ಪರಮಾಣು ಕ್ಷಿಪಣಿ ಒಳಗೆ ಇಂಧನದ ಬದಲು ನೀರು, ಚೀನಾ ಸೇನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು... China Military
ಚೀನಾ ದೈತ್ಯವಾಗಿ ಬೆಳೆದಿರುವ ಹಾಗೂ ಅಮೆರಿಕಗೆ ಪೈಪೋಟಿ ಕೊಡುತ್ತಿರುವ ಬೃಹತ್ ದೇಶವಾಗಿದೆ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಳ್ಳುತ್ತದೆ. ಅದರಲ್ಲೂ ಚೀನಾ ದೇಶದ ಈ ಬೆಳವಣಿಗೆ ಹಿಂದೆ ಕ್ಸಿ ಜಿನ್ಪಿಂಗ್ ತಂತ್ರ ಹಾಗೂ ಪ್ರತಿತಂತ್ರ ಕೆಲಸ ಮಾಡಿದೆ. ಆದರೆ ಇಷ್ಟು ಒಳ್ಳೆಯ ಹೆಸರು ಮಾಡಿ ಇಡೀ ಚೀನಾ ಜನತೆಯ ಮನಸ್ಸು ಗೆದ್ದ ಅಧ್ಯಕ್ಷನ ಆಪ್ತನೇ ದೊಡ್ಡ ಭ್ರಷ್ಟಾಚಾರಿ ಎಂದರೆ ನೀವು ನಂಬಲೇ ಬೇಕಾಗಿದೆ. ಯಾಕಂದ್ರೆ ಇದೀಗ ಇಡೀ ಜಗತ್ತು ಬೆಚ್ಚಿಬೀಳುವ ವಿಚಾರಗಳು ಬಯಲಾಗಿದ್ದು, ಚೀನಾ ಸೇನೆಯಲ್ಲಿ ದುಡ್ಡು ಮಾಡಲು ಸೇನಾಧಿಕಾರಿಗಳು ಯಾವೆಲ್ಲಾ ಕುತಂತ್ರ ಮಾಡಿದ್ದರು ಗೊತ್ತೆ?
ಇಡೀ ಜಗತ್ತಿನಲ್ಲೇ ಅತಿದೊಡ್ಡ ಕಮ್ಯುನಿಸ್ಟ್ ಆಡಳಿತದ ದೇಶ ಎಂದು ಹೆಸರು ಮಾಡಿರುವ ಇದೇ ಚೀನಾ ನೆಲದಲ್ಲಿ ಭ್ರಷ್ಟಾಚಾರಕ್ಕೆ ಜಾಗವೇ ಇಲ್ಲ. ಚೀನಾ ನೆಲದಲ್ಲಿ ಭ್ರಷ್ಟಾಚಾರ ಮಾಡಿದವರಿಗೆ ಕಠಿಣ ಶಿಕ್ಷೆ ಪಕ್ಕಾ, ಏಕೆಂದರೆ ಅಲ್ಲಿ ನಿಯಮ ಅಷ್ಟು ಕಠಿಣ. ಹೀಗಿದ್ದರು ಭಯ ಇಲ್ಲದೆ ಭ್ರಷ್ಟಾಚಾರ ಮಾಡಿದ್ದವರು ಕಂಬಿ ಹಿಂದೆ ಬಿದ್ದು ಒದ್ದಾಡುತ್ತಿದ್ದಾರೆ. ಇದೇ ರೀತಿಯಾಗಿ ಚೀನಾ ಸೇನೆಯಲ್ಲಿ ಕೂಡ ಭ್ರಷ್ಟಾಚಾರ & ಅನ್ಯಾಯ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ನೋಡಿದರೆ ಅದಕ್ಕೆ ಸಾಕ್ಷ್ಯ ಕೂಡ ಲಭ್ಯವಾಗಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ಇಡೀ ಜಗತ್ತಿನ ಗಮನ ಸೆಳೆದಿವೆ.

ಪರಮಾಣು ಮಾಹಿತಿ ಸೋರಿಕೆ ಆರೋಪ
ಚೀನಾ ಕೆಲವು ದಿನಗಳ ಹಿಂದಷ್ಟೇ ತನ್ನ ಸೇನೆಯಲ್ಲಿ ಇರುವ ದೊಡ್ಡ ದೊಡ್ಡ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಇಲ್ಲಿ ಪ್ರಮುಖವಾಗಿ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆಪ್ತ ಎಂದು ಗುರುತಿಸಿಕೊಂಡು ದೊಡ್ಡ ದೊಡ್ಡ ಹುದ್ದೆ ಪಡೆದಿದ್ದ ಹಿರಿಯ ಸೇನಾಧಿಕಾರಿ ಜಾಂಗ್ ಯೂಕ್ಸಿ ಬಗ್ಗೆ ಗಂಭೀರ ಆರೋಪ ಮಾಡಲಾಗಿತ್ತು. ಕೊನೆಗೆ ಜಾಂಗ್ ಯೂಕ್ಸಿ ಬಂಧನ ಮಾಡಿ, ವಿಚಾರಣೆ ಕೂಡ ನಡೆಯುತ್ತಿದೆ. ಚೀನಾ ಶತ್ರು ಪಡೆಗೆ ಪರಮಾಣು ಅಸ್ತ್ರದ ಮಾಹಿತಿ ಸೋರಿಕೆ ಮಾಡಿರುವ ಗಂಭೀರ ಆರೋಪ ಜಾಂಗ್ ಯೂಕ್ಸಿ ವಿರುದ್ಧ ಇದೆ. ಆದರೆ ಇದೆಲ್ಲವನ್ನೂ ಮೀರಿಸುವ ಮತ್ತೊಂದು ಭಾರಿ ಸ್ಫೋಟಕ ಆರೋಪ ಇದೀಗ ಬಯಲಾಗಿದೆ.
ಕ್ಷಿಪಣಿಗಳ ಒಳಗೆ ಇಂಧನದ ಬದಲು ನೀರು!
ಪರಮಾಣು ಕ್ಷಿಪಣಿಗಳ ವಿಚಾರದಲ್ಲಿ ಚೀನಾ ತುಂಬಾ ಬಲವಾಗಿದ್ದು, ಅಕಸ್ಮಾತ್ ಶತ್ರು ದೇಶಗಳು ತಂಟೆಗೆ ಬಂದರೆ ಅವರನ್ನು ತಟ್ಟಿಬಿಡುವ ತಾಕತ್ ಹೊಂದಿದೆ. ಹೀಗಿದ್ದರೂ ಸ್ವತಃ ಚೀನಾ ಸೇನೆ ಒಳಗೆ ಇರುವ ಕೆಲವು ಭ್ರಷ್ಟಾಚಾರಿಗಳು ತಮ್ಮದೇ ದೇಶಕ್ಕೆ ಖೆಡ್ಡಾ ತೋಡಿದ್ದರು ಎಂಬ ಆಘಾತಕಾರಿ ಆರೋಪ ಇದೀಗ ಸಾಕ್ಷ್ಯ ಸಮೇತ ಬಯಲಾಗುತ್ತಿದೆ.
ಅಮೆರಿಕ ಗುಪ್ತಚರ ವರದಿಗಳ ಪ್ರಕಾರ ಚೀನಾ ಸೇನೆಯಲ್ಲಿ ಅಧಿಕಾರಿಗಳು ಅದೆಷ್ಟು ಭ್ರಷ್ಟರಾಗಿದ್ದರು ಎಂದರೆ, ಪರಮಾಣು ಕ್ಷಿಪಣಿಗಳ ಒಳಗೆ ಇಂಧನದ ಬದಲು ನೀರು ತುಂಬಿಸಿದ್ದರು ಎಂದು ಆರೋಪ ಮಾಡಲಾಗಿದೆ. ಅಲ್ಲದೆ ಚೀನಾ ಸೇನೆ ದಿಢೀರ್ ಇದೇ ಕ್ಷಿಪಣಿಗಳನ್ನು ನಂಬಿ ಹೋರಾಟಕ್ಕೆ ನಿಂತರೆ ಕ್ಷಿಪಣಿಗಳು ಕೆಲಸಕ್ಕೆ ಬಾರದ ರೀತಿ ಮಾಡಿದ್ದರು ಭ್ರಷ್ಟ ಸೇನಾಧಿಕಾರಿಗಳು, ಎಂಬ ಭಾರಿ ಗಂಭೀರ ಆರೋಪವನ್ನು ಇದೀಗ ಮಾಡಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications