ಹಿರಿಯ ನಾಗರಿಕರಿಗೆ ಭಾರತ ಸೂಕ್ತ ನೆಲೆಯಲ್ಲ
ಬೆಂಗಳೂರು, ಅ.3: ಹಿರಿಯ ನಾಗರಿಕರ ಪಾಲಿಗೆ ಭಾರತ ಸೂಕ್ತ ನೆಲೆ ಒದಗಿಸುವ ದೇಶವಲ್ಲ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. Global Age Watch Index (GAWI) ಸಮೀಕ್ಷೆ ವರದಿಯಂತೆ ಭಾರತ ನಾಲ್ಕು ವಿಭಾಗಗಳಲ್ಲೂ ಕಡಿಮೆ ಅಂಕ ಗಳಿಸಿದೆ.
ಹಿರಿಯ ನಾಗರಿಕರ ಆರೋಗ್ಯ ಸಂರಕ್ಷಣೆ(85), ಉದ್ಯೋಗ ಹಾಗೂ ಶಿಕ್ಷಣ (73), ವಾಸಿಸಲು ಸೂಕ್ತ ಪರಿಸರ (72) ಹಾಗೂ ಆದಾಯ ಭದ್ರತೆ ಹೀಗೆ ವಿವಿಧ ವಿಭಾಗಗಳಲ್ಲಿ ಭಾರತ ಕಡಿಮೆ ಶ್ರೇಯಾಂಕ ಗಳಿಸಿ ಹಿರಿಯ ನಾಗರಿಕರಿಗೆ ಸೂಕ್ತವಲ್ಲದ ತಾಣ ಎನಿಸಿದೆ ಎಂದು ವರದಿ ಹೇಳಿದೆ. Global Age Watch Index (GAWI) ಸಮೀಕ್ಷೆ ಹಿರಿಯ ನಾಗರಿಕರ ಸ್ಥಿತಿ ಗತಿ ಕುರಿತು ವಿಶ್ವಸಂಸ್ಥೆ ಬೆಂಬಲಿತ ಅಧ್ಯಯವಾಗಿದೆ.
ಗ್ಲೋಬಲ್ ಏಜ್ ವಾಚ್ ಇಂಡೆಕ್ಸ್- 2013 ಪ್ರಕಾರ ಹಿರಿಯ ನಾಗರಿಕರಿಗೆ ಅತ್ಯುತ್ತಮ ಎನಿಸುವ 91 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 73ನೇ ಸ್ಥಾನ ಸಿಕ್ಕಿದೆ. ಹಿರಿಯ ನಾಗರಿಕರ ಆದಾಯ, ಶಿಕ್ಷಣ, ಆರೋಗ್ಯ, ವೃತ್ತಿ ಮತ್ತು ಪರಿಸರಕ್ಕೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರೆ ಏಜೆನ್ಸಿಗಳ ವರದಿಯನ್ನು ಆಧರಿಸಿ ಶ್ರೇಯಾಂಕ ಪಟ್ಟಿ ಘೋಷಿಸಲಾಗಿದೆ.

ಹಿರಿಯ ನಾಗರಿಕರ ಪಾಲಿಗೆ ಸ್ವೀಡನ್ ಉತ್ತಮ ದೇಶವಾಗಿದ್ದು, ನಿವೃತ್ತಿ ಬದಕನ್ನು ಆರಾಮವಾಗಿ ಕಳೆಯಬಹುದು ಎಂದು ವರದಿ ಹೇಳಿದೆ, ನಾರ್ವೆ, ಬ್ರಿಟನ್ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿದ್ದರೆ. ಹಿರಿಯ ನಾಗರಿಕರಿಗೆ ಅಘ್ಘಾನಿಸ್ತಾನ ಅತಿ ಕೆಟ್ಟ ದೇಶವಾಗಿದೆ. ಈ ವರದಿ ಪ್ರಕಾರ ಅನೇಕ ದೇಶಗಳು ವೃದ್ಧರ ಸಮಸ್ಯೆ ಎದುರಿಸಲು ಸರಿಯಾದ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ.
ಯುನೈಟೆಡ್ ಕಿಂಗ್ಡಮ್ ಶ್ರೇಯಾಂಕದಲ್ಲಿ ಹಿಂದೆ ಬೀಳಲು ಅಲ್ಲಿನ ಬಸ್ ಹಾಗೂ ರೈಲುಗಳ ಅವ್ಯವಸ್ಥೆ ಕಾರಣ ಎನ್ನಲಾಗಿದೆ. ಅದರಲ್ಲೂ ಬ್ರಿಟನ್ನಿನ ಗ್ರಾಮೀಣ ಭಾಗದಲ್ಲಿ ಸಾರಿಗೆ ಸಂಪರ್ಕ ಸರಿಯಾಗಿಲ್ಲ ಇದರಿಂದಾಗಿ ಉದ್ಯೋಗ ಹಾಗೂ ಶಿಕ್ಷಣ ಸೌಲಭ್ಯ ಪಡೆಯಲು ಹಿರಿಯ ನಾಗರಿಕರಿಗೆ ಕಷ್ಟವಾಗುತ್ತಿದೆ. ಈ ವಿಭಾಗದಲ್ಲಿ ಬ್ರಿಟನ್ 24ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ ಎಂದು ವರದಿ ಹೇಳಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications