ದುಬೈ ಗಲ್ಫ್ ಫುಡ್ 2026: ವಿಶ್ವದ ದೊಡ್ಡ ಆಹಾರ ಮೇಳದಲ್ಲಿ ಕರ್ನಾಟಕದ ನಂದಿನಿ ಮಳಿಗೆ, ಬ್ರ್ಯಾಂಡ್ ಪ್ರದರ್ಶನ
ದುಬೈ: ದುಬೈನಲ್ಲಿ 31 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ ವಾರ್ಷಿಕ ಆಹಾರ ಮತ್ತು ಪಾನೀಯ ಸೋರ್ಸಿಂಗ್ ಕಾರ್ಯಕ್ರಮ 'ಗಲ್ಫುಡ್ 2026' ಮೇಳ ಜರುಗಿತು. ಜನವರಿ 26 ರಂದು ಉದ್ಘಾಟನೆಗೊಂಡ ಈ ಮೇಳದಲ್ಲಿ ದೇಶ, ವಿದೇಶಗಳ ಪ್ರತಿಷ್ಠಿತ ಕಂಪನಿಗಳು, ಬ್ರ್ಯಾಂಡ್ಗಳು ಪಾಲ್ಗೊಂಡಿದ್ದರು. ಅದರಲ್ಲಿ ಕರ್ನಾಟಕದ ಹೆಮ್ಮೆಯ 'ಕರ್ನಾಟಕ ಮಿಲ್ಕ್ ಫೆಡೇರಷನ್' ಬ್ರ್ಯಾಂಡ್ ಆದ ನಂದಿನಿ ಮಳಿಗೆ ಸಹ ತೆರೆಯಲಾಗಿತ್ತು.
ಈ ವಿಶ್ವ ಪ್ರಸಿದ್ಧ ಮೇಳವು 280,000 ಚದರ ಮೀಟರ್ಗಿಂತಲೂ ಹೆಚ್ಚು ಜಾಗದಲ್ಲಿ ವಿಸ್ತರಿಸಿಕೊಂಡಿತ್ತು. ನಗರದ ಎರಡೂ ತುದಿಗಳನ್ನು ಬಳಸಿಕೊಳ್ಳುವ ಮೂಲಕ, ಗಲ್ಫುಡ್ ಆಹಾರ ಮೇಳವು 195 ದೇಶಗಳಿಂದ ಅಭೂತಪೂರ್ವ 8,500ಕ್ಕೂ ಅಧಿಕ ಪ್ರದರ್ಶಕರಿಗೆ ಅವಕಾಶ ನೀಡಿದೆ. 1.5 ಮಿಲಿಯನ್ ಉತ್ಪನ್ನಗಳನ್ನು ಪ್ರದರ್ಶನಗೊಂಡವು. ಇದು ಕೇವಲ ದೊಡ್ಡ ಪ್ರದರ್ಶನವಲ್ಲ, ದುಬೈ ಅನ್ನು ಆಹಾರ ವ್ಯಾಪಾರದ "ಜಾಗತಿಕ ಪ್ರಧಾನ ಕಚೇರಿ"ಯಾಗಿ ತೋರ್ಪಡಿಸುವ ಕಾರ್ಯತಂತ್ರದ ಭಾಗವಾಗಿತ್ತು.

ಇಂತಹ ದುಬೈ ಗಲ್ಫ್ ಫುಡ್ ಫೆರ್ ಕಾರ್ಯಕ್ರಮದಲ್ಲಿ ಕರ್ನಾಟಕದ ಕೆಎಂಎಫ್ ವತಿಯಿಂದ ತೆರೆಯಲಾದ ನಂದಿನಿ ಪ್ರದರ್ಶನ ಮಳಿಗೆಗೆ ಅಮೂಲ್ ಅಧ್ಯಕ್ಷರಾದ ಅಶೋಕಭಾಯಿ ಚೌಧರಿ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಕೆಎಂಎಫ್ ಎಂಡಿ ಶಿವಸ್ವಾಮಿ ಹಾಗೂ ಮಾರುಕಟ್ಟೆ ನಿರ್ದೇಶಕ ಸತೀಶ್ ಮತ್ತು ಅಮುಲ್ ನ ಇತರ ಅಧಿಕಾರಿಗಳು ಈ ಪ್ರದರ್ಶನಕ್ಕೆ ಸಾಕ್ಷಿಯಾದರು.
ಡಿಡಬ್ಲುಟಿಸಿ ಗಲ್ಫುಡ್ನ ಪ್ರಮುಖ ವಲಯಗಳಾಗಿ 'ಎಕ್ಸ್ಪೋ ಸಿಟಿ ದುಬೈ ವರ್ಲ್ಡ್ ಫುಡ್, ಅಕ್ಕಿ, ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳು, ಗಲ್ಫುಡ್ ಫ್ರೆಶ್, ಗಲ್ಫುಡ್ ಲಾಜಿಸ್ಟಿಕ್ಸ್ ಮತ್ತು ಗಲ್ಫುಡ್ ದಿನಸಿ ವ್ಯಾಪಾರ' ಸೇರಿದಂತೆ ವಿಸ್ತೃತ ಮತ್ತು ಹೊಸ ಹೊಸ ಪ್ರದರ್ಶನಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಈ ವಿಭಾಗವು ದುಬೈ ವಿಶ್ವದ ಅತಿದೊಡ್ಡ ಆಹಾರ ಸೋರ್ಸಿಂಗ್ ವೇದಿಕೆಯಾಗಿದೆ. ನೋಡುಗರಿಗೆ ಹೊಸ ಅನುಭವ ಒದಗಿಸಿಕೊಟ್ಟಿದೆ.
-
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
Sourav Ganguly: ಟಿ20 ವಿಶ್ವಕಪ್ 2026; ಸಂಜು ಆಟಕ್ಕೆ ಮನಸೋತು ಬಿಸಿಸಿಐಗೆ ಬಿಸಿ ಮುಟ್ಟಿಸಿದ 'ದಾದಾ' ಸೌರವ್ ಗಂಗೂಲಿ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು?












Click it and Unblock the Notifications