ಭೂಮಿ ಮಾತ್ರವಲ್ಲ, ಇಡೀ ಬ್ರಹ್ಮಾಂಡದ ತಾಪವೇ ಹೆಚ್ಚುತ್ತಿದೆ
ನವದೆಹಲಿ, ನವೆಂಬರ್ 13: ಹೊಸ ಅಧ್ಯಯನವೊಂದರ ಪ್ರಕಾರ ತಾಪಮಾನದ ಬಿಸಿ ಎದುರಿಸುತ್ತಿರುವ ಗ್ರಹದಲ್ಲಿ ಭೂಮಿ ಮಾತ್ರವಲ್ಲ, ಇಡೀ ಬ್ರಹ್ಮಾಂಡವೇ ಉಷ್ಣಾಂಶ ಏರಿಕೆಯನ್ನು ಎದುರಿಸುತ್ತಿದೆ.
ಓಹಿಯೋ ವಿಶ್ವವಿದ್ಯಾಲಯದ ಕಾಸ್ಮೋಲಜಿ ಮತ್ತು ಆಸ್ಟ್ರೋಪಾರ್ಟಿಕಲ್ ಫಿಸಿಕ್ಸ್ ಕೇಂದ್ರದ ಹೊಸ ಅಧ್ಯಯನವು, ಇಡೀ ಬ್ರಹ್ಮಾಂಡವೇ ತಾಪಮಾನ ಏರಿಕೆಯನ್ನು ಕಾಣುತ್ತಿದೆ. ಕಳೆದ 10 ಬಿಲಿಯನ್ ವರ್ಷಗಳಿಂದ ಬ್ರಹ್ಮಾಂಡದ ಉಷ್ಣ ಇತಿಹಾಸವನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತಿರುವ ನಡುವೆ ವಿಜ್ಞಾನಿಗಳಿಗೆ ಈ ಮಹತ್ವದ ವಾಸ್ತವ ಗೊತ್ತಾಗಿದೆ.
ವರದಿಯೊಂದರ ಪ್ರಕಾರ, ಈ ಅಧ್ಯಯನವು ಕಳೆದ 10 ಬಿಲಿಯನ್ ವರ್ಷಗಳಿಂದ ಇದುವರೆಗೂ ಬ್ರಹ್ಮಾಂಡದ ತಾಪಮಾನವು 10 ಪಟ್ಟಿಗಿಂತಲೂ ಅಧಿಕವಾಗಿದೆ. ಉಷ್ಣಾಂಶವು ಇಂದಿಗೆ ಸುಮಾರು 2 ಮಿಲಿಯನ್ ಡಿಗ್ರಿ ಕೆಲ್ವಿನ್ ತಲುಪಿದೆ. ಆದರೆ ಭೂಗ್ರಹದಲ್ಲಿನ ತಾಪಮಾನ ಏರಿಕೆಗೂ ಬ್ರಹ್ಮಾಂಡದ ತಾಪಮಾನ ಏರಿಕೆಗೂ ಸಂಬಂಧವಿಲ್ಲ.

ಈ ಅಧ್ಯಯನದ ನೇತೃತ್ವ ವಹಿಸಿದ್ದ ವಿಶ್ವವಿದ್ಯಾಲಯದ ಯಿ ಕುವಾನ್ ಚಿಯಾಂಗ್, ಹೊಸ ತಿಳಿವಳಿಕೆಗಳು 2019ರ ಭೌತಶಾಸ್ತ್ರ ನೊಬೆಲ್ ವಿಜೇತ ಜಿಮ್ ಪೀಬಲ್ಸ್ ಅವರ ಕಾರ್ಯಗಳಿಂದ ಪ್ರಭಾವಿತಗೊಂಡು ನಡೆಸಿದ ಅಧ್ಯಯನದಿಂದ ಸಿಕ್ಕಿವೆ. ಬ್ರಹ್ಮಾಂಡದಲ್ಲಿನ ಬೃಹತ್ ಪ್ರಮಾಣದ ಸಂರಚನೆಗಳು ಹೇಗೆ ಹುಟ್ಟಿಕೊಂಡವು ಎಂಬುದರ ಬಗ್ಗೆ ಪೀಬಲ್ಸ್ ಅವರು ಸಿದ್ಧಾಂತವನ್ನು ಸೃಷ್ಟಿಸಿದ್ದರು ಎಂದಿದ್ದಾರೆ.
ಬ್ರಹ್ಮಾಂಡದ ಉಗಮದೊಂದಿಗೆ ಗುರುತ್ವವು ಬಾಹ್ಯಾಕಾಶದ ಕತ್ತಲು ಮತ್ತು ಅನಿಲವನ್ನು ಗ್ಯಾಲಕ್ಸಿಗಳು ಮತ್ತು ಗ್ಯಾಲಕ್ಸಿಗಳ ಗುಚ್ಛದೊಳಗೆ ಒಟ್ಟಾಗಿ ಎಳೆದುಕೊಂಡಿತ್ತು. ಇದು ಎಷ್ಟು ತೀವ್ರವಾಗಿತ್ತೆಂದರೆ ಹೆಚ್ಚು ಹೆಚ್ಚು ಅನಿಲವನ್ನು ಎಳೆದುಕೊಂಡಂತೆ ಅದು ಬಿಸಿಯಾಗುತ್ತಿತ್ತು. ಈಗ ವಿಜ್ಞಾನಿಗಳು ಭೂಮಿಯಿಂದ ಒಂದಷ್ಟು ದೂರದಲ್ಲಿ ಇರುವ ಅನಿಲದ ತಾಪಮಾನವನ್ನು ಅಳೆಯಲು ಹೊಸ ಮಾದರಿಯನ್ನು ಬಳಸಿದ್ದಾರೆ. ಪ್ರಸ್ತುತದ ಸಂದರ್ಭದಲ್ಲಿ ಭೂಮಿಗೆ ಸಮೀಪ ಇರುವ ಅನಿಲಗಳ ಮಾಪನವನ್ನು ಸಂಶೋಧನೆ ವೇಳೆ ಹೋಲಿಸಲಾಗುತ್ತಿದೆ.
ಕಾಸ್ಮಿಕ್ ಸಂರಚನೆಯ ಗುರುತ್ವ ಕುಸಿತದಿಂದಾಗಿ ಬ್ರಹ್ಮಾಂಡವು ಕಾಲಕ್ರಮೇಣ ಬಿಸಿಯಾಗುತ್ತಿದ್ದು, ಇದು ಮುಂದುವರಿಯಬಹುದು ಎಂದು ಸಂಶೋಧನೆ ತಿಳಿಸಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications