ಪೋರ್ಚುಗಲ್ ಪ್ರಧಾನಿಯಾದ ಗೋವಾ ಮೂಲದ ಕೋಸ್ಟಾ
ಲಿಸ್ಬನ್, ನ.26: ಗೋವಾ ಮೂಲದ ಅಂಟೋನಿಯೊ ಕೋಸ್ಟಾ ಅವರು ಪೋರ್ಚುಗಲ್ನ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಪೋರ್ಚುಗಲ್ ರಾಷ್ಟ್ರಾಧ್ಯಕ್ಷ ಅನಿಬಲ್ ಕವಾಕೊ ಸಿಲ್ವ ಅವರು ಕೋಸ್ಟಾ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದಾರೆ.
ಫಿಜಿ, ನ್ಯೂಜಿಲ್ಯಾಂಡ್, ಗಯಾನ, ಮಾರಿಷಸ್, ಮಲೇಷಿಯಾ, ಸಿಂಗಪುರ, ದಕ್ಷಿಣ ಆಫ್ರಿಕಾ, ಬ್ರಿಟನ್ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಉನ್ನತ ರಾಜಕೀಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಭಾರತೀಯ ಮೂಲದವರೆಂಬ ಹೆಗ್ಗಳಿಕೆ ಪಾತ್ರರಾಗಿರುವ ಭಾರತೀಯ ಮೂಲದವರ ಪಟ್ಟಿಗೆ ಲಿಸ್ಬನ್ನ ಮಾಜಿ ಮೇಯರ್(2007 ರಿಂದ 2015 ರ ತನಕ) 54 ವರ್ಷ ವಯಸ್ಸಿನ ವಕೀಲ ಕೋಸ್ಟಾ ಅವರು ಸೇರ್ಪಡೆಯಾಗಿದ್ದಾರೆ.[ಉಡುಪಿ ಮುದ್ದಣ ಮಂಟಪದಲ್ಲಿ ಕೊಂಕಣಿ ಸಾಹಿತ್ಯ ಸಮಾವೇಶ]
ಪೋರ್ಚುಗಲ್ನಲ್ಲಿ ಅಕ್ಟೋಬರ್ 4 ರಂದು ಚುನಾವಣೆ ನಡೆದಿತ್ತು. ಕೋಸ್ಟಾರ ಸೋಶಿಯಲಿಸ್ಟ್ ಪಾರ್ಟಿ(ಎಸ್ಪಿ)ಯು ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಅದರೆ, ಎಡಪಕ್ಷಗಳ ಮೈತ್ರಿಯೊಂದಿಗೆ 230 ಸದಸ್ಯ ಬಲದ ಸಂಸತ್ನಲ್ಲಿ ಸರಳ ಬಹುಮತಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಪಡೆಯುವಂತಾಗಿತ್ತು. ಅವರ ಪಕ್ಷವು 86 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಗೋವಾ ಮೂಲದಿಂದ ಲಿಸ್ಬನ್ಗೆ ವಲಸೆ ಬಂದಿರುವ ಕುಟುಂಬದಲ್ಲಿ ಕೋಸ್ಟಾ ಅವರು 1961ರಲ್ಲಿ ಜನಿಸಿದ್ದಾರೆ. ಬಾಬುಶ್(ಕೊಂಕಣಿಯಲ್ಲಿ ಹುಡುಗ ಎಂದರ್ಥ) ಎಂದು ಪ್ರೀತಿಪಾತ್ರರಿಂದ ಕರೆಸಿಕೊಳ್ಳುವ ಕೋಸ್ಟಾ ಅವರಿಗೆ ಮಾರ್ಗೋವಾದಲಿ ಅನೇಕ ಆಪ್ತಬಂಧುಗಳಿದ್ದಾರೆ. ಕೋಸ್ಟಾ ಅವರು ಪ್ರಧಾನಿಯಾದ ಸುದ್ದಿ ತಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ರವೀಂದ್ರನಾಥ್ ಠಾಗೂರರ ಬಗ್ಗೆ ಅನೇಕ ಲೇಖನಗಳನ್ನು ರಚಿಸಿರುವ ಖ್ಯಾತ ಕಾದಂಬರಿಕಾರ ಓರ್ಲೆಂಡೊ ಡಿ ಕೋಸ್ಟಾರ ಪುತ್ರರಾಗಿದ್ದಾರೆ. ಪೋರ್ಚುಗೀಸ್ ಆಳ್ವಿಕೆಯ ವೇಳೆ ಕೋಸ್ಟಾರ ತಂದೆ ಗೋವಾದಲ್ಲಿ ನೆಲೆಸಿದ್ದರು. ಕೋಸ್ಟಾ ಅವರ ಅಜ್ಜ ಲೂಯಿಸ್ ಅಲ್ಫಾನ್ಸೋ ಮಾರಿಯಾ ಡಾ ಕೋಸ್ಟಾ ಅವರು ಮೂಲತಃ ಹಿಂದೂ ಧರ್ಮದವರಾಗಿದ್ದರು. ನಂತರ ಪೋರ್ಚುಗೀಸ್ ಆಡಳಿತ ಅವಧಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.
16ನೆ ಶತಮಾನದ ಆದಿಭಾಗದಿಂದ 1961ರ ಡಿಸೆಂಬರ್ 19ರವರೆಗೂ ಭಾರತದ ವಿವಿಧ ಭಾಗಗಳಲ್ಲಿ ವಸಾಹತುಗಳನ್ನು ಹೊಂದಿದ್ದ ಮೊದಲ ಪಾಶ್ಚಿಮಾತ್ಯ ರಾಷ್ಟ್ರ ಪೋರ್ಚುಗಲ್ ಆಗಿತ್ತು. 1987ರಲ್ಲಿ ಶಿಕ್ಷಕಿ ಮರಿಯಾ ಗೋನ್ಜಾಲ್ವೆಸ್ ಅವರನ್ನು ಮದುವೆಯಾದ ಕೋಸ್ಟಾ ಅವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications