ಕೊರೊನಾ ಸಾವಿನ ರುದ್ರ ನರ್ತನದಲ್ಲೂ ಪಾಕ್ ಸುಳ್ಳು: ಅಧಿಕೃತ ಸಾವು 143, ಅನಧಿಕೃತ 3,245?
ತನ್ನ ನೆಲದಲ್ಲಿ ಉಗ್ರ ಕೃತ್ಯಗಳಿಗೆ ನೀರೆರೆಯುತ್ತಾ, ವಿಶ್ವದ ಮುಂದೆ ಸಂಭಾವಿತನಂತೆ ಫೋಸ್ ಕೊಡುತ್ತಿದ್ದ ಪಾಕಿಸ್ತಾನದ ನಿಜಬಣ್ಣ ಹಲವು ಬಾರಿ ಬಟಾ ಬಯಲುಗೊಂಡಿದ್ದು ಗೊತ್ತೇ ಇದೆ.
ಆದರೆ, ಕೊರೊನಾ ಸಾವಿನ ವಿಚಾರದಲ್ಲೂ ಚೀನಾ ದೇಶದಂತೆ ಅದರ ಪರಮಾಪ್ತ ರಾಷ್ಟ್ರ ಪಾಕಿಸ್ತಾನವೂ ಸುಳ್ಳನ್ನು ಹೇಳುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿರುವುದು ಅಲ್ಲಿನ ಪತ್ರಿಕೆಗಳ ವರದಿ.
ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮೌರಾದ್ ಆಲಿ ಶಾ, ಕಳೆದ ಬುಧವಾರ (ಏ 15) ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ಮತ್ತು ದಿ ಟ್ರಿಬ್ಯೂನ್ ಪತ್ರಿಕೆಯ ವರದಿ, ಪಾಕಿಸ್ತಾನದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ.
"ಸರಕಾರದ ವರದಿಯನ್ನು ಮೀರಿ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವ ಸಾಧ್ಯತೆಯಿದೆ. ಅದರಲ್ಲೂ ಪ್ರಮುಖವಾಗಿ ಕರಾಚಿ ಮಹಾನಗರದಲ್ಲಿ" ಎಂದು ಮೌರಾದ್ ಆಲಿ ಶಾ ಹೇಳಿಕೆಯನ್ನು ನೀಡಿದ್ದರು.

ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮೌರಾದ್ ಆಲಿ ಶಾ
"ಪಾಸಿಟೀವ್ ಕೇಸ್ ಇರುವ ಯಾವುದೇ ವ್ಯಕ್ತಿಯ ತಪಾಸಣೆ ನಡೆಸಲಾಗುತ್ತಿಲ್ಲ. ಸಿಂಧ್ ಪ್ರಾಂತ್ಯವೊಂದರಲ್ಲೇ 41 ರೋಗಿಗಳು ಸಾವನ್ನಪ್ಪಿದ್ದಾರೆ. ಇದಲ್ಲದೇ, ಮೃತದೇಹಗಳು ಆಸ್ಪತ್ರೆಗೆ ಬರುತ್ತಿವೆ. ಇವರೆಲ್ಲಾ ಕೊರೊನಾ ಸೋಂಕಿನಿಂದ ಮೃತ ಪಟ್ಟರೇ ಎನ್ನುವುದನ್ನು ಯಾರೂ ಟೆಸ್ಟ್ ಮಾಡುತ್ತಿಲ್ಲ. ಇದು ನಡುಕ ಹುಟ್ಟಿಸುವ ವಿದ್ಯಮಾನಗಳು" ಎಂದು ಮೌರಾದ್ ಆಲಿ ಶಾ ಹೇಳಿದ್ದಾರೆ. (ಚಿತ್ರದಲ್ಲಿ ಮೌರಾದ್ ಆಲಿ ಶಾ)

ಕಳೆದ ಹದಿನೈದು ದಿನಗಳಲ್ಲಿ ಕರಾಚಿ ನಗರ
ಕಳೆದ ಹದಿನೈದು ದಿನಗಳಲ್ಲಿ ಕರಾಚಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಒಂದೋ ಆಸ್ಪತ್ರೆಗೆ ಸೇರಿಸುವಾಗಲೇ ಅವರು ಸಾವನ್ನಪ್ಪಿದ್ದರು, ಇಲ್ಲವೇ, ದಾಖಲಾದ ಕೆಲವೇ ಗಂಟೆಗಳಲ್ಲಿ ಮೃತ ಪಟ್ಟಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡದೇ ಇರುವುದರಿಂದ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ಅಲ್ಲಿನ ಕೆಲವು ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ. (ಚಿತ್ರಕೃಪೆ: ದಿ ಟ್ರಿಬ್ಯೂನ್)

ಖಬರ್ ಸ್ಥಾನ್ (ಸ್ಮಶಾನ) ಗಳಲ್ಲಿ 3,245 ಶವಸಂಸ್ಕಾರ
ಆದರೆ, ಕಳೆದ ಐವತ್ತು ದಿನಗಳಲ್ಲಿ ಕರಾಚಿಯ ವಿವಿಧ ಮೂವತ್ತು ಖಬರ್ ಸ್ಥಾನ್ (ಸ್ಮಶಾನ) ಗಳಲ್ಲಿ 3,245 ಶವಸಂಸ್ಕಾರ ನಡೆದಿದೆ ಎನ್ನುವ ವರದಿ ಪಾಕಿಸ್ತಾನದಲ್ಲಿ ಕೋಲಾಹಲವನ್ನು ಎಬ್ಬಿಸಿದೆ. ಇವರೆಲ್ಲರೂ ಹೇಗೆ ಸಾವನ್ನಪ್ಪಿದರು ಎನ್ನುವುದಕ್ಕೆ ಪಾಕಿಸ್ತಾನ ಸರಕಾರ ಉತ್ತರ ಕೊಡದೇ ಮೌನಕ್ಕೆ ಶರಣಾಗಿದೆ. (ಚಿತ್ರಕೃಪೆ: ವಿಕಿಪಿಡಿಯಾ)

ಮುಂದೆ ಭಾರೀ ಅನಾಹುತ ಸಂಭವಿಸಲಿದೆ
ಇದಲ್ಲದೇ, ಕಳೆದ ಮೂರು ದಿನಗಳಿಂದ ಏಳು ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟೀವ್ ಪ್ರಕರಣಗಳು ವರದಿಯಾಗಿದ್ದು, 143 ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಸರಕಾರ ನೀಡುತ್ತಿರುವ ಡೇಟಾಗಳಲ್ಲಿ ಹೇಳಲಾಗಿರುವ ಅಂಕಿಅಂಶಗಳು ಸುಳ್ಳು, ನಿಜವಾದ ಮೃತರ ಸಂಖ್ಯೆಯನ್ನು ಮುಚ್ಚಿಟ್ಟರೆ ಮುಂದೆ ಭಾರೀ ಅನಾಹುತ ಸಂಭವಿಸಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications