ಭೂಮಿ ಮಾತ್ರವಲ್ಲ, ಇಡೀ ಬ್ರಹ್ಮಾಂಡದ ತಾಪವೇ ಹೆಚ್ಚುತ್ತಿದೆ
ನವದೆಹಲಿ, ನವೆಂಬರ್ 13: ಹೊಸ ಅಧ್ಯಯನವೊಂದರ ಪ್ರಕಾರ ತಾಪಮಾನದ ಬಿಸಿ ಎದುರಿಸುತ್ತಿರುವ ಗ್ರಹದಲ್ಲಿ ಭೂಮಿ ಮಾತ್ರವಲ್ಲ, ಇಡೀ ಬ್ರಹ್ಮಾಂಡವೇ ಉಷ್ಣಾಂಶ ಏರಿಕೆಯನ್ನು ಎದುರಿಸುತ್ತಿದೆ.
ಓಹಿಯೋ ವಿಶ್ವವಿದ್ಯಾಲಯದ ಕಾಸ್ಮೋಲಜಿ ಮತ್ತು ಆಸ್ಟ್ರೋಪಾರ್ಟಿಕಲ್ ಫಿಸಿಕ್ಸ್ ಕೇಂದ್ರದ ಹೊಸ ಅಧ್ಯಯನವು, ಇಡೀ ಬ್ರಹ್ಮಾಂಡವೇ ತಾಪಮಾನ ಏರಿಕೆಯನ್ನು ಕಾಣುತ್ತಿದೆ. ಕಳೆದ 10 ಬಿಲಿಯನ್ ವರ್ಷಗಳಿಂದ ಬ್ರಹ್ಮಾಂಡದ ಉಷ್ಣ ಇತಿಹಾಸವನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತಿರುವ ನಡುವೆ ವಿಜ್ಞಾನಿಗಳಿಗೆ ಈ ಮಹತ್ವದ ವಾಸ್ತವ ಗೊತ್ತಾಗಿದೆ.
ವರದಿಯೊಂದರ ಪ್ರಕಾರ, ಈ ಅಧ್ಯಯನವು ಕಳೆದ 10 ಬಿಲಿಯನ್ ವರ್ಷಗಳಿಂದ ಇದುವರೆಗೂ ಬ್ರಹ್ಮಾಂಡದ ತಾಪಮಾನವು 10 ಪಟ್ಟಿಗಿಂತಲೂ ಅಧಿಕವಾಗಿದೆ. ಉಷ್ಣಾಂಶವು ಇಂದಿಗೆ ಸುಮಾರು 2 ಮಿಲಿಯನ್ ಡಿಗ್ರಿ ಕೆಲ್ವಿನ್ ತಲುಪಿದೆ. ಆದರೆ ಭೂಗ್ರಹದಲ್ಲಿನ ತಾಪಮಾನ ಏರಿಕೆಗೂ ಬ್ರಹ್ಮಾಂಡದ ತಾಪಮಾನ ಏರಿಕೆಗೂ ಸಂಬಂಧವಿಲ್ಲ.

ಈ ಅಧ್ಯಯನದ ನೇತೃತ್ವ ವಹಿಸಿದ್ದ ವಿಶ್ವವಿದ್ಯಾಲಯದ ಯಿ ಕುವಾನ್ ಚಿಯಾಂಗ್, ಹೊಸ ತಿಳಿವಳಿಕೆಗಳು 2019ರ ಭೌತಶಾಸ್ತ್ರ ನೊಬೆಲ್ ವಿಜೇತ ಜಿಮ್ ಪೀಬಲ್ಸ್ ಅವರ ಕಾರ್ಯಗಳಿಂದ ಪ್ರಭಾವಿತಗೊಂಡು ನಡೆಸಿದ ಅಧ್ಯಯನದಿಂದ ಸಿಕ್ಕಿವೆ. ಬ್ರಹ್ಮಾಂಡದಲ್ಲಿನ ಬೃಹತ್ ಪ್ರಮಾಣದ ಸಂರಚನೆಗಳು ಹೇಗೆ ಹುಟ್ಟಿಕೊಂಡವು ಎಂಬುದರ ಬಗ್ಗೆ ಪೀಬಲ್ಸ್ ಅವರು ಸಿದ್ಧಾಂತವನ್ನು ಸೃಷ್ಟಿಸಿದ್ದರು ಎಂದಿದ್ದಾರೆ.
ಬ್ರಹ್ಮಾಂಡದ ಉಗಮದೊಂದಿಗೆ ಗುರುತ್ವವು ಬಾಹ್ಯಾಕಾಶದ ಕತ್ತಲು ಮತ್ತು ಅನಿಲವನ್ನು ಗ್ಯಾಲಕ್ಸಿಗಳು ಮತ್ತು ಗ್ಯಾಲಕ್ಸಿಗಳ ಗುಚ್ಛದೊಳಗೆ ಒಟ್ಟಾಗಿ ಎಳೆದುಕೊಂಡಿತ್ತು. ಇದು ಎಷ್ಟು ತೀವ್ರವಾಗಿತ್ತೆಂದರೆ ಹೆಚ್ಚು ಹೆಚ್ಚು ಅನಿಲವನ್ನು ಎಳೆದುಕೊಂಡಂತೆ ಅದು ಬಿಸಿಯಾಗುತ್ತಿತ್ತು. ಈಗ ವಿಜ್ಞಾನಿಗಳು ಭೂಮಿಯಿಂದ ಒಂದಷ್ಟು ದೂರದಲ್ಲಿ ಇರುವ ಅನಿಲದ ತಾಪಮಾನವನ್ನು ಅಳೆಯಲು ಹೊಸ ಮಾದರಿಯನ್ನು ಬಳಸಿದ್ದಾರೆ. ಪ್ರಸ್ತುತದ ಸಂದರ್ಭದಲ್ಲಿ ಭೂಮಿಗೆ ಸಮೀಪ ಇರುವ ಅನಿಲಗಳ ಮಾಪನವನ್ನು ಸಂಶೋಧನೆ ವೇಳೆ ಹೋಲಿಸಲಾಗುತ್ತಿದೆ.
ಕಾಸ್ಮಿಕ್ ಸಂರಚನೆಯ ಗುರುತ್ವ ಕುಸಿತದಿಂದಾಗಿ ಬ್ರಹ್ಮಾಂಡವು ಕಾಲಕ್ರಮೇಣ ಬಿಸಿಯಾಗುತ್ತಿದ್ದು, ಇದು ಮುಂದುವರಿಯಬಹುದು ಎಂದು ಸಂಶೋಧನೆ ತಿಳಿಸಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications