ವಿಕಾಸವಾದ ನಿಜ, ದೇವರೇನೂ ಮಾಂತ್ರಿಕನಲ್ಲ: ಪೋಪ್
ಡಾರ್ವಿನ್ನಿನ ವಿಕಾಸವಾದ ಮತ್ತು ಬಿಗ್ ಬ್ಯಾಂಗ್ ಸಿದ್ಧಾಂತಗಳು ನಿಜ. ಜಗತ್ತು ದೇವರ ಸೃಷ್ಟಿ ಎನ್ನಲಾಗುವುದಿಲ್ಲ ದೇವರೇನು ಮಾಂತ್ರಿಕನಲ್ಲ ಎಂದು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಮತ್ತೊಮ್ಮೆ ಘೋಷಿಸಿದ್ದಾರೆ.
ರೋಮ್, ಡಿಸೆಂಬರ್ 21: ಡಾರ್ವಿನ್ನಿನ ವಿಕಾಸವಾದ ಮತ್ತು ಬಿಗ್ ಬ್ಯಾಂಗ್ ಸಿದ್ಧಾಂತಗಳು ನಿಜ. ಜಗತ್ತು ದೇವರ ಸೃಷ್ಟಿ ಎನ್ನಲಾಗುವುದಿಲ್ಲ ದೇವರೇನು ಮಾಂತ್ರಿಕನಲ್ಲ ಎಂದು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಮತ್ತೊಮ್ಮೆ ಘೋಷಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ವಿಕಾಸವಾದದ ಪರ ಮಾತನಾಡಿದ್ದ ಪೋಪ್ ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ದೇವರ ಕುರಿತು ನಾವು ಚಿಂತಿಸುವಾಗ ಆತನೊಬ್ಬ ಮಾಂತ್ರಿಕ. ಮಂತ್ರದಂಡ ಹಿಡಿದು ಇಡೀ ವಿಶ್ವವನ್ನು ದೇವರೊಬ್ಬನೇ ಸೃಷ್ಟಿಸಿದನು ಎಂದು ತಿಳಿದಿದ್ದೇವೆ. ಆದರೆ ಇದು ನಿಜವಲ್ಲ ಎಂದಿದ್ದಾರೆ. [ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು?]

ರೋಮನ್ ಕ್ಯಾಥೋಲಿಕ್ ಚರ್ಚ್ ಗೂ ವಿಜ್ಞಾನಕ್ಕೂ ಎಣ್ಣೆ ಸಿಗೇಕಾಯಿ ಸಂಬಂಧ ಎಂದೇ ಎಲ್ಲರೂ ಭಾವಿಸಿರುವಾಗ ಪೋಪ್ ಫ್ರಾನ್ಸಿಸ್ ಅವರ ಹೇಳಿಕೆಯನ್ನು ಹಲವಾರು ಮಂದಿ ಸ್ವಾಗತಿಸಿ, ಪ್ರಗತಿಪರ ಚಿಂತನೆ ಎಂದಿದ್ದಾರೆ.[ಹಸ್ತಮೈಥುನ, ಸಲಿಂಗಕಾಮಕ್ಕೆ ವ್ಯಾಟಿಕನ್ ಗರಂ]
ಇಟಲಿಯ ರಾಷ್ಟ್ರೀಯ ಖಭೌತ ವಿಜ್ಞಾನ ಮಹಾ ವಿದ್ಯಾಲಯದ ಅಧ್ಯಕ್ಷ ಜಿಯೊವನಿ ಬಿನಾಮಿ ಕೂಡಾ ಪೋಪ್ ಹೇಳಿಕೆಯನ್ನು ಸ್ವಾಗತಿಸಿ, ವಿಕಾಸವಾದವನ್ನು ಒಪ್ಪಿಕೊಂಡಿರುವುದು ಮಹತ್ತರವಾಗಿದೆ ಎಂದಿದ್ದಾರೆ. [ದೇವಕಣ ವಿಶ್ವವನ್ನೇ ನಾಶ ಮಾಡಬಲ್ಲದೆ?]
ಪೋಪ್ ಅವರ ಹೇಳಿಕೆ ನಂತರ ವಿಕಾಸವಾದ, ಬಿಗ್ ಬ್ಯಾಂಗ್ ಥಿಯರಿಯನ್ನು ಚರ್ಚ್ ಒಪ್ಪಿಕೊಂಡಿದೆಯೇ? ಭೂಮಿಯ ವೈಜ್ಞಾನಿಕ ಹುಟ್ಟಿನ ರಹಸ್ಯಕ್ಕೆ ತಲೆಬಾಗಿದೆಯೆ? ಇದರಿಂದಾಗಿ ದೇವರ ಬಗ್ಗೆ ಕ್ರೈಸ್ತರಲ್ಲಿರುವ ನಂಬಿಕೆ ಬದಲಾಗುತ್ತದೆಯೆ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಸಿದ್ದಾಂತ ಪ್ರತಿಪಾದಿಸಿದ್ದ ಖಗೋಳ ವಿಜ್ಞಾನಿ ಗೆಲಿಲಿಯೊಗೆ 'ದೈವನಿಂದನೆ' ಪಟ್ಟಕೊಟ್ಟ ಪರಂಪರೆಯಿಂದ ಬಂದವರು ಈಗ ವೈಜ್ಞಾನಿಕ ತಳಹದಿಯಲ್ಲಿ ತಮ್ಮ ನಂಬಿಕೆಯನ್ನು ಬದಲಾಯಿಸಿಕೊಳ್ಳುವುದೇ? ಕಾಲವೇ ಉತ್ತರ ನೀಡಲಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications