ವಿಕಿಪೀಡಿಯ ವಿರುದ್ಧ 'ಗೊರಿಲ್ಲ' ವಾರ್
ನ್ಯೂಯಾರ್ಕ್, ಆ.7: ಮುಕ್ತ ವಿಶ್ವಕೋಶ ವಿಕಿಪೀಡಿಯ ವಿರುದ್ಧ ಇಂಡೋನೇಷಿಯಾದ ಗೊರಿಲ್ಲ 'ವಾರ್' ಡಿಕ್ಲೇರ್ ಮಾಡಿದೆ. ಇದೇನು ಮಂಗನ ಚೇಷ್ಟೇ ಎಂದು ಹುಬ್ಬೇರಿಸಬೇಡಿ. ವಿಕಿಪೀಡಿಯ ವಿರುದ್ಧ ಚಿತ್ರವೊಂದರ ಕಾಪಿರೈಟ್ ಗಾಗಿ ಕಾನೂನು ಹೋರಾಟ ಆರಂಭವಾಗಿದೆ.
ಮಂಗ ಚೇಷ್ಟೆಗೆ ಕೊನೆಯಿಲ್ಲ ಎಂಬುದು ಸಾಮಾನ್ಯವಾದ ಲೇವಡಿ. ಆದರೆ, ಇದು ಮಂಗ ಚೇಷ್ಟೆಯಲ್ಲ. ಜಗತ್ ಪ್ರಸಿದ್ಧವಾದ ವಿಕೀಪೀಡಿಯಾ ವಿರುದ್ಧ ಗೊರಿಲ್ಲ ಒಂದು ಕಾಪಿರೈಟ್ (ಹಕ್ಕುಸ್ವಾಮ್ಯತೆ)ನಡಿ ಕಾನೂನು ಹೋರಾಟ ಆರಂಭಿಸಿದೆ.
ವಿಕೀಪೀಡಿಯಾ ವಿರುದ್ಧ ಗೊರಿಲ್ಲ ಒಂದು ಕಾಪಿರೈಟ್ (ಹಕ್ಕುಸ್ವಾಮ್ಯತೆ)ನಡಿ ಕಾನೂನು ಹೋರಾಟ ಆರಂಭಿಸಿದೆ. 2011ರಲ್ಲಿ ಗೊರಿಲ್ಲ ಕ್ಲಿಕ್ಕಿಸಿಕೊಂಡ ಫೋಟೋವನ್ನು ವಿಕೀಪೀಡಿಯಾ ಪ್ರಕಟಿಸಿತ್ತು. ಆದರೆ, ಇದಕ್ಕೂ ಮೊದಲು ಚಿತ್ರ ತೆಗೆದ ಫೋಟೋ ಗ್ರಾಫರ್ನ ಅನುಮತಿ ಪಡೆದಿರಲಿಲ್ಲ ಎಂಬ ಅಪವಾದ ಕೇಳಿ ಬಂದಿದೆ.

ಆದರೆ, ಈ ಫೋಟೋ ಕ್ಲಿಕ್ಕಿಸಿರುವುದು ಮನುಷ್ಯರಲ್ಲ. ಗೊರಿಲ್ಲ(macaque)ವೇ ತೆಗೆದುಕೊಂಡ ಸೆಲ್ಫಿ ಫೋಟೊ ಇದಾಗಿದೆ. ಹೀಗಾಗಿ ಹಕ್ಕು ಸ್ವಾಮ್ಯತೆ ಪಡೆಯುವ ಅಗತ್ಯವಿಲ್ಲ ಎಂದು ವಿಕೀಪೀಡಿಯ ಪ್ರತಿಪಾದಿಸಿದೆ. ಡೇವಿಡ್ ಸ್ಲ್ಯಾಟರ್ ಎಂಬುವರು ಮೃಗಾಲಯದಲ್ಲಿ ಫೋಟೋ ತೆಗೆಯುತ್ತಿದ್ದಾಗ ಫೋಸುಕೊಟ್ಟ ಈ ಗೊರಿಲ್ಲ ಕೆಲ ಕ್ಷಣಗಳಲ್ಲೇ ಕ್ಯಾಮೆರಾ ಕಸಿದುಕೊಂಡು ಮಂಗಚೇಷ್ಟೆ ಆರಂಭಿಸಿತು.
ಆಗ ಕ್ಯಾಮೆರಾ ಯಾಂತ್ರಿಕವಾಗಿ ಕ್ಲಿಕ್ ಆಗಿದ್ದು. ಗೊರಿಲ್ಲ ಫೋಟೋ ತುಂಬಾ ಕ್ಲೋಸಫ್ ಆಗಿ ಮೂಡಿಬಂದಿದೆ. ಈ ಫೋಟೋಗೆ ಅಂತರ್ಜಾಲದಲ್ಲಿ ಹೆಚ್ಚು ಬೇಡಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಫೋಟೋ ಗ್ರಾಫರ್ ಡೇವಿಡ್ಸ್ಲ್ಯಾಟರ್ ಹಕ್ಕು ಸ್ವಾಮ್ಯತೆ ಪಡೆಯದೆ ಫೋಟೋ ಬಳಸಿಕೊಂಡು ವಿಕೀಪೀಡಿಯಾ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ
ವಿಕಿಪೀಡಿಯದವರು ಈ ಚಿತ್ರದ ಹಕ್ಕುಸ್ವಾಮ್ಯತೆ ಬಗ್ಗೆ ಗಮನ ಕೊಡದೆ ಸಾರ್ವಜನಿಕವಾಗಿ ಮುಕ್ತವಾಗಿ ಡೌನ್ ಲೋಡ್ ಮಾಡಲು ನೀಡಿದ್ದಾರೆ. ಇದರಿಂದ ನನ್ನ ಗಳಿಕೆಗೆ ಪೆಟ್ಟುಬಿದ್ದಿದೆ. ಹೀಗಾಗಿ ವಿಕಿಪೀಡಿಯ ಸಂಸ್ಥೆಯಿಂದ ಸುಮಾರು 30,000 ಯುಎಸ್ ಡಾಲರ್ ಪರಿಹಾರ ಮೊತ್ತವನ್ನು ನಿರೀಕ್ಷಿಸಿದ್ದೇನೆ ಎಂದು ಸ್ಲಾಟರ್ ಹೇಳಿದ್ದಾರೆ. (ಐಎಎನ್ಎಸ್)
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications