ಚೋಟಾ ಶಕೀಲ್ ನ ಮಗನೂ ಪಾಕ್ ನಲ್ಲಿ ಈಗ ಕುರ್ ಆನ್ ಪ್ರವಚನಕಾರ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಗ ಮೌಲಾನ ಆದ ಕೆಲ ವರ್ಷಕ್ಕೆ ಅಂಥದ್ದೇ ಸುದ್ದಿ ಬಂದಿದೆ. ದಾವೂದ್ ನ ಬಲಗೈ ಬಂಟ ಚೋಟಾ ಶಕೀಲ್ ನ ಒಬ್ಬನೇ ಮಗ ಕೂಡ ಈಗ ಪಾಕಿಸ್ತಾನದ ಕರಾಚಿಯಲ್ಲಿ ಅಧ್ಯಾತ್ಮದ ಹಾದಿಯಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಚೋಟಾ ಶಕೀಲ್ ನ ಹದಿನೆಂಟು ವರ್ಷದ ಮಗ ಮುಬಾಶಿರ್ ಶೇಕ್ ಈಚೆಗಷ್ಟೇ ಹಫೀಜ್-ಇ-ಕುರ್ ಆನ್ ಆಗಿದ್ದಾನೆ. ಹಾಗೆಂದರೆ ಇಡೀ ಕುರ್ ಆನ್ ಅನ್ನು ನೆನಪಿನಲ್ಲಿ ಇರಿಸಿಕೊಂಡಾತ ಎಂದರ್ಥ. ಹೀಗೆ ನೆನಪಿನಲ್ಲಿ ಇಟ್ಟುಕೊಳ್ಳುವುದು ಇಸ್ಲಾಂನಲ್ಲಿ ಬಹಳ ಗೌರವ-ಹೆಮ್ಮೆಯ ಸಂಗತಿ ಎಂದು ಪರಿಗಣಿಸಲಾಗುತ್ತದೆ.
ಇದೀಗ ಮತ್ತೊಬ್ಬ ಭೂಗತ ಪಾತಕಿಯ ಮಗ ಅಧ್ಯಾತ್ಮದ ಹಾದಿ ಹಿಡಿದಿರುವುದು ಮುಂಬೈ ಭೂಗತ ಜಗತ್ತಿನಲ್ಲಿ ಅಚ್ಚರಿ ಉಂಟು ಮಾಡಿದೆ. ಸದ್ಯಕ್ಕೆ ಮುಬಾಶಿರ್ ಕರಾಚಿ ಸುತ್ತಮುತ್ತ ಜನರಿಗೆ ಕುರ್ ಆನ್ ಹೇಳಿಕೊಡುವುದು ಹಾಗೂ ಉಪದೇಶ ನೀಡುವುದು ಮಾಡುತ್ತಿದ್ದಾನೆ. ದಾವೂದ್ ಇಬ್ರಾಹಿಂನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅತ್ಯಂತ ಕಡಿಮೆ ಸಂಖ್ಯೆಯ ಜನರಲ್ಲಿ ಚೋಟಾ ಶಕೀಲ್ ಕೂಡ ಒಬ್ಬ.

ಸದ್ಯಕ್ಕೆ ದಾವೂದ್ ಇಬ್ರಾಹಿಂ, ಆತನ ಬಂಟ ಚೋಟಾ ಶಕೀಲ್ ಸೇರಿದಂತೆ ಇತರ ಪ್ರಮುಖರು ಪಾಕಿಸ್ತಾನದಲ್ಲೇ ಇದ್ದಾರೆ ಎಂದು ದಾವೂದ್ ನ ಸೋದರ, ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದ ಇಕ್ಬಾಲ್ ಕಸ್ಕರ್ ಹೇಳಿದ್ದ.
ತನ್ನ ಒಬ್ಬನೇ ಮಗ ಮೊಯಿನ್ ಮೌಲಾನಾ ಆದ ಮೇಲೆ ದಾವೂದ್ ಇಬ್ರಾಹಿಂ ಹೇಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ ಎಂದು ಕೂಡ ತಿಳಿಸಿದ್ದ. ಮೌಲಾನ್ ಮೊಯಿನ್ ನಿಂದ ಸ್ಫೂರ್ತಿಗೊಂಡ ಮುಬಾಶಿರ್ ಇದೀಗ ಕುರ್ ಆನ್ ಪ್ರವಚನ ನೀಡುತ್ತಿದ್ದಾನೆ.
ಮುಬಾಶಿರ್ ಹೊರತುಪಡಿಸಿ ಚೋಟಾ ಶಕೀಲ್ ಗೆ ಝೋವಾ ಮತ್ತು ಅನಮ್ ಎಂಬಿಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರನ್ನು ಕರಾಚಿಯಲ್ಲಿ ವೈದ್ಯರಿಗೆ ಮದುವೆ ಮಾಡಿಕೊಡಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications