ಪಾಕಿಸ್ತಾನವನ್ನು ಭಿಕ್ಷುಕ ದೇಶ ಮಾಡಿದ ಇಮ್ರಾನ್ ಖಾನ್ ಗೆ ಮೋದಿ ಗೌರವ ನೀಡಲ್ಲ: ಮರ್ಯಾಮ್
ಲಾಹೋರ್ (ಪಾಕಿಸ್ತಾನ), ಮೇ 29: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸದ್ಯಕ್ಕೆ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ರ ಮಗಳು ಮರ್ಯಾಮ್ ಹಿಗ್ಗಾಮುಗ್ಗಾ ಛೇಡಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ಯಾವ ಮರ್ಯಾದೆಯನ್ನೂ ನೀಡುವುದಿಲ್ಲ. ಕಳೆದ ಫೆಬ್ರವರಿಯಲ್ಲಿ ಎರಡು ದೇಶಗಳ ಮಧ್ಯೆ ಅಂಥ ಉದ್ವಿಗ್ನ ಸನ್ನಿವೇಶದಲ್ಲೂ ನಿಮ್ಮ ಫೋನ್ ಕರೆ ಕೂಡ ಸ್ವೀಕರಿಸಲಿಲ್ಲ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಆಯ್ಕೆಯಾಗಿರುವ ಹಾಗೂ ಅಸಮರ್ಥ ಪ್ರಧಾನಿಯಾದ (ಇಮ್ರಾನ್) ಅವರಿಗೆ ಹೇಳಿದ್ದೇನೆ: ಮೋದಿ ಹಾಗೂ ವಿಶ್ವದ ಇತರ ನಾಯಕರು ಅವರಿಗೆ ಏಕೆ ಗೌರವ ನೀಡುವುದಿಲ್ಲ? ಏಕೆಂದರೆ, ಅವರಿಗೆ ಗೊತ್ತಿದೆ; ಇತರರ ಸಹಾಯದಿಂದ, ಜನರ ಮತಗಳನ್ನು ಅಪಹರಿಸಿ ಅಧಿಕಾರಕ್ಕೆ ಬಂದವರು ಇಮ್ರಾನ್. ಯಾರದೋ ತಾಳಕ್ಕೆ ನೀವು ಕುಣಿಯುತ್ತೀರಿ ಎಂದು ಸೈನ್ಯದ ಬಗ್ಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಒಂದು ಬೊಂಬೆಗಿಂತ ಹೆಚ್ಚಿನ ಸ್ಥಾನ ಮಾನ ಇಮ್ರಾನ್ ಗೆ ಇಲ್ಲ. ಸ್ವಂತ ಕಾಲ ಮೇಲೆ ನಿಂತಿಲ್ಲ. ಅದಕ್ಕೆ ಜಗತ್ತಿನ ಇತರ ನಾಯಕರಿಗೆ ಇಮ್ರಾನ್ ಖಾನ್ ಬಗ್ಗೆ ಗೌರವವಿಲ್ಲ. ಷರೀಫ್ ನ ಗೆಳೆಯ ಮೋದಿ ಎನ್ನುತ್ತಿರುತ್ತಾರೆ ಇಮ್ರಾನ್ ಖಾನ್. ನವಾಜ್ ಷರೀಫ್ ರನ್ನು ಭೇಟಿ ಆಗಲು ಮೋದಿ ಪಾಕಿಸ್ತಾನಕ್ಕೆ ಬಂದರು. ವಾಜಪೇಯಿ ಬಂದರು. ಏಕೆಂದರೆ, ಷರೀಫ್ ಚುನಾಯಿತ ಪ್ರಧಾನಿ. ಇಡೀ ಜಗತ್ತು ಗೌರವ ನೀಡುತ್ತಿತ್ತು. ಆದರೆ ನೀವು ಹಾಗಲ್ಲ. ನಿಮ್ಮ ಕರೆ ಸ್ವೀಕರಿಸಲು ಸಹ ಮೋದಿ ಸಿದ್ಧರಿಲ್ಲ. ನೀವು ನಕಲಿ ಪ್ರಧಾನಿ ಎಂದಿದ್ದಾರೆ.

ನಾನು ನಿಮ್ಮನ್ನು ಮೋದಿಯವರ ಗೆಳೆಯ ಅಂತ ಕರೆಯಲ್ಲ. ನಮಗೆ ಭಾರತದ ಜತೆ ಶಾಂತಿ ಬೇಕು. ಎರಡು ದೇಶಗಳು ಎದುರಿಸುತ್ತಿರುವ ಸಮಸ್ಯೆಗೆ ಯುದ್ಧ ಪರಿಹಾರವಲ್ಲ. ಅಸಮರ್ಥ ಇಮ್ರಾನ್ ಖಾನ್ ಆಡಳಿತಾವಧಿಯಲ್ಲಿ ಪಾಕಿಸ್ತಾನ ಭಿಕ್ಷುಕ ದೇಶದಂತೆ ಆಗಿದೆ. ಇಂತಿಷ್ಟು ಡಾಲರ್ ಗೆ ದೇಶವನ್ನು ಐಎಂಎಫ್ ಗೆ ನೀಡಿದ್ದಾರೆ ಎಂದು ಮರ್ಯಾಮ್ ಆರೋಪ ಮಾಡಿದ್ದಾರೆ.

ದುರಂತ ಏನೆಂದರೆ, ಈ ದೇಶವನ್ನು ಅಣುಶಕ್ತಿ ಹೊಂದುವಂತೆ ಮಾಡಿದ ವ್ಯಕ್ತಿ (ನವಾಜ್ ಷರೀಫ್) ಲಾಹೋರ್ ನ ಕೋಟ್ ಲಖ್ ಪತ್ ನಲ್ಲಿ ಇದ್ದಾರೆ ಮತ್ತು ಯಾರು ಅಣ್ವಸ್ತ್ರ ಕಾರ್ಯಕ್ರಮಕ್ಕೆ ಅಡಿಗಲ್ಲು ಹಾಕಿದರೋ (ಝುಲ್ಫೀಕರ್ ಅಲಿ ಭುಟ್ಟೋ) ಅಂಥವರನ್ನು ನೇಣಿಗೆ ಏರಿಸಲಾಯಿತು ಎಂದು ಹೇಳಿದ್ದಾರೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications