ಹವಾಯಿ ಜ್ವಾಲಾಮುಖಿ ಚಾಚಿದ ಕೆನ್ನಾಲಿಗೆ! ಚಿತ್ರಗಳಲ್ಲಿ ನೋಡಿ
ಬೆಂಗಳೂರು, ಜೂನ್ 12: ಹವಾಯಿಯಲ್ಲಿ ಕಳೆದ 15 ದಿನಗಳಿಂದ ಜ್ವಾಲಾಮುಖಿ ಉದ್ಭವವಾಗಿದ್ದು ಅಲ್ಲಿನ ಆಸ್ತಿ ಪಾಸ್ತಿ ನಷ್ಟವಾಗಿದೆ ಜತೆಗೆ ಸ್ಥಳೀಯರು ತಮ್ಮ ನಿವಾಸಸ್ಥಾನವನ್ನು ಬಿಟ್ಟು ಬೇರೆಡೆಗೆ ತೆರಳಿದ್ದಾರೆ.
ಕಿಲುವಾ ಜ್ವಾಲಾಮುಖಿಯ ಲಾವಾ ರಸ ಕಾಲುವೆಗಳ ಮೂಲಕ ಹರಿಯುತ್ತಿದ್ದು, ಹವಾಯಿ ದ್ವೀಪದ ಕಪೊಹೊ ಬೇ ತಲುಪಿದೆ. ಈ ದೃಶ್ಯವನ್ನು ಯುಎಸ್ ಜಿಯಾಲಾಜಿಕಲ್ ಸರ್ವೆ ಸೆರೆ ಹಿಡಿದಿದೆ. ಲಾವಾ ರಸ ಸರಿಸುಮಾರು 100ರಿಂದ 300 ಮೀಟರ್ಗಳಷ್ಟು ಅಗಲ ಹರಿಯುತ್ತಿದ್ದು, ಇಡೀ ಜ್ವಾಲಾಮುಖಿಯ ಲಾವಾರಸದ ಹರಿವನ್ನು ಈ ದೃಶ್ಯ ಕಟ್ಟಿಕೊಡುತ್ತದೆ.
ಸುರಿಯುತ್ತಿರುವ ಮಹಾಮಳೆಯ ನಡುವೆಯೇ ಮಕ್ಕಳು ಜಡಿಮಳೆಯಲ್ಲಿ ಮಿಂದು ಮಜಾ ಅನುಭವಿಸುತ್ತಿದ್ದಾರೆ. ದಾದರ್, ಪರೇಲ್, ಕ್ ಪರೇಡ್, ಬಾಂದ್ರಾ, ಬೋರಿವಿಲಿ, ಅಂಧೇರಿ ಮತ್ತಿತರ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸಮುದ್ರದಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.
ಇಡೀ ವಿಶ್ವದ ಗಮನ ಸೆಳೆದಿರುವ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೋರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿ ವೇಳೆ ಕರಣದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪರಸ್ಪರ ಹಸ್ತಲಾಘವ ಮಾಡುತ್ತಿರುವ ದೃಶ್ಯಾವಳಿಯನ್ನು ಅಧಿಕೃತ ಪ್ರಸಾರದ ಹಕ್ಕು ಹೊಂದಿದ ಮೀಡಿಯಾ ಕಾರ್ಪ್ ಪಿಟಿಇ ಲಿಮಿಟೆಡ್ ಬಿಡುಗಡೆ ಮಾಡಿದೆ ಇನ್ನು ಪ್ರಮುಖ ಘಟನೆಗಳನ್ನು ಚಿತ್ರದ ಮೂಲಕ ವೀಕ್ಷಿಸಬಹುದು.

ಕಪೊಹೊದಲ್ಲಿ ಜ್ವಾಲಾಮುಖಿ ಚಾಚಿದ ಬೆಂಕಿಯ ಕೆನ್ನಾಲಿಗೆ
ಕಪೊಹೊದಲ್ಲಿ ಕಳೆದ 15 ದಿನಗಳಿಂದ ಜ್ವಾಲಾಮುಖಿ ಉದ್ಭವವಾಗಿದ್ದು ಅಲ್ಲಿನ ಆಸ್ತಿ ಪಾಸ್ತಿ ನಷ್ಟವಾಗಿದೆ ಜತೆಗೆ ಸ್ಥಳೀಯರು ತಮ್ಮ ನಿವಾಸಸ್ಥಾನವನ್ನು ಬಿಟ್ಟು ಬೇರೆಡೆಗೆ ತೆರಳಿದ್ದಾರೆ.

ಮುಂಬೈನಲ್ಲಿ ಸಮುದ್ರದ ಅಲೆಯೊಂದಿಗೆ ಮಕ್ಕಳ ಆಟ
ಮುಂಬೈನಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಭಾರಿ ಮಳೆಯಾಗುತ್ತಿದೆ. ಆದರೆ ಆ ಮಳೆಯನ್ನೂ ಲೆಕ್ಕಿಸದೆ ಸಮುದ್ರದ ಬಳಿ ತೆರಳಿ ಅಲೆಯೊಂದಿಗೆ ಮಕ್ಕಳು ಕುಣಿದಾಡಿ ಸಂತಸ ಪಡುತ್ತಿರುವ ದೃಶ್ಯ.

ಅಮೇರಿಕಾ ಅಧ್ಯಕ್ಷ ಟ್ರಂಪ್ ಹಾಗೂ ದಕ್ಷಿಣ ಕೊರಿಯಾ ಕಿಮ್ ಜಾಂಗ್ ಉನ್ ಭೇಟಿ
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ ಹಾಗೂ ದಕ್ಷಿಣ ಕೊರಿಯಾ ಕಿಂಗ್ ಜಾಂಗ್ ಉನ್ ಸಿಂಗಾಪುರದಲ್ಲಿ ಭೇಟಿ ಮಾಡಿದರು.

ತುಂಬಿ ತುಳುಕುತ್ತಿರುವ ಭದ್ರಾ ನದಿ: ಸಂಚಾರ ಅಸ್ತವ್ಯಸ್ತ
ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು, ಹಾಸನದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಭದ್ರಾ ನದಿ ತುಂಬಿದ್ದು, ಬ್ರಿಡ್ಜ್ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸೇನೆಯ ಮಡಿಲಲ್ಲಿ ಉಚಿತ ತರಬೇತಿ ಶಿಬಿರ
ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮಂಗಳವಾರ ವೈದ್ಯಕೀಯ ಕೋರ್ಸ್ಗಳ ಪ್ರವೇಶ ಪರೀಕ್ಷೆ ನೀಟ್ಗಾಗಿ ಉಚಿತ ತರಬೇತ ನೀಡುವ ಶಿಬಿರಕ್ಕೆ 15 ಕಾರ್ಪ್ಸ್ನ ಕಮಾಂಡರ್ ಲೆಫ್ಟಿನಂಟ್ ಜನರಲ್ ಎ.ಕೆ.ಭಟ್ ಚಾಲನೆ ನೀಡಿದರು. ಕಾಶ್ಮೀರ್ ಸೂಪರ್ 30 ಎಂಬ ರೆಸಿಡೆನ್ಶಿಯಲ್ ತರಬೇತಿ ವರ್ಗದಲ್ಲಿ ಕಣಿವೆ ರಾಜ್ಯದ ಪ್ರತಿಭಾವಂತ ಮಕ್ಕಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ.

ಕೊಲ್ಕತ್ತಾದಲ್ಲಿ ಚೀನೀಯರ ನೃತ್ಯ ವೈಭವ
ಕೊಲ್ಕತ್ತದಲ್ಲಿ ನಡೆದ ಇಂಡೋ-ಚೀನಾ ಸಂಸ್ಕೃತಿ ವಿನಿಯಮದ ಕಾರ್ಯಕ್ರಮದಲ್ಲಿ ಚೀನೀಯರು ತಮ್ಮ ನೃತ್ಯವನ್ನು ಪ್ರದರ್ಶಿಸಿದ್ದು ಹೀಗೆ

ಕೋರ್ಟ್ ಎದುರು ರಾಹುಲ್ ಗಾಂಧಿ ಹಾಜರು
ಠಾಣೆಯ ಭಿವಂಡಿ ಕೋರ್ಟ್ಗೆ ಮಂಗಳವಾರ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಜರಾಗಿ ಹೊರ ಬಂದ ದೃಶ್ಯ. 2014ರಲ್ಲಿ ಲೋಕಸಭೆ ಚುನಾವಣೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿ ಕೊಲೆಯ ಹಿಂದೆ ಆರ್ಎಸ್ಎಸ್ ಕೈವಾಡ ಇದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ರಾಹುಲ್ ಇಂದು ನ್ಯಾಯಾಲಯಕ್ಕೆ ಹಾಜರಾದರು.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ.. -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications