IGF Archer-Amish Award 2025: ಆಧುನಿಕ ಭಾರತದ ಕಥೆಗಳಿಗೆ ವೇದಿಕೆಯಾಗಲಿದೆ ಅರ್ಚರ್-ಅಮಿಶ್ ಪುರಸ್ಕಾರ
IGF Archer-Amish Award 2025: ಇಂಡಿಯಾ ಗ್ಲೋಬಲ್ ಫೋರಂ (IGF) ಈ ವಾರ ಸ್ಟೋರಿ ಟೆಲ್ಲರ್ಸ್ಗಾಗಿ ಮೊದಲ ಐಜಿಎಫ್ ಆರ್ಚರ್ ಅಮಿಶ್ ಪ್ರಶಸ್ತಿಯನ್ನು ಘೋಷಿಸಲು ಸಿದ್ಧವಾಗಿದೆ. ಐಜಿಎಫ್ ಲಂಡನ್ 2024ರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕರಾದ ಜೆಫ್ರಿ ಆರ್ಚರ್ ಮತ್ತು ಅಮಿಶ್ ತ್ರಿಪಾಠಿ ಅವರ ಸಹಭಾಗಿತ್ವದಲ್ಲಿ ಮತ್ತು ಹೌಸ್ ಆಫ್ ಅಭಿನಂದನ್ ಲೋಧಾ ಪ್ರಾಯೋಜಕತ್ವದಲ್ಲಿ ಈ ವಿಶಿಷ್ಟ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಮಕಾಲೀನ ಭಾರತೀಯ ಕಾದಂಬರಿಗಳನ್ನು ಗೌರವಿಸುವುದು ಇದರ ಉದ್ದೇಶವಾಗಿದೆ. ಇದು ಆಧುನಿಕ ಭಾರತದ ವೈವಿಧ್ಯತೆ, ಆಕಾಂಕ್ಷೆಗಳು ಮತ್ತು ಅದ್ಭುತ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಸಾಂಸ್ಕೃತಿಕ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಶ್ರೀಮಂತ ಜಾಗತಿಕ ಸಂವಾದವನ್ನು ಬೆಳೆಸುವುದಕ್ಕೆ ವೇದಿಕೆಯಾಗಿದೆ.
ಐಜಿಎಫ್ ಆರ್ಚರ್ ಅಮಿಶ್ ಪ್ರಶಸ್ತಿಯು 25,000 ಡಾಲರ್ ಬಹುಮಾನವನ್ನು ಒಳಗೊಂಡಿದೆ. ಈ ಪ್ರಶಸ್ತಿಯು ಜಾಗತಿಕವಾಗಿ ಅತಿ ದೊಡ್ಡ ಕಾದಂಬರಿ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದು ಭಾರತೀಯ ಸಾಹಿತ್ಯವನ್ನು ವಿಶ್ವ ಭೂಪಟದಲ್ಲಿ ಪರಿಚಯಿಸಲು ಸಹಕಾರಿಯಾಗಿದೆ. ಅಸಾಧಾರಣ ಭಾರತೀಯ ಲೇಖಕರ ಕೃತಿಗಳಿಗೆ ಪೋತ್ಸಾಹ ನೀಡಲಾಗುತ್ತಿದ್ದು, ಅವರ ಕೃತಿಗಳು ಆಧುನಿಕ ಭಾರತದ ಸಂಕೀರ್ಣತೆ ಮತ್ತು ಕ್ರಿಯಾಶೀಲತೆಯನ್ನು ಸ್ಪಷ್ಟವಾಗಿ ಸೆರೆಹಿಡಿಯುತ್ತವೆ.

ಬ್ರಿಟನ್ ಸರ್ಕಾರದ ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಕಾರ್ಯದರ್ಶಿ Rt Hon ಲಿಸಾ ನಾಂಡಿ, IGF ಅಧ್ಯಕ್ಷ ಮನೋಜ್ ಲಾಡ್ವಾ ಮತ್ತು ಲೇಖಕರಾದ ಆರ್ಚರ್ ಮತ್ತು ಅಮಿಶ್ ಅವರೊಂದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಅವರ ಉಪಸ್ಥಿತಿಯು ಯುಕೆ ಸರ್ಕಾರದ ಅಭಿವೃದ್ಧಿ ಹೊಂದುತ್ತಿರುವ ಸಾಂಸ್ಕೃತಿಕ ನೀತಿ ಹಾಗೂ ಉತ್ತೇಜನದ ದೃಷ್ಟಿಯನ್ನು ಎತ್ತಿ ತೋರಿಸುತ್ತದೆ. ವಿಶೇಷವಾಗಿ ಭಾರತವು ಎಫ್ಟಿಎ ನಂತರ ಪ್ರಮುಖ ಸೃಜನಶೀಲ ಪಾಲುದಾರನಾಗಿ ಹೆಚ್ಚುತ್ತಿರುವ ಮಹತ್ವವನ್ನು ಹೊಂದಿದೆ.
ಈ ಪ್ರತಿಷ್ಠಿತ ಪ್ರಶಸ್ತಿಗೆ ಸ್ಪರ್ಧಿಸುತ್ತಿರುವ ಪ್ರಮುಖ ಸ್ಪರ್ಧಿಗಳಲ್ಲಿ ನವಪಾಷಾಣಂ - ದಿ ಕ್ವೆಸ್ಟ್ ಫಾರ್ ದಿ ನೈನ್ ಮ್ಯಾಜಿಕಲ್ ಪಾಯಿಸನ್ಸ್ ಕೃತಿಯ ಲೇಖಕಿ ನಿತ್ಯ ನೀಲಕಂಠನ್, ದಿ ಕಿಲ್ ಸ್ವಿಚ್ ಕೃತಿಯ ಲೇಖಕ ಯೋಗೇಶ್ ಪಾಂಡೆ ಮತ್ತು ದಿ ವೇ ಹೋಮ್ ಕೃತಿಯ ಲೇಖಕಿ ಡಾ. ಶಾಲಿನಿ ಮಲ್ಲಿಕ್ ಸೇರಿದ್ದಾರೆ.
ಈ ಪ್ರಶಸ್ತಿಯ ಹಿಂದಿನ ದೂರದೃಷ್ಟಿಯ ಬಗ್ಗೆ ಮಾತನಾಡಿದ ಇಂಡಿಯಾ ಗ್ಲೋಬಲ್ ಫೋರಂನ ಸಂಸ್ಥಾಪಕ ಮತ್ತು ಅಧ್ಯಕ್ಷ ಮನೋಜ್ ಲಾಡ್ವಾ, "ಐಜಿಎಫ್ ಆರ್ಚರ್ ಅಮಿಶ್ ಪ್ರಶಸ್ತಿಯು ಜಾಗತಿಕವಾಗಿ ಭಾರತೀಯ ಧ್ವನಿಯನ್ನು ಹೆಚ್ಚಿಸುವ ಬದ್ಧತೆಯನ್ನು ಹೊಂದಿದೆ. ಯುಕೆ-ಭಾರತ ಸಂಬಂಧಗಳಲ್ಲಿ ನಿರ್ಣಾಯಕ ಸಮಯದಲ್ಲಿ ಸಾಂಸ್ಕೃತಿಕ ವಿನಿಮಯವನ್ನು ಹುಟ್ಟುಹಾಕುವ ಮತ್ತು ಪರಸ್ಪರ ತಿಳವಳಿಕೆಯನ್ನು ಗಾಢವಾಗಿಸುವ ಉದ್ದೇಶಗಳನ್ನು ಉತ್ತೇಜಿಸುತ್ತದೆ" ಎಂದು ಹೇಳಿದ್ದಾರೆ.
"ಪ್ರಶಸ್ತಿಗಳು ಬಹಳ ಮುಖ್ಯ ಏಕೆಂದರೆ ಅವು ಮನ್ನಣೆಯನ್ನು ನೀಡುತ್ತವೆ. ರಾತ್ರಿ ಹಗಲು ಕಷ್ಟಪಟ್ಟು ಕೆಲಸ ಮಾಡಿ ಏನನ್ನಾದರೂ ಸಾಧಿಸಲು ಪ್ರಯತ್ನಿಸುವ ವ್ಯಕ್ತಿಯು ತಾನು ಒಂಟಿಯಲ್ಲ. ತನ್ನೊಂದಿಗೆ ಒಂದು ಸಮುದಾಯವಿದೆ ಎನ್ನುವುದನ್ನು ಅರಿತುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಎಂದು 'ಕೇನ್ ಅಂಡ್ ಏಬಲ್' ಮತ್ತು 'ದಿ ಕ್ಲಿಫ್ಟನ್ ಕ್ರಾನಿಕಲ್ಸ್' ನಂತಹ ಹೆಚ್ಚು ಮಾರಾಟವಾದ ಕೃತಿಗಳನ್ನು ಬರೆದ ಬ್ರಿಟಿಷ್ ಲೇಖಕ ಲಾರ್ಡ್ ಆರ್ಚರ್ ಹೇಳಿದರು.
ಪ್ರಶಸ್ತಿಯನ್ನು ಸಹ-ರೂಪಿಸಿದ ಮತ್ತು ತೀರ್ಪುಗಾರರ ಸಮಿತಿಗೆ ನೇತೃತ್ವ ವಹಿಸಿರುವ ಪ್ರಖ್ಯಾತ ಲೇಖಕ ಅಮಿಶ್ ತ್ರಿಪಾಠಿ, "ಇದು ಕಥೆ ಹೇಳುವಿಕೆಯನ್ನೇ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ಪ್ರಶಸ್ತಿಯಾಗಿದೆ. ಇದು ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾಗಿದೆ. ಭಾರತೀಯರು ತಮ್ಮ ಬಗ್ಗೆ, ತಮ್ಮದೇ ಆದ ಕಥೆಗಳನ್ನು ಹೇಳುವುದಕ್ಕೆ ವೇದಿಕೆಯಾಗಿದೆ. ಪಾಶ್ಚಿಮಾತ್ಯರು ಭಾರತವನ್ನು ನೋಡುವ ರೀತಿ, ಪಾಶ್ಚಿಮಾತ್ಯ ದೃಷ್ಟಿಕೋನದಿಂದ ನೋಡುವುದು ಒಂದು ನಿರೂಪಣೆ, ಒಂದು ದೃಷ್ಟಿಕೋನವಾಗಿದೆ. ಇದು ಭಾರತೀಯರು ಭಾರತವನ್ನು ನೋಡುವ ರೀತಿಯಿಂದ ಬಹಳ ಭಿನ್ನವಾಗಿದೆ" ಎಂದು ಹೇಳಿದರು.
ಪ್ರಶಸ್ತಿ ಸಮಾರಂಭವು ಜೂನ್ 18 ರಂದು ಲಂಡನ್ನ ಪ್ರತಿಷ್ಠಿತ ಕ್ವೀನ್ ಎಲಿಜಬೆತ್ II ಸೆಂಟರ್ನಲ್ಲಿ IGF ಲಂಡನ್ 2025 ರ ಭಾಗವಾಗಿ ನಡೆಯಲಿದೆ. ಇದು ಯುಕೆ ಮತ್ತು ಭಾರತದ ನಡುವಿನ ನಡೆಯುತ್ತಿರುವ ಸಾಂಸ್ಕೃತಿಕ ಸಂವಾದದಲ್ಲಿ ಒಂದು ಮಹತ್ವದ ಕ್ಷಣವಾಗಿದೆ ಎಂದು ಪರಿಗಣಿಸಲಾಗಿದೆ.
ಭಾರತ ಜಾಗತಿಕ ವೇದಿಕೆಯು ಸಮಕಾಲೀನ ಭಾರತದ ಕಥೆಯನ್ನು ಹೇಳುತ್ತದೆ. ಭಾರತವು ಹೊಂದಿರುವ ಬದಲಾವಣೆ ಮತ್ತು ಬೆಳವಣಿಗೆಯ ವೇಗವು ಜಗತ್ತಿಗೆ ಒಂದು ಅವಕಾಶವಾಗಿದೆ. ಐಜಿಎಫ್ ವ್ಯವಹಾರಗಳು ಮತ್ತು ರಾಷ್ಟ್ರಗಳಿಗೆ ಆ ಅವಕಾಶವನ್ನು ಪಡೆದುಕೊಳ್ಳಲು ಸಹಾಯ ಮಾಡುವ ಹೆಬ್ಬಾಗಿಲಾಗಿದೆ.












Click it and Unblock the Notifications