Breaking: ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿ ಲೆ.ಜನರಲ್ ಅಸೀಮ್ ಮುನೀರ್ ನೇಮಕ
ಇಸ್ಲಮಾಬಾದ್, ನವೆಂಬರ್ 24: ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್-ಜನರಲ್ ಅಸಿಮ್ ಮುನೀರ್ ಅನ್ನು ನೇಮಿಸಲಾಗಿದೆ. ಪರಮಾಣು-ಸಜ್ಜಿತ ರಾಷ್ಟ್ರದ ಆಡಳಿತದಲ್ಲಿ ಸೇನಾ ಮುಖ್ಯಸ್ಥರ ಸ್ಥಾನವು ಅತ್ಯಂತ ಪ್ರಭಾವಶಾಲಿ ಹಾಗೂ ಅಸಾಧಾರಣ ಪಾತ್ರವನ್ನು ವಹಿಸುತ್ತದೆ.
ಪಾಕಿಸ್ತಾನದ ಮುಖ್ಯ ಬೇಹುಗಾರರೂ ಆಗಿದ್ದ ಮುನೀರ್, ನಿರ್ಗಮಿತ ಜನರಲ್ ಕಮರ್ ಜಾವೇದ್ ಬಾಜ್ವಾರಿಂದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಅವರು ಮುಂದಿನ ಆರು ವರ್ಷಗಳ ಅವಧಿಯವರೆಗೂ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ, ನಂತರ ಇದೇ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅವರ ನೇಮಕಾತಿಯು ಮಿಲಿಟರಿ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಡುವಿನ ವಿವಾದದೊಂದಿಗೆ ಹೊಂದಾಣಿಕೆಯಾಗುತ್ತಿದೆ. ಏಕೆಂದರೆ ಇಮ್ರಾನ್ ಖಾನ್ ಇದೇ ವರ್ಷದ ಆರಂಭದಲ್ಲಿ ಅವರನ್ನು ಹೊರಹಾಕುವಲ್ಲಿ ಸೇನೆಯ ಪಾತ್ರವು ಪ್ರಮುಖವಾಗಿತ್ತು ಎಂದು ದೂಷಿಸಿದ್ದರುರೆ. "ಅರ್ಹತೆ, ಕಾನೂನು ಮತ್ತು ಸಂವಿಧಾನದ ಪ್ರಕಾರ ಈ ನೇಮಕವಾಗಿದೆ," ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಸೇನೆಯದ್ದೇ ಪ್ರಮುಖ ಪಾತ್ರ
ಪಾಕಿಸ್ತಾನ ಸೇನೆಯು ಐತಿಹಾಸಿಕವಾಗಿ ದೇಶೀಯ ಮತ್ತು ವಿದೇಶಿ ರಾಜಕೀಯದಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿದೆ. ಇದರ ಮಧ್ಯೆ ಲೆಫ್ಟಿನೆಂಟ್ ಜನರಲ್ ಅಸೀಫ್ ಮುನೀರ್ ನೇಮಕಾತಿಯು ಪಾಕಿಸ್ತಾನದ ದುರ್ಬಲವಾದ ಪ್ರಜಾಪ್ರಭುತ್ವ, ನೆರೆಯ ಭಾರತ ಮತ್ತು ತಾಲಿಬಾನ್-ಆಡಳಿತದ ಅಫ್ಘಾನಿಸ್ತಾನದೊಂದಿಗಿನ ಅದರ ಸಂಬಂಧವನ್ನು ನಿರ್ಧರಿಸುತ್ತದೆ. ಅಲ್ಲದೇ ಚೀನಾ ಅಥವಾ ಯುನೈಟೆಡ್ ಸ್ಟೇಟ್ಸ್ ಕಡೆಗೆ ಅದರ ಪರಿಣಾಮವನ್ನು ಬೀರುತ್ತದೆ.
ರಾಜಕೀಯದಲ್ಲಿ ಪಾತ್ರ ವಹಿಸುವುದಿಲ್ಲ
ನಿರ್ಗಮಿತ ಸೇನಾ ಮುಖ್ಯಸ್ಥರಾದ ಬಜ್ವಾ, ಭವಿಷ್ಯದಲ್ಲಿ ರಾಷ್ಟ್ರೀಯ ರಾಜಕೀಯದಲ್ಲಿ ಸೇನೆಯು ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ ಎಂದು ಬುಧವಾರ ಹೇಳಿದರು. ಯುಎಸ್ ಬೆಂಬಲಿತ ಪಿತೂರಿ ತನ್ನ ಸರ್ಕಾರದ ಮೇಲಿದೆ ಎಂಬ ಖಾನ್ ಹೇಳಿಕೆಗಳನ್ನು "ನಕಲಿ ಮತ್ತು ಸುಳ್ಳು" ಎಂದು ತಿರಸ್ಕರಿಸಿದರು.
ರಾವಲ್ಪಿಂಡಿಯಲ್ಲಿ ಇಮ್ರಾನ್ ಖಾನ್ ಪ್ರತಿಭಟನೆ
ಸರ್ಕಾರದ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಈ ತಿಂಗಳ ಆರಂಭದಲ್ಲಿ ಬಂದೂಕಿನ ದಾಳಿಯಲ್ಲಿ ಗಾಯಗೊಂಡ ಇಮ್ರಾನ್ ಖಾನ್, ಮುಂಚಿನ ಚುನಾವಣೆಗಳಿಗೆ ಕರೆ ನೀಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಸೇನೆಯ ಪ್ರಧಾನ ಕಛೇರಿಯ ನೆಲೆಯಾದ ರಾವಲ್ಪಿಂಡಿಯಲ್ಲಿ ಶನಿವಾರ ಪ್ರತಿಭಟನೆಯನ್ನು ನಡೆಸಲು ಯೋಜಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications