ಮಂಗಳನ ಅಂಗಳದಲ್ಲಿ ಭಾರತ-ಅಮೆರಿಕ ಜುಗಲ್ ಬಂದಿ
ವಾಷಿಂಗ್ ಟನ್, ಫೆಬ್ರವರಿ, 29: ಭಾರತದ ಸಂಶೋಧನಾ ಸಾಧನೆಗೆ ಮತ್ತೊಂದು ಗರಿ ಸಿಕ್ಕಿದೆ. ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಭಾರತದ ಮಂಗಳಯಾನದ ಯಶಸ್ಸನ್ನು ಕೊಂಡಾಡಿದ್ದು ಜಂಟಿಯಾಗಿ ಸಂಶೋಧನೆ ನಡೆಸಲು ಆಹ್ವಾನ ನೀಡಿದೆ.
ಭಾರತ ಮತ್ತು ಅಮೆರಿಕ ಜಂಟಿಯಾಗಿ ಮಂಗಳ ಗ್ರಹ ಶೋಧ ನಡೆಸಬಹುದು. ಭಾರತೀಯ ಗಗನ ಯಾತ್ರಿಯೊಬ್ಬರು ಜಂಟಿ ಯೋಜನೆ ಭಾಗವಾಗಿ ಮಂಗಳನ ಮೇಲೆ ಕಾಲಿಡಬಹುದು ಎಂದು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯ (ಜೆಪಿಎಲ್) ನಿರ್ದೇಶಕ ಚಾರ್ಲ್ಸ್ ಎಲಕಿ ಹೇಳಿದ್ದಾರೆ.[ಮಂಗಳನ ಅಂಗಳದ ಬೆರಗುಗೊಳಿಸುವ ಚಿತ್ರಗಳು]

ಮುಂದಿನ ದಶಕದಲ್ಲಿ ಮಂಗಳ ಗ್ರಹ ಯೋಜನೆಯನ್ನು ಹಮ್ಮಿಕೊಳ್ಳಲು ನಾಸಾ ನಿರ್ಧರಿಸಿದೆ. ಸದ್ಯವೇ ಈ ಬಗ್ಗೆ ಸಭೆಯನ್ನು ನಡೆಸಿ ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು. ಮಂಗಳನಲ್ಲಿಗೆ ಮಾನವ ಸಹಿತ ಯಾತ್ರೆಯ ಪೂರ್ವ ಸಿದ್ಧತೆಯನ್ನು ಆರಂಭಿಸಲಾಗುವುದು ಎಂದು ಚಾರ್ಲ್ಸ್ ತಿಳಿಸಿದ್ದಾರೆ.
ಕಡಿಮೆ ವೆಚ್ಚದಲ್ಲಿ ಭಾರತ ಮಂಗಳಯಾನಕ್ಕೆ ಸಂಬಂಧಿಸಿ ಮಾಡಿದ ಸಾಧನೆಯನ್ನು ಮೆಚ್ಚಲೇಬೇಕು. ಇಸ್ರೊದ ಸಾಮರ್ಥ್ಯದ ಬಗ್ಗೆ ಜಗತ್ತು ಅಚ್ಚರಿಗೊಂಡಿದೆ. ಹೀಗಾಗಿ ಇಸ್ರೊ ಜತೆಗೆ ಮಂಗಳ ಗ್ರಹ ಶೋಧ ಕಾರ್ಯಕ್ರಮ ನಡೆಸಲು ನಾಸಾ ಉತ್ಸುಕವಾಗಿದೆ ಎಂದು ಚಾರ್ಲ್ಸ್ ಹೇಳಿದ್ದಾರೆ.[ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?]
ಅಲ್ಲದೇ ಅಮೆರಿಕ, ಯುರೋಪ್, ಫ್ರಾನ್ಸ್ ಮತ್ತು ಇಟಲಿಯನ್ನು ಒಳಗೊಂಡ ಬಾಹ್ಯಾಕಾಶ ಸಂಶೋಧನಾ ಗುಂಪಿಗೆ ಭಾರತವೂ ಸೇರಬೇಕು. ನಿಸಾರ್ ಎಂಬ ಹೆಸರಿನ ವಿನೂತನ ಕಾರ್ಯಕ್ರಮವೊಂದನ್ನು ನಾಸಾ ಮತ್ತು ಇಸ್ರೊ ಸಹಭಾಗಿತ್ವದಲ್ಲಿ 2020ರ ವೇಳೆಗೆ ಆರಂಭಗೊಳ್ಳಲಿದೆ. ಜಗತ್ತಿನಾದ್ಯಂತ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಗುರುತಿಸುವಿಕೆ, ನೈಸರ್ಗಿಕ ವಿಕೋಪಗಳ ಮಾಹಿತಿ ಪಡೆಯುವುದು, ಹವಾಮಾನ ಬದಲಾವಣೆ ತಿಳಿವಳಿಕೆ ಇದರ ಪ್ರಮುಖ ಉದ್ದೇಶವಾಗಿರುತ್ತದೆ ಎಂದು ಚಾರ್ಲ್ಸ್ ತಿಳಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications