ಭಾರತ ಮೂಲದ ಅಕ್ಷಯ್ಗೆ 'ಗಣಿತದ ನೊಬೆಲ್' ಫೀಲ್ಡ್ಸ್ ಮೆಡಲ್ಸ್ ಗೌರವ
ಬೆಂಗಳೂರು, ಆಗಸ್ಟ್ 2: ಗಣಿತದ ನೊಬೆಲ್ ಎಂದೇ ಕರೆಯಲಾಗುವ ಪ್ರತಿಷ್ಠಿತ ಫೀಲ್ಡ್ಸ್ ಮೆಡಲ್ಗೆ ಭಾರತ ಮೂಲದ ಆಸ್ಟ್ರೇಲಿಯನ್ ಗಣಿತಜ್ಞ ಅಕ್ಷಯ್ ವೆಂಕಟೇಶ್ ಆಯ್ಕೆಯಾಗಿದ್ದಾರೆ.
40 ವರ್ಷ ಒಳಗಿನ ಗಣಿತ ಶಾಸ್ತ್ರಜ್ಞರಿಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಫೀಲ್ಡ್ಸ್ ಮೆಡಲ್ ನೀಡಲಾಗುತ್ತದೆ. ಅಕ್ಷಯ್ ಅವರಲ್ಲದೆ, ಇನ್ನೂ ಮೂವರಿಗೆ ಈ ಗೌರವ ಒಲಿದಿದೆ.
ದೆಹಲಿಯಲ್ಲಿ ಜನಿಸಿದ ಅಕ್ಷಯ್ (36) ಸ್ಟಾನ್ಫೋರ್ಡ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದಾರೆ. ಗಣಿತ ಲೋಕಕ್ಕೆ ನೀಡಿದ ಅಗಾಧ ಕೊಡುಗೆಯನ್ನು ಪರಿಗಣಿಸಿದ ಅವರನ್ನು ಫೀಲ್ಡ್ಸ್ ಮೆಡಲ್ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ರಿಯೊ ಡಿ ಜನೈರೋದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಗಣಿತಶಾಸ್ತ್ರಜ್ಞರ ಸಮ್ಮೇಳನದಲ್ಲಿ ಅವರಿಗೆ ಪದಕಗಳನ್ನು ವಿತರಿಸಿ ಗೌರವಿಸಲಾಯಿತು.
ಇರಾನ್ ಮೂಲದ ಕುರ್ದಿಶ್ ಗಣಿತಜ್ಞ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕೌಷರ್ ಬಿರ್ಕಾರ್, ಜರ್ಮನಿಯ ಪೀಟರ್ ಶೋಲ್ಜ್ ಮತ್ತು ಇಟಲಿಯ ಅಲೆಸ್ಸಿಯೊ ಫಿಗಲ್ಲಿ ಈ ಗೌರವಕ್ಕೆ ಪಾತ್ರರಾದ ಇತರೆ ಮೂವರು.
ಪ್ರತಿ ಪುರಸ್ಕೃತರು ಪದಕದ ಜತೆಗೆ 15,000 ಕೆನಡಾ ಡಾಲರ್ ಹಣವನ್ನು ನಗದು ಬಹುಮಾನವಾಗಿ ಪಡೆದುಕೊಂಡರು.
ಅಕ್ಷಯ್ ಅವರಿಗೆ ಎರಡು ವರ್ಷವಾಗಿದ್ದಾಗ ಅವರ ಪೋಷಕರು ದೆಹಲಿಯಿಂದ ಆಸ್ಟ್ರೇಲಿಯಾದ ಪರ್ತ್ಗೆ ಸ್ಥಳಾಂತರಗೊಂಡಿದ್ದರು.
ಗಣಿತದ ಕುರಿತ ಅಧ್ಯಯನದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅಕ್ಷಯ್, ಹೈಸ್ಕೂಲು ವಿದ್ಯಾರ್ಥಿಗಳಿಗೆ ನಡೆದ ಫಿಸಿಕ್ಸ್ ಮತ್ತು ಗಣಿತ ಒಲಿಂಪಿಯಾಡ್ಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು. ಆಗಿನ್ನೂ ಅವರ ವಯಸ್ಸು 11.
1997ರಲ್ಲಿ ಗಣಿತಶಾಸ್ತ್ರದ ಪದವಿ ಪಡೆದ ಅಕ್ಷಯ್, 2002ರಲ್ಲಿ 20ನೇ ವಯಸ್ಸಿಗೇ ಪಿಎಚ್.ಡಿ ಪದವಿ ಪಡೆದರು. ಗಣಿತ ವಿಭಾಗದಲ್ಲಿ ಸಾಕಷ್ಟು ಅಧ್ಯಯನಗಳನ್ನು ನಡೆಸಿರುವ ಅವರು, ಅಸ್ಟ್ರೊವ್ಸ್ಕಿ ಪ್ರಶಸ್ತಿ, ಇನ್ಫೊಸಿಸ್ ಪ್ರಶಸ್ತಿ, ಸಲೇಂ ಪ್ರಶಸ್ತಿ ಹಾಗೂ ಸಸ್ತ್ರಾ ರಾಮಾನುಜನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications