22 ವರ್ಷದಿಂದ ಗಟಾರಿನಲ್ಲೇ ಜೀವನ ನಡೆಸುತ್ತಿರುವ ವೃದ್ಧ ದಂಪತಿ
ಒಂದಾನೊಂದು ಕಾಲದಲ್ಲಿ ಪೇಮಿಸಿ ಮದುವೆಯಾಗಿ ತಮ್ಮ ಬಂಧುಗಳಿಂದ ತ್ಯಜಿಸಲ್ಪಟ್ಟ ಈ ಪ್ರೇಮಿಗಳು ಪುಟ್ಟ ಗಟಾರಿನಲ್ಲಿ ಸಂಸಾರ ಹೂಡಿ ಬದುಕು ಕಟ್ಟಿಕೊಂಡಿರುವುದು ಒಂದು ಧನ್ಯತಾ ಭಾವವನ್ನು ಮೂಡಿಸದಿರದು.
ಬೊಗೊಟಾ, ಫೆಬ್ರವರಿ 7: 'ಅಂಗೈಯ್ಯಗಲ ಜಾಗ ಸಾಕು ಹಾಯಾಗಿರೋಕೆ' ಅನ್ನೋ ಮಾತಿಗೆ ಕೊಲಂಬಿಯಾದ ಈ ವೃದ್ಧ ದಂಪತಿ ಸಾಕ್ಷೀಭೂತರು. ಕಳೆದ 22 ವರ್ಷಗಳಿಂದ ಮೆಡಿಲಿನ್ ಪ್ರಾಂತ್ಯದ ಒಂದು ಗಟಾರದಲ್ಲಿ ಸಂಸಾರ ನಡೆಸುತ್ತಿರುವ ಮರಿಯಾ ಗಾರ್ಸಿನಾ ಹಾಗೂ ಆಕೆಯ ಪತಿ ಮಿಗ್ಯುಯೆಲ್ ರೆಸ್ಟ್ರೋಪೊ ಅವರಿಬ್ಬರ ಇಚ್ಛಾಶಕ್ತಿಗೆ ಅಚ್ಚರಿಯಾಗದಿರದು.
ಒಂದಾನೊಂದು ಕಾಲದಲ್ಲಿ ಪೇಮಿಸಿ ಮದುವೆಯಾಗಿ ತಮ್ಮ ಬಂಧುಗಳಿಂದ ತ್ಯಜಿಸಲ್ಪಟ್ಟ ಈ ಪ್ರೇಮಿಗಳು ಪುಟ್ಟ ಗಟಾರಿನಲ್ಲಿ ಸಂಸಾರ ಹೂಡಿ ಬದುಕು ಕಟ್ಟಿಕೊಂಡಿರುವುದು ಒಂದು ಧನ್ಯತಾ ಭಾವವನ್ನು ಮೂಡಿಸದಿರದು.

ಅಂದಹಾಗೆ, ಈ ಇಬ್ಬರೂ ಮಾಜಿ ಡ್ರಗ್ಸ್ ವ್ಯಸನಿಗಳು. ಸುಮಾರು 25 ವರ್ಷಗಳ ಹಿಂದೆ ಮೆಡಿಲಿನ್ ಪ್ರಾಂತ್ಯ ಡ್ರಗ್ಸ್ ಗೆ ಕುಖ್ಯಾತಿಯಾಗಿತ್ತು. ಅದೇ ವೇಳೆ, ಮರಿಯಾ ಹಾಗೂ ಮಿಗ್ಯುಯೆಲ್ ಭೇಟಿಯಾಗಿದ್ದರು. ಆ ಪರಿಚಯ ಸ್ನೇಹ, ಪ್ರೇಮಗಳಾಗಿ ಟಿಸಿಲೊಡೆದು ಕೊನೆಗೆ ವಿವಾಹದಲ್ಲಿ ಪರಿವರ್ತನೆಗೊಂಡಿತು.
ಆದರೆ, ಇಬ್ಬರಲ್ಲಿದ್ದ ಡ್ರಗ್ಸ್ ಗೀಳು ಅವರ ಜೀವನವನ್ನೇ ಕಿತ್ತುಕೊಳ್ಳುವ ಹಂತಕ್ಕೆ ಬಂದಿತ್ತು. ಆಗ, ಅವರಿಬ್ಬರೂ ಡ್ರಗ್ಸ್ ಸಹವಾಸ ತೊರೆಯಲು ನಿರ್ಧರಿಸಿದರು.
ಅವರೇನೋ ಬದಲಾದರು. ಆದರೆ, ಅವರ ಸಂಬಂಧಿಗಳಲ್ಲಿ, ಸ್ನೇಹಿತರಲ್ಲಿ ಅವರ ಮೇಲಿದ್ದ ಅಭಿಪ್ರಾಯ ಬದಲಾಗಲಿಲ್ಲ. ಹೊಸ ಜೀವನವನ್ನು ಆರಂಭಿಸುವ ಹುಮ್ಮಸ್ಸಿನಲ್ಲಿದ್ದ ಅವರಿಗೆ ಯಾರಿಂದಲೂ ಆಶ್ರಯವಾಗಲೀ, ಹಣಕಾಸಿನ ಸಹಾಯವಾಗಲೀ ಸಿಗಲಿಲ್ಲ.
ಆದರೂ, ಛಲ ಬಿಡದ ಈ ಇಬ್ಬರೂ ಖಾಲಿಯಿದ್ದ ಗಟರಿನಲ್ಲಿ ಜೀವನ ಸಾಗಿಸಲು ಶುರು ಮಾಡಿದರು. ಹೀಗೆ, ತಾತ್ಕಾಲಿಕ ವಸತಿ ಎಂದುಕೊಂಡು ಅವರು ಈ ಗಟಾರಿನ ಮೇಲೆ ಅವರಿಗೆ ಅತ್ಯಂತ ವ್ಯಾಮೋಹ ಹುಟ್ಟಿಬಿಟ್ಟಿದೆ.
ದಂಪತಿ ಅಲ್ಲಿಇಲ್ಲಿ ಸಣ್ಣ, ಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮನೆ ಕಾವಲಿಗೆ ಅವರ ಬಳಿ ನಾಯಿಯೂ ಒಂದಿದೆ. ಆ ಪುಟ್ಟ ಗಟಾರಿನಲ್ಲೇ ನಿತ್ಯ ಜೀವನ ನಡೆಸುವ ಅವರಿಗೆ, ಈಗ ಅಲ್ಲಿನ ಸರ್ಕಾರ ವಿದ್ಯುತ್ ಸೌಕರ್ಯ ಕಲ್ಪಿಸಿದೆ. ಹಾಗಾಗಿ, ಒಳಗೆ ಪುಟ್ಟ ಲೈಟು ದೀಪಗಳು, ಪುಟ್ಟ ಟಿವಿಗಳನ್ನಿಟ್ಟುಕೊಂಡು ಅಡುಗೆ ಮಾಡಿಕೊಂಡು ಅಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications