ಚಿತ್ರ ಸುದ್ದಿ: ಕ್ಯಾಲಿಫೋರ್ನಿಯಾ ಗವರ್ನರ್ ಸ್ಥಾನಕ್ಕೆ ಕಾಶ್ಮೀರಿ
ಬೆಂಗಳೂರು, ಜ.21 : ಅಮೆರಿಕದ ಮಾಜಿ ಹಣಕಾಸು ಅಧಿಕಾರಿ,2008ರಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸೂಚಿಸಿದ ಕಾಶ್ಮೀರ ಮೂಲದ ಅಮೆರಿಕನ್ ನೀಲ್ ಕಶ್ಕರಿ ಅವರು ಈಗ ಕ್ಯಾಲಿಫೋರ್ನಿಯದ ಗವರ್ನರ್ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ತಾನು ಗವರ್ನರ್ ಆಗಿ ಆಯ್ಕೆಯಾದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಮಾಡಲಿರುವುದಾಗಿ ಅವರು ವಾಗ್ದಾನ ನೀಡಿದ್ದಾರೆ. ಜನತೆಗೂ ನೀಲ್ ಅವರ ಮೇಲೆ ಅಪಾರ ನಂಬಿಕೆಯಿದೆ.
'ಉತ್ತಮ ಶಿಕ್ಷಣದ ಪ್ರಯೋಜನಗಳು ಹಾಗೂ ಅದು ಸೃಷ್ಟಿಸುವ ವ್ಯಾಪಕ ಅವಕಾಶಗಳು ಕ್ಯಾಲಿಫೋರ್ನಿಯದ ಲಕ್ಷಾಂತರ ನಾಗರಿಕರನ್ನು ತಲುಪುತ್ತಿಲ್ಲ. ಈ ಕಾರಣಕ್ಕಾಗಿ ನಾನು ಕ್ಯಾಲಿಫೋರ್ನಿಯದ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಉದ್ಯೋಗ ಸೃಷ್ಟಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ನನ್ನ ಉದ್ದೇಶವಾಗಿದೆ. ಇದು ನನ್ನ ಯೋಜನೆಯ ತಳಹದಿಯಾಗಿದೆ' ಎಂದು ರಿಪಬ್ಲಿಕನ್ ಸದಸ್ಯ 40ರ ಹರೆಯದ ನೀಲ್ ಕಶ್ಕರಿ ಕ್ಯಾಲಿಫೋರ್ನಿಯ ಸ್ಟೇಟ್ ಯೂನಿವರ್ಸಿಟಿಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವೊಂದರಲ್ಲಿ ಇತ್ತೀಚೆಗೆ ಹೇಳಿದ್ದಾರೆ.
ಉಳಿದಂತೆ ಇಂದಿನ ಚಿತ್ರಗಳಲ್ಲಿ ಸುದ್ದಿಯಲ್ಲಿ ಗುವಾಹಟಿಯ ಫ್ಯಾಷನ್ ಶೋನಲ್ಲಿ ಬಿಪಾಶಾ ಬಸು, ಕಾಶ್ಮೀರದ ತಂಪು ಹವೆ, ಬಿಕಾನೇರ್ ನಲ್ಲಿ ಉರುಳಿಬಿದ್ದ ಜಾಗ್ವರ್ ವಿಮಾನ, ಗಣತಂತ್ರ ದಿನಕ್ಕಾಗಿ ತಯಾರಿ ಎಲ್ಲವೂ ಇದೆ

ಗುವಾಹಟಿಯಲ್ಲಿ ಬಾಲಿವುಡ್ ತಾರೆ ಬಿಪಾಶಾ
ಗುವಾಹಟಿಯಲ್ಲಿ ನಡೆದ ರುದ್ರಾಕ್ಷ ನಾರ್ಥ್ ಈಸ್ಟ್ ಹೆಸರಿನ ಫ್ಯಾಷನ್ ಶೋನಲ್ಲಿ ಭಾಗವಹಿಸಿದ ಬಾಲಿವುಡ್ ತಾರೆ ಬಿಪಾಶಾ ಬಸು

ಪೊಲಾರೀಸ್ ಇಂಡಿಯಾ ಹೊಸ ಬೈಕಿನೊಂದಿಗೆ
ಪೊಲಾರೀಸ್ ಇಂಡಿಯಾ ಹೊಸ ಬೈಕಿನೊಂದಿಗೆ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ದುಬೆ ಅವರು ಯುಎಸ್ ಸೂಪರ್ ಬೈಕ್ ಬ್ರಾಂಡ್ ಇಂಡಿಯನ್ ಜತೆ

ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿನ ದೃಶ್ಯ
ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಮಡಿಕೆ ಹೊತ್ತು ನಡೆಯುತ್ತಿರುವ ದಕ್ಷಿಣ ಕಾಶ್ಮೀರದ ಯುವತಿ

ರೋಜರ್ ಫೆಡರರ್ ಅಮೋಘ ಗೆಲುವು
ಆಸ್ಟ್ರೇಲಿಯನ್ ಓಪನ್ ನಲ್ಲಿ ಆಂಡಿ ಮರ್ರೆ ವಿರುದ್ಧ ಕ್ವಾರ್ಟರ್ ಫೈನಲ್ ನಲ್ಲಿ ಗೆಲುವು ಸಾಧಿಸಿದ ಸ್ವಿಸ್ ದೇಶದ ರೋಜರ್ ಫೆಡರರ್

ಮರಳು ಶಿಲ್ಪಿಯಿಂದ ನೇತಾಜಿಗೆ ನಮನ
ಪುರಿಯ ಮರಳು ಶಿಲ್ಪಿ ಮನಸ್ ಸಾಹೂ ಅವರಿಂದ ನೇತಾಜಿ ಹುಟ್ಟುಹಬ್ಬಕ್ಕೆ ನಮನ

ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ರೈಲು
ಕಾಶ್ಮೀರದ ದಕ್ಷಿಣ ಭಾಗದ ಅನಂತ್ ನಾಗ್ ಜಿಲ್ಲೆಯ ರೈಲು ನಿಲ್ದಾಣದಲ್ಲಿ ರೈಲೊಂದು ಹಿಮಾವೃತವಾಗಿದೆ. ರೈಲ್ವೆ ಪೊಲೀಸ್ ಗಾರ್ಡ್ ನೋಡುತ್ತಾ ನಿಂತಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications