Nobel Prize 2022 : ಹಣಕಾಸು ಬಿಕ್ಕಟ್ಟಿಗೆ ಪರಿಹಾರ ಹುಡುಕಿದ ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪುರಸ್ಕಾರ
ವಾಷಿಂಗ್ಟನ್, ಅ. 10: ಬ್ಯಾಂಕ್ ಮತ್ತು ಹಣಕಾಸು ಬಿಕ್ಕಟ್ಟು ಮೇಲೆ ಸಂಶೋಧನೆ ಮಾಡಿದ್ದ ಮೂವರು ಅರ್ಥಶಾಸ್ತ್ರಜ್ಞರಿಗೆ 2022ರ ನೊಬೆಲ್ ಬಹುಮಾನ ಸಿಕ್ಕಿದೆ.
ನೊಬೆಲ್ ಬಹುಮಾನ ಪಡೆದ ಬೆನ್ ಎಸ್ ಬೆರ್ನಾಂಕೆ, ಡೌಗ್ಲಾಸ್ ಡಬ್ಲ್ಯು ಡೈಮಂಡ್ ಮತ್ತು ಫಿಲಿಪ್ ಡಬ್ಲ್ಯು ಡೈಬವಿಗ್ ಅವರು ಅಮೆರಿಕದ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಇವರು ಮಾಡಿದ ಸಂಶೋಧನೆಯಿಂದ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಎದುರಿಸಲು ಸಹಾಯವಾಗಿದೆ. ಹಣಕಾಸು ಬಿಕ್ಕಟ್ಟುಗಳು ದೀರ್ಘಾವಧಿ ಆರ್ಥಿಕ ಹಿಂಜರಿತಕ್ಕೆ ಬೀಳದಂತೆ ಹೇಗೆ ನಿರ್ವಹಿಸಬಹುದು ಎಂಬುದನ್ನು ಇವರ ಸಂಶೋಧನೆಗಳು ತೋರಿಸಿಕೊಟ್ಟಿವೆ. ಇವರ ಕಾರ್ಯಕ್ಕೆ ಮನ್ನಣೆ ಕೊಡಲು ನೊಬೆಲ್ ಬಹುಮಾನ ದಯಪಾಲಿಸಲಾಗುತ್ತಿದೆ.
ಈ ಮೂವರಿಗೆ ಸಿಗುವ ನೊಬೆಲ್ ಬಹುಮಾನದಲ್ಲಿ ಸುಮಾರು 1 ಕೋಟಿ ಸ್ವೀಡಿಶ್ ಕ್ರೋನಾರ್ (ಸುಮಾರು 7 ಕೋಟಿ ರೂಪಾಯಿ) ನಗದು ಹಣವೂ ಒಳಗೊಂಡಿದೆ.

ಆರ್ಥಿಕತೆಯ ನೊಬೆಲ್ ಯಾಕೆ ವಿಳಂಬ?
ಅಕ್ಟೋಬರ್ ಮೊದಲ ವಾರದಲ್ಲಿ ನೊಬೆಲ್ ಬಹುಮಾನಗಳನ್ನು ಘೋಷಿಸಲಾಗಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ವಿಭಾಗಗಳಲ್ಲಿ ನೊಬೆಲ್ ಪ್ರಕಟಿಸಲಾಗಿದೆ. ಈಗ ಮೂರು ದಿನಗಳ ಬಳಿಕ ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಘೋಷಿಸಲಾಗಿದೆ.
1895ರಲ್ಲಿ ಸ್ವೀಡನ್ನ ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ನೊಬೆಲ್ ಬಹುಮಾನ ಘೋಷಿಸುವ ಪರಂಪರೆ ಆರಂಭವಾಯಿತು. ಫಿಸಿಕ್ಸ್, ಕೆಮಿಸ್ಟ್ರಿ, ಫಿಸಿಯೋಲಜಿ/ಮೆಡಿಸಿನ್ ಮತ್ತು ಪೀಸ್ ನೊಬೆಲ್ ಕೊಡಲಾಗುತ್ತಿತ್ತು. ಆಗ ಎಕನಾಮಿಕ್ಸ್ನಲ್ಲಿ ನೊಬೆಲ್ ಕೊಡಲಾಗುತ್ತಿರಲಿಲ್ಲ. ಸ್ವೀಡನ್ ದೇಶದ ಸೆಂಟ್ರಲ್ ಬ್ಯಾಂಕ್ ಇದೇ ಆಲ್ಫ್ರೆಡ್ ನೊಬೆಲ್ ಹೆಸರಿನಲ್ಲಿ 1969ರಿಂದ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಕೊಡುವ ಪದ್ಧತಿ ಆರಂಭಿಸಿತು.
ಇತರ ನೊಬೆಲ್ ವಿಜೇತರು
2022ರಲ್ಲಿ ಭೌತಶಾಸ್ತ್ರದಲ್ಲಿ ಅಲೇನ್ ಆಸ್ಪೆಕ್ಟ್, ಜಾನ್ ಕ್ಲಾಸರ್ ಮತ್ತು ಆಂಟೋನ್ ಜೇಲಿಂಗರ್ ಈ ಮೂವರಿಗೆ ನೊಬೆಲ್ ನೀಡಲಾಗಿದೆ. ಸಣ್ಣ ವಸ್ತುಗಳನ್ನು ಪ್ರತ್ಯೇಕ ಮಾಡಿದರೂ ಪರಸ್ಪರ ಹೇಗೆ ಸಂಪರ್ಕಿತವಾಗಿರುತ್ತವೆ ಎಂಬುದನ್ನು ಇವರು ನಿರೂಪಿಸಿದ್ದರು. ಇದು ಸ್ಪೆಷಲಸ್ಡ್ ಕಂಪ್ಯೂಟಿಂಗ್ ಮತ್ತು ಮಾಹಿತಿ ಎನ್ಕ್ರಿಪ್ಟ್ ಮಾಡಲು ಸಹಾಯವಾಗುತ್ತದೆ.
ಇನ್ನು ರಾಸಾಯನ ಶಾಸ್ತ್ರದಲ್ಲಿ ಕರೋಲಿನ್ ಬೆರ್ಟೋಜಿ, ಬ್ಯಾರಿ ಶಾರ್ಪ್ಲೆಸ್, ಮಾರ್ಟನ್ ಮೆಲ್ದಾಲ್ ಅವರಿಗೆ ನೊಬೆಲ್ ಸಿಕ್ಕಿದೆ. ಫ್ರಾನ್ಸ್ ದೇಶದ ಆನೀ ಎರ್ನಾಕ್ಸ್ಗೆ ಸಾಹಿತ್ಯದಲ್ಲಿ ನೊಬೆಲ್ ಸಿಕ್ಕಿತು. ಅಲೆಸ್ ಬಿಯಾಲಿಯಾಸ್ಕಿ ಹಾಗೂ ರಷ್ಯ ಮತ್ತು ಉಕ್ರೇನ್ನ ಮಾನವ ಹಕ್ಕು ಸಂಘಟನೆಗಳಿಗೆ ನೊಬೆಲ್ ಶಾಂತಿ ಬಹುಮಾನ ದೊರಕಿತು.
ಇನ್ನು, ಅರ್ಥಶಾಸ್ತ್ರದಲ್ಲಿ ಈ ವರ್ಷ ಬೆನ್ ಬೆರ್ನಾನ್ಕೆ, ಡೌಗ್ಲಸ್ ಡೈಮಂಡ್ ಮತ್ತು ಫಿಲಿಪ್ ಡೈಬವಿಗ್ ಅವರಿಗೆ ನೊಬೆಲ್ ಸಿಕ್ಕಿದೆ. ಕಳೆದ ಬಾರಿ ಈ ಬಹುಮಾನ ಡೇವಿಡ್ ಕಾರ್ಡ್ ಎಂಬುವರಿಗೆ ದೊರಕಿತ್ತು. ಕನಿಷ್ಠ ವೇತನ, ವಲಸೆ ಮತ್ತು ಶಿಕ್ಷಣವು ಹೇಗೆ ಕಾರ್ಮಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಡೇವಿಡ್ ಕಾರ್ಡ್ ತಮ್ಮ ಸಂಶೋಧನೆಯಲ್ಲಿ ಕಂಡುಹಿಡಿದಿದ್ದರು.
ಜೋಶುವಾ ಆಂಗ್ರಿಸ್ಟ್ ಮತ್ತು ಗ್ಯೂಡೋ ಇಂಬೆನ್ಸ್ ಅವರಿಗೂ ಕಳೆದ ವರ್ಷ ಅರ್ಥಶಾಸ್ತ್ರದಲ್ಲಿ ನೊಬೆಲ್ ಸಿಕ್ಕಿತ್ತು.
(ಒನ್ಇಂಡಿಯಾ ಸುದ್ದಿ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications