ನೇಪಾಳದಲ್ಲಿ ದಿಢೀರ್ ಪ್ರವಾಹ; 7 ಮಂದಿ ಸಾವು, ಹಲವರು ಕಣ್ಮರೆ
ಕಠ್ಮಂಡು, ಜೂನ್ 17: ಅಧಿಕ ಮಳೆಯಿಂದಾಗಿ ಬುಧವಾರ ನೇಪಾಳದ ಸಿಂಧುಪಾಲ್ಚೋಕ್ನಲ್ಲಿ ದಿಢೀರ್ ಪ್ರವಾಹ ಉಂಟಾಗಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಐವತ್ತು ಮಂದಿ ಪ್ರವಾಹದಲ್ಲಿ ಕಣ್ಮರೆಯಾಗಿದ್ದಾರೆ.
ಮಧ್ಯ ನೇಪಾಳದ ಸಿಂಧುಪಾಲ್ಚೋಕ್ನಲ್ಲಿ ಕಳೆದ 48 ಗಂಟೆಗಳಲ್ಲಿ ಭಾರೀ ಮಳೆಯಾಗಿದ್ದು, ಭಾರೀ ಹಾನಿ ಸಂಭವಿಸಿದೆ. ಕಠ್ಮಂಡುವಿನಿಂದ 65 ಕಿ.ಮೀ. ದೂರವಿರುವ ಸಿಂಧುಪಾಲ್ಚೋಕ್ನಲ್ಲಿ ಮೆಲಾಂಚಿ ನದಿ ಹರಿಯುತ್ತಿದ್ದು, ಮಳೆ ಹೆಚ್ಚಳದಿಂದಾಗಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ.
"ಪ್ರವಾಹದಿಂದಲ್ಲಿ 50 ಮಂದಿ ಕಣ್ಮರೆಯಾಗಿದ್ದು, ಏಳು ಮೃತದೇಹಗಳು ದೊರೆತಿವೆ. ಇವರೆಲ್ಲರೂ ಮೆಲಾಂಚಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದರು," ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಿಂದ ಮೆಲಾಂಚಿ ಕುಡಿಯುವ ನೀರಿನ ಯೋಜನೆ, ಟಿಂಬು ಬಜಾರ್, ಶನೌಟ್ ಬಜಾರ್, ತಲಮರಂಗ್ ಬಜಾರ್ ಹಾಗೂ ಮೆಲಾಂಚಿ ಬಜಾರ್ ಪ್ರದೇಶಗಳಲ್ಲಿ ಭಾರೀ ಹಾನಿಯಾಗಿದೆ. ಸಿಂಧುಪಾಲ್ಚೋಕ್ನಲ್ಲಿ ಐದಾರು ಸೇತುವೆಗಳು ಧ್ವಂಸವಾಗಿವೆ. 300 ಗುಡಿಸಲುಗಳು ಕೊಚ್ಚಿಕೊಂಡು ಹೋಗಿವೆ.
ಕಾಣೆಯಾದವರಲ್ಲಿ ಮೂರು ಮಂದಿ ಭಾರತೀಯರು, ಮೂರು ಚೀನೀಯರು ಇದ್ದರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
#WATCH | Nepal: Flash floods wreak havoc in Sindhupalchok. At least 7 deaths reported so far, several missing.
— ANI (@ANI) June 17, 2021
As per officials, about 200 houses in Melamchi town have been partially or completely damaged.
(16.06.2021) pic.twitter.com/Al0xonZyfH
ಭೂತಾನ್ನ ಬೆಟ್ಟ ಪ್ರದೇಶದಲ್ಲಿಯೂ ದಿಢೀರ್ ಪ್ರವಾಹದಿಂದಾಗಿ ಹತ್ತು ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. ಔಷಧದಲ್ಲಿ ಬಳಸಲಾಗುವ "ಕಾರ್ಡಿಸೆಪ್ಸ್" ಸಂಗ್ರಹಿಸುತ್ತಿದ್ದ ಭೂತಾನ್ ಗ್ರಾಮಸ್ಥರು ಲಾಯ ಎಂಬಲ್ಲಿ ಶಿಬಿರದಲ್ಲಿ ಮಲಗಿದ್ದರು. ಮಧ್ಯ ರಾತ್ರಿ ಬಳಿಕ ದಿಢೀರ್ ಪ್ರವಾಹ ಉಂಟಾಗಿ ಎಲ್ಲರೂ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.
-
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
IMD Weather Forecast: ದೇಶದ ಈ ಭಾಗಗಳಲ್ಲಿ ಮಾರ್ಚ್ ಅಂತ್ಯದಲ್ಲಿ ಭಾರೀ ಮಳೆ ಮುನ್ಸೂಚನೆ: ಐಎಂಡಿ ಎಚ್ಚರಿಕೆ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications