ಸಿಲಿಕಾನ್ ವ್ಯಾಲಿಯಲ್ಲಿ ಮೋದಿ, ಡಿಜಿಟಲ್ ಇಂಡಿಯಾ ಮೋಡಿ
ಕ್ಯಾಲಿಫೋರ್ನಿಯಾ, ಸೆ.27: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ವಿಶ್ವದ ಅಗ್ರಗಣ್ಯ ಸಂಸ್ಥೆಗಳ ಸಿಇಒಗಳನ್ನು ಭೇಟಿ ಮಾಡಿದ್ದಾರೆ. ಡಿಜಿಟಲ್ ಇಂಡಿಯಾ ಹಾಗೂ ಭಾರತದಲ್ಲಿ ಸ್ಟಾರ್ ಅಪ್ ಕಂಪನಿಗಳಿಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಮೋದಿ ಅವರು ಐಟಿ ದಿಗ್ಗಜರಿಗೆ ತಿಳಿಸಿದ್ದಾರೆ.
ಅಮಿ ಬೆರಾ, ಜಾರ್ಜ್ ಹೋಲ್ಡಿಂಗ್ ಸೇರಿ ಅಮೆರಿಕದ ಪ್ರಭಾವಿ ಸಂಸದರು ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ನಂತರ ಟೆಸ್ಲಾ, ಫೇಸ್ಬುಕ್, ಗೂಗಲ್, ಕ್ವಾಲ್ ಕಾಮ್ ನಂಥ ಐಟಿ ದಿಗ್ಗಜ ಸಂಸ್ಥೆಗಳ ಸಿಇಒಗಳ ಜತೆ ವಿಚಾರ ವಿನಿಮಯ, ಮಹತ್ವದ ಡಿನ್ನರ್ ಕಾರ್ಯಕ್ರಮವನ್ನು ಮೋದಿ ಅವರು ಯಶಸ್ವಿಯಾಗಿ ಪೂರೈಸಿದ್ದಾರೆ.[ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಮಾಡಿದ ಸಿಡಿಲಿನಂಥ ಭಾಷಣ ಕೇಳಿ]
ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ ಮೋದಿಯವರ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಐಟಿ ದಿಗ್ಗಜರು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಗೆ ಉತ್ಸುಕರಾಗಿದ್ದಾರೆ. ಟೆಸ್ಲಾ ಕಾರು ಕಂಪನಿ, ಗೂಗಲ್ ಸೇರಿದಂತೆ ಪ್ರಮುಖ ಸಂಸ್ಥೆಯ ಯಶೋಗಾಥೆಯನ್ನು ಕಾರ್ಯವೈಖರಿಯನ್ನು ಕಂಡ ಮೋದಿ ಅವರು ಭಾರತದಲ್ಲಿ ಮೇಕ್ ಇನ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆ ಸಾಕಾರಕ್ಕೆ ಸಹಕರಿಸುವಂತೆ ಕೋರಿದ್ದಾರೆ.

33 ವರ್ಷಗಳ ನಂತರ ಭಾರತ ಪ್ರಧಾನಿಯ ಭೇಟಿ
ಗೂಗಲ್ ಕ್ಯಾಂಪಸ್ ಭೇಟಿ, ಭಾರತ ಮೂಲದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರೊಂದಿಗೆ ಮಾತುಕತೆ, ಟೆಸ್ಲಾ ಕಂಪನಿ ಹಾಗೂ ಪುನರ್ ಬಳಕೆ ಇಂಧನ, ಶಕ್ತಿ ಬಗ್ಗೆ ಎಲೊನ್ ಮಸ್ಕ್ ಜೊತೆ ಚರ್ಚೆ, ಆಪಲ್ ಸಿಒಇ ಟಿಮ್ ಕುಕ್ ಜೊತೆ ಚರ್ಚೆ,
ಅಡೋಬ್ ಸಿಇಒ ಶಂತನು ನಾರಾಯಣ್ ಭೇಟಿ, ಅಂತ್ಯದಲ್ಲಿ ಯುಎಸ್ ಡಿಒ ಸಿ ಸ್ಟಾನ್ ಫೋರ್ಡ್ ವಿವಿಯಲ್ಲಿ ಭಾಷಣ, ಸ್ಟಾರ್ ಅಪ್ ಕಂಪನಿಗಳ ಬಗ್ಗೆ ಮಾಹಿತಿ ಇವಿಷ್ಟು ಮೋದಿ ಅವರ ಕಾರ್ಯಕ್ರಮವಾಗಿದೆ.
|
ಮೈಕ್ರೋಸಾಫ್ಟ್ ಸಂಸ್ಥೆಯಿಂದ ಭಾರತಕ್ಕೆ ಭರವಸೆ
ಮೈಕ್ರೋಸಾಫ್ಟ್ ಸಂಸ್ಥೆಯಿಂದ ಭಾರತಕ್ಕಾಗಿ ವಿಶೇಷ ಸಾಧನ, ತಂತ್ರಾಂಶ ರಚನೆಯ ಭರವಸೆ ಸಿಕ್ಕಿದೆ. ಕ್ವಾಲ್ ಕಾಮ್, ಸಿಸ್ಕೋ, ಅಡೋಬ್, ಗೂಗಲ್ ಸೇರಿದಂತೆ ಅನೇಕ ಸಂಸ್ಥೆಗಳ ಉದ್ಯಮಿಗಳನ್ನು ಮೋದಿ ಭೇಟಿ ಮಾಡಿದ್ದಾರೆ
|
ಡಿಜಿಟಲ್ ಇಂಡಿಯಾ ಬಗ್ಗೆ ಆಪಲ್ ಆಸಕ್ತಿ
ಭಾರತದೊಡನೆ ಆಪಲ್ ಸಂಸ್ಥೆ ಉತ್ತಮ ಬಾಂಧವ್ಯ ಹೊಂದಿದೆ. ಸ್ಟೀವ್ ಜಾಬ್ಸ್ ಅವರು ಭಾರತದ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ. ಡಿಜಿಟಲ್ ಇಂಡಿಯಾ ಜೊತೆ ನಾವು ಕೈಜೋಡಿಸಲು ಸಿದ್ಧ ಎಂದ ಆಪಲ್ ಸಿಇಒ ಟಿಮ್ ಕುಕ್
|
ಟೆಸ್ಲಾ ಕಂಪನಿಗೆ ಭೇಟಿ ನೀಡಿದ ಮೋದಿ
ಟೆಸ್ಲಾ ಕಂಪನಿಗೆ ಭೇಟಿ ನೀಡಿದ ಮೋದಿ ಅವರು ಅಲ್ಲಿನ 14,000 ನೌಕರರು ಹಾಗೂ ಕಾರ್ಖಾನೆಯ ವಾತಾವರಣದ ಮಾಹಿತಿ ಪಡೆದುಕೊಂಡರು.
|
ಸಿಇಒಗಳ ಜೊತೆಗೆ ಭಾರತೀಯ ಸಮುದಾಯದ ಭೇಟಿ
ಸಿಲಿಕಾನ್ ವ್ಯಾಲಿಯಲ್ಲಿರುವ ಸಿಖ್ ಹಾಗೂ ಗುಜರಾತ್ ಸಮುದಾಯವನ್ನು ಮೋದಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.
|
ಕ್ಯಾಲಿಫೋರ್ನಿಯಾಗೆ ಬಂದಿಳಿದ ಮೋದಿಗೆ ಸಿಕ್ಕ ಸ್ವಾಗತ
ಕ್ಯಾಲಿಫೋರ್ನಿಯಾಗೆ ಬಂದಿಳಿದ ಮೋದಿಗೆ ಸಿಕ್ಕ ಸ್ವಾಗತ ಈ ರೀತಿ ಇತ್ತು.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications