ಭಾರತದ ಜೊತೆ ಯುದ್ಧದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದ ಸೇನೆಯು ಭಾರತದ ಜೊತೆ ಯುದ್ಧ ಮಾಡಲು ಸಿದ್ಧವಾಗಿಲ್ಲ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದ್ದು, ಭಾರತದ ಜೊತೆ ಶಾಂತಿ ಸೌಹಾರ್ದ ಬೆಳೆಸಲು ಅವಕಾಶವಿತ್ತು ಆದರೆ ಅದು ಎಂದಿಗೂ ಸಾಕಾರಗೊಳ್ಳಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಅಟ್ಲಾಂಟಿಕ್ ಕೌನ್ಸಿಲ್ಗೆ ನೀಡಿದ ಸಂದರ್ಶನದಲ್ಲಿ ಖಾನ್, ಪಾಕಿಸ್ತಾನವು ಭಾರತದ ವಿರುದ್ಧ ಯುದ್ಧಕ್ಕೆ ಸಜ್ಜಾಗಿಲ್ಲ ಎಂದು ಜನರಲ್ ಬಜ್ವಾ ಅವರಿಗೆ ಆಗಾಗ್ಗೆ ಹೇಳುತ್ತಿದ್ದರು ಎಂದು ಹೇಳಿದರು. ಉಭಯ ದೇಶಗಳ ನಡುವಿನ ಹದಗೆಟ್ಟ ಬಾಂಧವ್ಯದ ಬಗ್ಗೆ ಮಾತನಾಡಿದ ಇಮ್ರಾನ್ ಖಾನ್, ಕಾಶ್ಮೀರ ಸಮಸ್ಯೆಗೆ ಭಾರತವು ರಿಯಾಯಿತಿ ಮತ್ತು ಮಾರ್ಗಸೂಚಿಯನ್ನು ನೀಡಬೇಕಿತ್ತು, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

2019 ರಲ್ಲಿ ನವದೆಹಲಿಯು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರೂ, ಪಾಕಿಸ್ತಾನದ ಸೇನಾ ಮುಖ್ಯಸ್ಥರು ಕೂಡ ಅದಕ್ಕೆ ಒಲವು ತೋರಿದರು. ಎರಡು ಪರಮಾಣು ಸಶಸ್ತ್ರ ದೇಶಗಳ ನಡುವಿನ ವ್ಯಾಪಾರವನ್ನು ಸಾಮಾನ್ಯಗೊಳಿಸಬೇಕು, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಭಾರತ ರಿಯಾಯಿತಿ ನೀಡಬೇಕಿತ್ತು ಎಂದ ಖಾನ್
ಭಾರತವು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಭಾರತವು ತನ್ನ ಸಂಬಂಧವನ್ನು ಬದಲಾಯಿಸಿದ ನಂತರ ನವದೆಹಲಿಯೊಂದಿಗಿನ ವ್ಯಾಪಾರ ಸಾಮಾನ್ಯೀಕರಣದಲ್ಲಿ ಪಾಕಿಸ್ತಾನ ಏಕೆ ಎಡವಿತು ಎನ್ನುವ ಪ್ರಶ್ನೆಗೆ ಇಮ್ರಾನ್ ಖಾನ್ ಸಮರ್ಪಕ ಉತ್ತರ ನೀಡಲು ನೀಡಲಿಲ್ಲ.
ಭಾರತದೊಂದಿಗಿನ ವ್ಯಾಪಾರಕ್ಕಾಗಿ ಗಡಿಯನ್ನು ಮುಚ್ಚಿದ ಪಾಕಿಸ್ತಾನದ ಕ್ರಮದ ಬಗ್ಗೆ ಇಮ್ರಾನ್ ಖಾನ್ ಮಾತನಾಡಿ, "ನನಗೆ ವ್ಯಾಪಾರ ಮಾತುಕತೆಗಳು ನೆನಪಿಲ್ಲ ಎಂದು ಹೇಳಿದರು. ನನಗೆ ಗೊತ್ತಿರುವುದೇನೆಂದರೆ, ಕ್ವಿಡ್ ಪ್ರೊ ಕ್ವೋ ಇರಬೇಕಿತ್ತು. ಭಾರತವು ಕೆಲವು ರಿಯಾಯಿತಿಗಳನ್ನು ನೀಡಬೇಕಿತ್ತು, ಕಾಶ್ಮೀರಕ್ಕೆ ಕೆಲವು ರೀತಿಯ ಮಾರ್ಗಸೂಚಿಯನ್ನು ನೀಡಬೇಕು ಮತ್ತು ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರೆ ನಾನೇ ಆತಿಥ್ಯ ವಹಿಸಲು ಹೋಗುತ್ತಿದ್ದೆ. ಆದರೆ ಅದು ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ." ಎಂದು ಹೇಳಿದರು.
ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಪಡೆಗಳೊಂದಿಗೆ ಕದನ ವಿರಾಮವನ್ನು ಒಳಗೊಂಡಿರುವ ಬಾಜ್ವಾದ ಯೋಜನೆಯು ಪಾಕಿಸ್ತಾನದ ಸಾಂಪ್ರದಾಯಿಕ ಎದುರಾಳಿಯೊಂದಿಗೆ ದೀರ್ಘಾವಧಿಯ ಶಾಂತಿಯನ್ನು ಸ್ಥಾಪಿಸಲು ಕಳೆದುಹೋದ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತದ ಜೊತೆ ಸಂಬಂಧ ಸುಧಾರಿಸಲು ನಾನು ಎಲ್ಲ ರೀತಿಯಿಂದಲೂ ಪ್ರಯತ್ನಿಸಿದೆ, ಆದರೆ ಅಲ್ಲಿ ದೊಡ್ಡ ಗೋಡೆಯನ್ನು ನೋಡಿದೆ ಎಂದು ಹೇಳಿದರು. ಇದು ಆರ್ಎಸ್ಎಸ್-ಬಿಜೆಪಿ ಮನಸ್ಥಿತಿಯೊಂದಿಗೆ ಸಂಬಂಧಿಸಿದೆ ಎಂದು ನನಗೆ ಅರ್ಥವಾಯಿತು, ಪಾಕಿಸ್ತಾನದ ಜೊತೆಗಿನ ದ್ವೇಷವನ್ನು ಅವರು ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ನನಗೆ ತಿಳಿಯಿತು ಎಂದು ಹೇಳಿದ್ದಾರೆ.












Click it and Unblock the Notifications