ಪತಿ-ಪತ್ನಿ ಮತ್ತು ಅವನು... 2015ರ ಭೀಕರ ಹತ್ಯೆಯ ರಹಸ್ಯ ಬಯಲು!
ಮೆಲ್ಬರ್ನೋ, ಜೂನ್ 23: ಆಸ್ಟ್ರೇಲಿಯದ ಮೆಲ್ಬರ್ನೋದಲ್ಲಿ ವಾಸಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು 2015 ರಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದರು.
ಹತ್ಯೆಯ ಬೆನ್ನು ಹತ್ತಿದ ಪೊಲಿಸರಿಗೆ ಮೊದಮೊದಲು ಯಾವುದೇ ಕುರುಹೂ ಸಿಕ್ಕಿರಲಿಲ್ಲ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದಲ್ಲಿ ಸೈನೈಡ್ ಪತ್ತೆಯಾಗುತ್ತಿದ್ದಂತೆಯೇ ಪೊಲಿಸರ ಅನುಮಾನ ಆತನ ಪತ್ನಿಯತ್ತ ತಿರುಗಿತ್ತು.
ಈ ಕೊಲೆಯ ತನಿಖೆಗೆ ಸಾಕಷ್ಟು ಸಮಯ ತೆಗೆದುಕೊಂಡ ಪೊಲಿಸರು ಕೊನೆಗೂ ಪತ್ನಿ ಮತ್ತು ಆಕೆಯ ಪ್ರಿಯತಮ ಸೇರಿ ಸ್ಯಾಮ್ ಅವರನ್ನು ಕೊಂದಿದ್ದಾರೆಂದು ಪತ್ತೆ ಮಾಡಿದ್ದಾರೆ. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅರುಣ್ ಗೆ 27 ಮತ್ತು ಸೋಫಿಯಾಗೆ 22 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಸೋಫಿಯಾ ಸ್ಯಾಮ್ ಎಂಬ 34 ವರ್ಷ ವಯಸ್ಸಿನ ಮಹಿಳೆ, 36 ವರ್ಷ ವಯಸ್ಸಿನ ಅರುಣ್ ಕಮಲಸನಾನ್ ಎಂಬ ತನ್ನ ಮಾಜಿ ಪ್ರಿಯತಮನೊಂದಿಗೆ ಸೇರಿ ಕಿತ್ತಳೆ ಜ್ಯೂಸಿನಲ್ಲಿ ಸೈನೈಡ್ ಹಾಕಿ ಪತಿಯನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದರು.
Photos of a 'heartbroken' Sofia kissing Sam in his coffin had appeared in many Australian newspapers when the case surfaced in 2015. Now, upon being sentenced to 22 years in jail for murdering Sam, Sofia sat in court 'unmoved'.https://t.co/7BZ8kMvqRa
— Shreya (@ShreyaTeresita) June 22, 2018
ಈ ಕುರಿತು ಅನುಮಾನ ವ್ಯಕ್ತವಾಗಿತ್ತಾದರೂ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ನಂತರ ಸೋಫಿಯಾ ಅವರ ಡೈರಿಯಲ್ಲಿ ಅರುಣ್ ಮತ್ತು ತಾವು ಪ್ರೀತಿಸುತ್ತಿರುವ ಬಗ್ಗೆ ಎಲ್ಲೋ ಒಂದು ಕಡೆ ಬರೆದಿದ್ದನ್ನೇ ಎಳೆಯನ್ನಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರು ಕೃತ್ಯ ಬಯಲಿಗೆಳೆಯುವಲ್ಲಿ ಸಫಲರಾಗಿದ್ದಾರೆ.
ಈ ಕೃತ್ಯವನ್ನು ಇಲ್ಲಿನ ನ್ಯಾಯಾಲಯ, ಅತ್ಯಂತ ಹೀನ ಕೃತ್ಯ ಎಂದು ವ್ಯಾಖ್ಯಾನಿಸಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications