ಭೂಮಿಯ ಮೇಲೆ ಬೀಳಲಿದೆ 38 ವರ್ಷದ ನಾಸಾ ಉಪಗ್ರಹ: ಅಪಾಯ, ತೂಕ, ಜಾಗದ ಬಗ್ಗೆ ತಿಳಿಯಿರಿ
ನ್ಯೂಯಾರ್ಕ್, ಜನವರಿ 7: 38 ವರ್ಷದ ನಾಸಾ ಉಪಗ್ರಹವೊಂದು ಆಕಾಶದಿಂದ ಈ ವಾರಾಂತ್ಯದಲ್ಲಿ ಬೀಳಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಅವಶೇಷಗಳು ಯಾರ ಮೇಲೂ ಬೀಳುವ ಸಾಧ್ಯತೆ 'ತುಂಬಾ ಕಡಿಮೆ' ಎಂದು ನಾಸಾ ಶುಕ್ರವಾರ ಹೇಳಿದೆ.
ನಾಸಾ ಪ್ರಕಾರ, 5,400 ಪೌಂಡ್ (2,450 ಕಿಲೋಗ್ರಾಂ) ಉಪಗ್ರಹವು ಭೂಮಿಗೆ ಮರಳಿ ಬರುವಾಗ ಬಹುತೇಕ ಸುಟ್ಟುಹೋಗುತ್ತದೆ. ಆದರೆ, ಕೇಲವೇ ಕೆಲವು ತುಣುಕುಗಳು ಭೂಮಿಯ ಮೇಲೆ ಬೀಳುವ ನಿರೀಕ್ಷೆಯಿದೆ.ಇದರಿಂದ ಜನರಿಗೆ ಯಾವುದೇ ಅಪಾಯವಿಲ್ಲ. 9, 400 ಜನರಲ್ಲಿ ಒಬ್ಬರಿಗೆ ಮಾತ್ರ ಗಾಯವಾಗಬಹುದು.

ಅಮೆರಿಕದ ರಕ್ಷಣಾ ಇಲಾಖೆಯ ಮಾಹಿತಿ ನೀಡಿರುವ ಪ್ರಕಾರಣ ಉಪಗ್ರಹವು ಭಾನುವಾರ ಸಂಜೆ 6.40ಕ್ಕೆ ಭೂಮಿಗೆ ಬಂದು ಬೀಳಲಿದೆ ಎನ್ನಲಾಗಿದೆ. ಇದನ್ನು ಅಲ್ಲಗಳೆದಿರುವ ಕ್ಯಾಲಿಫೋರ್ನಿಯಾದ 'ಏರೋಸ್ಪೇಸ್ ಕಾರ್ಪೊರೇಷನ್', ಸೋಮವಾರ 1 ಗಂಟೆಗೆ (ರಾತ್ರಿ) ಉಪಗ್ರಹ ಬೀಳಬಹುದು. ಇದು ಆಕಾಶದಿಂದ ಭೂಮಿಗೆ ಬಂದು ಬೀಳಲು 17 ಗಂಟೆ ಅವಧಿಯನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.
ಇದು ಆಫ್ರಿಕಾ, ಏಷ್ಯಾ ಮಧ್ಯಪ್ರಾಚ್ಯ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗಗಳಲ್ಲಿ ಹಾದುಹೋಗಲಿದೆ. ಈ ಭಾಗಗಳಲ್ಲಿ ಹಾದುಬರಲು 13 ಗಂಟೆಗಳನ್ನು ತೆಗೆದುಕೊಳ್ಳಬಹುದು ಎಂದು ಕ್ಯಾಲಿಫೋರ್ನಿಯಾ ಮೂಲದ ಏರೋಸ್ಪೇಸ್ ಕಾರ್ಪೊರೇಷನ್ ಹೇಳಿದೆ.

ERBS ಎಂದು ಕರೆಯಲ್ಪಡುವ ಅರ್ತ್ ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್ನಲ್ಲಿ ಉಡಾವಣೆ ಮಾಡಲಾಯಿತು. ಅದರ ನಿರೀಕ್ಷಿತ ಕೆಲಸದ ಜೀವಿತಾವಧಿಯು ಎರಡು ವರ್ಷಗಳಾಗಿದ್ದರೂ, 2005ರಲ್ಲಿ ನಿಷ್ಕ್ರಿಯವಾದ ಉಪಗ್ರಹ ನಿಷ್ಕ್ರೀಯವಾಯಿತು. ಅಲ್ಲಿಯವರೆಗೆ ಓಝೋನ್ ಮತ್ತು ಇತರ ವಾತಾವರಣದ ಮಾಪನಗಳನ್ನು ಮಾಡುತ್ತಲೇ ಇತ್ತು. ಭೂಮಿಯು ಸೂರ್ಯನಿಂದ ಎಷ್ಟು ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಹೊರಬಿಡುತ್ತದೆ ಎಂಬುದನ್ನು ಈ ಉಪಗ್ರಹದ ಮೂಲಕ ತಿಳಿದುಬಂದಿದೆ.
ಅರ್ತ್ ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್ ಅನ್ನು ಚಾಲೆಂಜರ್ನಿಂದ ಉಪಗ್ರಹಕ್ಕೆ ವಿಶೇಷವಾಗಿ ಕಳುಹಿಸಲಾಗಿತ್ತು. ಬಾಹ್ಯಾಕಾಶದಲ್ಲಿ ಅಮೆರಿಕದ ಮೊದಲ ಮಹಿಳೆ ಸ್ಯಾಲಿ ರೈಡ್, ನೌಕೆಯ ರೋಬೋಟ್ ಆರ್ಮ್ ಅನ್ನು ಬಳಸಿಕೊಂಡು ಉಪಗ್ರಹವನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು. ಸ್ಯಾಲಿ ರೈಡ್ ಜೊತೆ ಕ್ಯಾಥರಿನ್ ಸುಲ್ಲಿವನ್ ಗಗನಯಾತ್ತೆ ಮಾಡಿದ್ದರು. 2012 ರಲ್ಲಿ ನಿಧನರಾದ ರೈಡ್ಗೆ ಇದು ಎರಡನೇ ಮತ್ತು ಅಂತಿಮ ಬಾಹ್ಯಾಕಾಶ ಯಾನವಾಗಿತ್ತು ಎಂದು ನಾಸಾ ತಿಳಿಸಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications