಿಣಾಮಗಳಿಂದ ಪಾಕಿಸ್ತಾನ ಆರ್ಥಿಕತೆ ಇನ್ನಷ್ಟು ಹಾಳಾಗಿ ಬೀದಿಗೆ ಬೀಳುತ್ತಿದೆ. ಮತ್ತೊಂದು ಕಡೆ ಇದೇ ಸಮಯದಲ್ಲೇ, ಟ್ರಂಪ್ ಅವರು ಹುಟ್ಟು ಹಾಕಿರುವ ಶಾಂತಿ ಮಂಡಳಿಗೆ ಸೇರಲು ಇದೀಗ ದೀಢಿರ್ ಮಹತ್ವದ ನಿರ್ಧಾರ ಕೈಗೊಂಡಿದೆ ಪಾಕಿಸ್ತಾನ.

ಸಾಲ ಪಡೆಯಲು ಪಾಕಿಸ್ತಾನದ ನಾಟಕ?
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾ ಶಾಂತಿ ಮಂಡಳಿ ಸ್ಥಾಪನೆ ಮಾಡಿದ್ದು, ಈ ಮಂಡಳಿ ಮೂಲಕ ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಶಾಂತಿ ಮಂಡಳಿ ಸಾವಿರಾರು ಕೋಟಿ ರೂಪಾಯಿ ಯೋಜನೆ ಘೋಷಣೆ ಮಾಡಿದ್ದು, ಟ್ರಂಪ್ ಅವರ ನೇತೃತ್ವದ ಮಂಡಳಿಗೆ ಜಗತ್ತಿನ ದೊಡ್ಡ ದೊಡ್ಡ ದೇಶಗಳು ಸೇರಿಕೊಂಡಿವೆ. ಅಲ್ಲದೆ ಒಟ್ಟು 20 ಅಂಶಗಳ ಯೋಜನೆ ರೂಪಿಸಿ, ಯುದ್ಧ ನಿಲ್ಲಿಸಿ ಶಾಂತಿ ನೆಲೆಸುವಂತೆ ಮಾಡಲು ಅಮೆರಿಕ ಮುಂದಾಗಿದೆ. ಜಗತ್ತಿನ ಘಟಾನುಘಟಿ ದೇಶಗಳು ಕೂಡ ಬೆಂಬಲ ಕೊಡುತ್ತಿದ್ದು, ಈಗ ಗಾಜಾದಲ್ಲಿ ಹಮಾಸ್ ಸಂಪೂರ್ಣ ನಿಶ್ಯಸ್ತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಇಂತಹ ಸಮಯದಲ್ಲೇ ಪಾಕಿಸ್ತಾನ ಕೂಡ ಶಾಂತಿ ಮಂಡಳಿಗೆ ಸೇರಿದ್ದು, ಅಮೆರಿಕದ ಕಡೆಯಿಂದ ಸಾಲ ಪಡೆಯಲು ಸ್ಕೆಚ್ ಹಾಕಿದೆಯಾ? ಎಂಬ ಪ್ರಶ್ನೆ ಮೂಡಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications