ಯೆಮನ್ : ಭಾರತೀಯರೇ ಹೆದರದಿರಿ, ಏರ್ ಇಂಡಿಯಾ ಬರ್ತಾ ಇದೆ!
ಸನಾ, ಮಾ.30: ಷಿಯಾ ಹಾಗೂ ಸುನ್ನಿ ಸಮುದಾಯ ನಡುವಿನ ಆಂತರಿಕ ಕಲಹದಿಂದ ಉಂಟಾಗಿರುವ ಯುದ್ಧದಿಂದ ಯೆಮನ್ ನಲ್ಲಿ ಕನ್ನಡಿಗರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿರುವ ಭಾರತೀಯರು ಯಮ ಯಾತನೆ ಅನುಭವಿಸುತ್ತಿದ್ದಾರೆ. ಯುದ್ಧ ಪೀಡಿತ ಮಧ್ಯಪ್ರಾಚ್ಯದ ದೇಶ ಯೆಮನ್ ನಿಂದ ಭಾರತೀಯರನ್ನು ಕರೆ ತರಲು ಏರ್ ಇಂಡಿಯಾ ವಿಮಾನ ಪ್ರಯಾಣ ಬೆಳೆಸಿದೆ.
ಗಲ್ಫ್ ರಾಷ್ಟ್ರದಲ್ಲಿ ಯುದ್ಧ ಭೀತಿ ಮುಂದುವರೆದಿರುವುದರಿಂದ 500ಕ್ಕೂ ಅಧಿಕ ಕನ್ನಡಿಗರು ಸೇರಿದಂತೆ 3,700 ಭಾರತೀಯರನ್ನು ವಾಪಸ್ ಕರೆ ತರಲು ಏರ್ ಇಂಡಿಯಾ ವಿಮಾನ ದೆಹಲಿಯಿಂದ ಹೊರಟಿದೆ.
180 ಸೀಟುಗಳುಳ್ಳ ಎ320 ಏರ್ ಬಸ್ ದೆಹಲಿಯನ್ನು ಸೋಮವಾರ 07.42AMಗೆ ಬಿಟ್ಟಿದ್ದು ಮಸ್ಕಟ್ ಮೂಲಕ ಯೆಮನ್ ರಾಜಧಾನಿ ಸನಾ ತಲುಪಲಿದೆ. ಸೋಮವಾರ ಸಂಜೆ ವೇಳೆಗೆ ಯೆಮನ್ ನಿಂದ ಭಾರತಕ್ಕೆ ಪ್ರಯಾಣ ಬೆಳಸಲಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಬಗ್ಗೆ ವಿವರಣೆ ನೀಡಿ, ಯೆಮೆನ್ ನಲ್ಲಿ ಪ್ರತಿದಿನ ವಿಮಾನ ಹಾರಾಟಕ್ಕೆ 3 ಗಂಟೆಗಳ ಕಾಲಾವಕಾಶ ಕೋರಲಾಗಿದೆ.
ಯೆಮನ್ ನಲ್ಲಿ ನೆಲೆಸಿರುವ ಭಾರತೀಯ ಈ ಸಮಯದಲ್ಲಿ ಏರ್ ಇಂಡಿಯಾ ವಿಮಾನ ಏರಿ ಭಾರತಕ್ಕೆ ಮರಳಬಹುದು ಎಂದಿದ್ದಾರೆ. ಇದಲ್ಲದೆ, ಸುಮಾರು 1,500 ಪ್ರಯಾಣಿಕರನ್ನು ಸಾಗಿಸಬಲ್ಲ ಹಡಗನ್ನು ಯೆಮೆನ್ ಕಡೆಗೆ ಕಳಿಸಲಾಗುತ್ತಿದೆ. ಶನಿವಾರ ಸುಮಾರು 80ಜನ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಏನಿದು ಕಲಹ: ಷಿಯಾ ಆಡಳಿತದ ಇರಾನ್ ಮತ್ತು ಸುನ್ನಿ ನೇತೃತ್ವದ ಸೌದಿ ಆರೇಬಿಯಾ ಮಧ್ಯದ ಪರೋಕ್ಷ ಸಮರ ಆರಂಭವಾಗಿದೆ. ಜೊತೆಗೆ ಇರಾಕಿ ಉಗ್ರ ಪಡೆ ಇಸ್ಲಾಮೀಕ್ ಸ್ಟೇಟ್ಸ್ ಕೂಡಾ ಸರಣಿ ಆತ್ಮಾಹುತಿ ದಾಳಿ ನಡೆಸುತ್ತಿದೆ. ಯೆಮನ್ ಅಧ್ಯಕ್ಷ ಅಬೆದ್ ರಬ್ಬೋ ಮನ್ಸೂರ್ ಹದಿ ಅವರು ಸೌದಿ ಅರೇಬಿಯಾ ಸೇರಿದಂತೆ 10 ರಾಷ್ಟ್ರಗಳ ಮಿತ್ರ ಕೂಟ ರಚಿಸಿಕೊಂಡು ಷಿಯಾ ಬಂಡುಕೋರರನ್ನು ಹತ್ತಿಕ್ಕಲು ಮುಂದಾಗಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ.
ತೈಲ ಬೆಲೆ ಏರಿಕೆ: ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿ ಸಂಪರ್ಕಿಸುವ ಬಾಬ್ ಅಲ್ ಮನಾಬ್ ಜಲಸಂಧಿಯ ನಡುವೆ ಇರುವ ಯೆಮನ್ ನಲ್ಲಿ ಯುದ್ಧ ಭೀತಿ ಎದುರಾಗಿರುವುದರಿಂದ ಈಜಿಪ್ಟ್, ಸೌದಿ ಅರೇಬಿಯಾ ಸೇರಿದಂತೆ ಅನೇಕ ರಾಷ್ಟ್ರಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ.
ಷಿಯಾ -ಸುನ್ನಿ ಪಂಗಡದ ನಾಯಕರು ಕಿತ್ತಾಟ ಮುಂದುವರೆಸಿದರೆ ಕಚ್ಚಾ ತೈಲ ಬೆಲೆ ಏರಿಕೆಯಾಗಲಿದೆ. ಜೊತೆಗೆ ಭಾರತದಂಥ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯೂ ಹದಗೆಡುತ್ತದೆ.

ಸುಷ್ಮಾ ಸ್ವರಾಜ್ ಅವರು ಸರಣಿ ಟ್ವೀಟ್ ಗಳ ಮೂಲಕ ಸನಾದಲ್ಲಿ ಭಾರತೀಯರು ಸಂಪರ್ಕಿಸಬೇಕಾದ ಇಮೇಲ್, ಭಾರತೀಯ ರಾಯಭಾರಿ ಕಚೇರಿ ಸಂಖ್ಯೆ, ಸಹಾಯವಾಣಿ ವಿವರಗಳನ್ನು ನೀಡಿದ್ದಾರೆ.
E mail : [email protected] Website : http://t.co/5OKSDF9yza Indian Embassy Tel. 00-967-1-433631/00-967-1-433632
— Sushma Swaraj (@SushmaSwaraj) March 25, 2015 ಭಾರತೀಯ ರಾಯಭಾರಿ ಕಚೇರಿ ಸಂಖ್ಯೆ
Indian Embasssy in Sana'a will provide all help. Phones 00-967-734 000 658 Dilbagh Singh, 00-967-734 000 657 Ram Charan. Pl RT
— Sushma Swaraj (@SushmaSwaraj) March 25, 2015 -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications