Nobel Prize 2022 : ಹಣಕಾಸು ಬಿಕ್ಕಟ್ಟಿಗೆ ಪರಿಹಾರ ಹುಡುಕಿದ ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪುರಸ್ಕಾರ
ವಾಷಿಂಗ್ಟನ್, ಅ. 10: ಬ್ಯಾಂಕ್ ಮತ್ತು ಹಣಕಾಸು ಬಿಕ್ಕಟ್ಟು ಮೇಲೆ ಸಂಶೋಧನೆ ಮಾಡಿದ್ದ ಮೂವರು ಅರ್ಥಶಾಸ್ತ್ರಜ್ಞರಿಗೆ 2022ರ ನೊಬೆಲ್ ಬಹುಮಾನ ಸಿಕ್ಕಿದೆ.
ನೊಬೆಲ್ ಬಹುಮಾನ ಪಡೆದ ಬೆನ್ ಎಸ್ ಬೆರ್ನಾಂಕೆ, ಡೌಗ್ಲಾಸ್ ಡಬ್ಲ್ಯು ಡೈಮಂಡ್ ಮತ್ತು ಫಿಲಿಪ್ ಡಬ್ಲ್ಯು ಡೈಬವಿಗ್ ಅವರು ಅಮೆರಿಕದ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಇವರು ಮಾಡಿದ ಸಂಶೋಧನೆಯಿಂದ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಎದುರಿಸಲು ಸಹಾಯವಾಗಿದೆ. ಹಣಕಾಸು ಬಿಕ್ಕಟ್ಟುಗಳು ದೀರ್ಘಾವಧಿ ಆರ್ಥಿಕ ಹಿಂಜರಿತಕ್ಕೆ ಬೀಳದಂತೆ ಹೇಗೆ ನಿರ್ವಹಿಸಬಹುದು ಎಂಬುದನ್ನು ಇವರ ಸಂಶೋಧನೆಗಳು ತೋರಿಸಿಕೊಟ್ಟಿವೆ. ಇವರ ಕಾರ್ಯಕ್ಕೆ ಮನ್ನಣೆ ಕೊಡಲು ನೊಬೆಲ್ ಬಹುಮಾನ ದಯಪಾಲಿಸಲಾಗುತ್ತಿದೆ.
ಈ ಮೂವರಿಗೆ ಸಿಗುವ ನೊಬೆಲ್ ಬಹುಮಾನದಲ್ಲಿ ಸುಮಾರು 1 ಕೋಟಿ ಸ್ವೀಡಿಶ್ ಕ್ರೋನಾರ್ (ಸುಮಾರು 7 ಕೋಟಿ ರೂಪಾಯಿ) ನಗದು ಹಣವೂ ಒಳಗೊಂಡಿದೆ.

ಆರ್ಥಿಕತೆಯ ನೊಬೆಲ್ ಯಾಕೆ ವಿಳಂಬ?
ಅಕ್ಟೋಬರ್ ಮೊದಲ ವಾರದಲ್ಲಿ ನೊಬೆಲ್ ಬಹುಮಾನಗಳನ್ನು ಘೋಷಿಸಲಾಗಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ವಿಭಾಗಗಳಲ್ಲಿ ನೊಬೆಲ್ ಪ್ರಕಟಿಸಲಾಗಿದೆ. ಈಗ ಮೂರು ದಿನಗಳ ಬಳಿಕ ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಘೋಷಿಸಲಾಗಿದೆ.
1895ರಲ್ಲಿ ಸ್ವೀಡನ್ನ ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ನೊಬೆಲ್ ಬಹುಮಾನ ಘೋಷಿಸುವ ಪರಂಪರೆ ಆರಂಭವಾಯಿತು. ಫಿಸಿಕ್ಸ್, ಕೆಮಿಸ್ಟ್ರಿ, ಫಿಸಿಯೋಲಜಿ/ಮೆಡಿಸಿನ್ ಮತ್ತು ಪೀಸ್ ನೊಬೆಲ್ ಕೊಡಲಾಗುತ್ತಿತ್ತು. ಆಗ ಎಕನಾಮಿಕ್ಸ್ನಲ್ಲಿ ನೊಬೆಲ್ ಕೊಡಲಾಗುತ್ತಿರಲಿಲ್ಲ. ಸ್ವೀಡನ್ ದೇಶದ ಸೆಂಟ್ರಲ್ ಬ್ಯಾಂಕ್ ಇದೇ ಆಲ್ಫ್ರೆಡ್ ನೊಬೆಲ್ ಹೆಸರಿನಲ್ಲಿ 1969ರಿಂದ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಕೊಡುವ ಪದ್ಧತಿ ಆರಂಭಿಸಿತು.
ಇತರ ನೊಬೆಲ್ ವಿಜೇತರು
2022ರಲ್ಲಿ ಭೌತಶಾಸ್ತ್ರದಲ್ಲಿ ಅಲೇನ್ ಆಸ್ಪೆಕ್ಟ್, ಜಾನ್ ಕ್ಲಾಸರ್ ಮತ್ತು ಆಂಟೋನ್ ಜೇಲಿಂಗರ್ ಈ ಮೂವರಿಗೆ ನೊಬೆಲ್ ನೀಡಲಾಗಿದೆ. ಸಣ್ಣ ವಸ್ತುಗಳನ್ನು ಪ್ರತ್ಯೇಕ ಮಾಡಿದರೂ ಪರಸ್ಪರ ಹೇಗೆ ಸಂಪರ್ಕಿತವಾಗಿರುತ್ತವೆ ಎಂಬುದನ್ನು ಇವರು ನಿರೂಪಿಸಿದ್ದರು. ಇದು ಸ್ಪೆಷಲಸ್ಡ್ ಕಂಪ್ಯೂಟಿಂಗ್ ಮತ್ತು ಮಾಹಿತಿ ಎನ್ಕ್ರಿಪ್ಟ್ ಮಾಡಲು ಸಹಾಯವಾಗುತ್ತದೆ.
ಇನ್ನು ರಾಸಾಯನ ಶಾಸ್ತ್ರದಲ್ಲಿ ಕರೋಲಿನ್ ಬೆರ್ಟೋಜಿ, ಬ್ಯಾರಿ ಶಾರ್ಪ್ಲೆಸ್, ಮಾರ್ಟನ್ ಮೆಲ್ದಾಲ್ ಅವರಿಗೆ ನೊಬೆಲ್ ಸಿಕ್ಕಿದೆ. ಫ್ರಾನ್ಸ್ ದೇಶದ ಆನೀ ಎರ್ನಾಕ್ಸ್ಗೆ ಸಾಹಿತ್ಯದಲ್ಲಿ ನೊಬೆಲ್ ಸಿಕ್ಕಿತು. ಅಲೆಸ್ ಬಿಯಾಲಿಯಾಸ್ಕಿ ಹಾಗೂ ರಷ್ಯ ಮತ್ತು ಉಕ್ರೇನ್ನ ಮಾನವ ಹಕ್ಕು ಸಂಘಟನೆಗಳಿಗೆ ನೊಬೆಲ್ ಶಾಂತಿ ಬಹುಮಾನ ದೊರಕಿತು.
ಇನ್ನು, ಅರ್ಥಶಾಸ್ತ್ರದಲ್ಲಿ ಈ ವರ್ಷ ಬೆನ್ ಬೆರ್ನಾನ್ಕೆ, ಡೌಗ್ಲಸ್ ಡೈಮಂಡ್ ಮತ್ತು ಫಿಲಿಪ್ ಡೈಬವಿಗ್ ಅವರಿಗೆ ನೊಬೆಲ್ ಸಿಕ್ಕಿದೆ. ಕಳೆದ ಬಾರಿ ಈ ಬಹುಮಾನ ಡೇವಿಡ್ ಕಾರ್ಡ್ ಎಂಬುವರಿಗೆ ದೊರಕಿತ್ತು. ಕನಿಷ್ಠ ವೇತನ, ವಲಸೆ ಮತ್ತು ಶಿಕ್ಷಣವು ಹೇಗೆ ಕಾರ್ಮಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಡೇವಿಡ್ ಕಾರ್ಡ್ ತಮ್ಮ ಸಂಶೋಧನೆಯಲ್ಲಿ ಕಂಡುಹಿಡಿದಿದ್ದರು.
ಜೋಶುವಾ ಆಂಗ್ರಿಸ್ಟ್ ಮತ್ತು ಗ್ಯೂಡೋ ಇಂಬೆನ್ಸ್ ಅವರಿಗೂ ಕಳೆದ ವರ್ಷ ಅರ್ಥಶಾಸ್ತ್ರದಲ್ಲಿ ನೊಬೆಲ್ ಸಿಕ್ಕಿತ್ತು.
(ಒನ್ಇಂಡಿಯಾ ಸುದ್ದಿ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications