ಕೊರೊನಾ ವೈರಸ್ಗೆ ಚೀನಾದಿಂದ ಬಂತು ಮೂಗಿನ ಸಿಂಪಡಣೆ ಲಸಿಕೆ
ಬೀಜಿಂಗ್, ಸೆಪ್ಟೆಂಬರ್ 10: ಕೊರೊನಾ ವೈರಸ್ಗೆ ಮೊದಲ ಪರಿಣಾಮಕಾರಿ ಲಸಿಕೆಯನ್ನು ಕಂಡುಹಿಡಿಯುವ ಪೈಪೋಟಿ ತೀವ್ರವಾಗಿದ್ದು, ಮೂಗಿಗೆ ಸಿಂಪಡಿಸುವ ಹೊಸ ಬಗೆಯ ಲಸಿಕೆಯ ಪ್ರಯೋಗಕ್ಕೆ ಚೀನಾ ಗುರುವಾರ ಅನುಮತಿ ನೀಡಿದೆ.
ಚೀನಾದ ಅಧಿಕೃತ ಮಾಧ್ಯಮ ವರದಿಗಳ ಪ್ರಕಾರ, ಮೂಗಿಗೆ ಸಿಂಪಡಿಸುವ ಲಸಿಕೆಯ ಮೊದಲ ಹಂತದ ಪ್ರಯೋಗವು ನವೆಂಬರ್ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಅಧಿಕಾರಿಗಳು 100 ಮಂದಿ ಸ್ವಯಂ ಸೇವಕರನ್ನು ಬಳಸಿಕೊಳ್ಳುತ್ತಿದೆ.
ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನ ಆಡಳಿತವು ಅನುಮೋದನೆ ನೀಡಿರುವ ಈ ಬಗೆಯ ಏಕೈಕ ಲಸಿಕೆ ಇದಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಹಾಂಕಾಂಗ್ ಹಾಗೂ ಚೀನಾ ಮುಖ್ಯ ಭೂಮಿ ನಡುವಿನ ಸಹಯೋಗದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹಾಂಕಾಂಗ್ ವಿಶ್ವವಿದ್ಯಾಲಯ, ಕ್ಸಿಯಾಮೆನ್ ವಿಶ್ವವಿದ್ಯಾಲಯ ಮತ್ತು ಬೀಜಿಂಗ್ ವಾಂಟೈ ಬಯಾಲಾಜಿಕಲ್ ಫಾರ್ಮಸಿಯ ಸಂಶೋಧಕರು ಜತೆಗೂಡಿ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಮುಂದೆ ಓದಿ.

ರಕ್ಷಣಾ ಸಾಮರ್ಥ್ಯ ವೃದ್ಧಿ
ಪ್ರತಿಕಾಯ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಈ ಲಸಿಕೆಯು ಉಸಿರಾಟ ಸಂಬಂಧಿತ ವೈರಸ್ ಸೋಂಕುಗಳ ವಿರುದ್ಧದ ಕ್ರಿಯೆಯನ್ನು ಪ್ರಚೋದಿಸುತ್ತದೆ. ಈ ಲಸಿಕೆ ಪಡೆದುಕೊಂಡವರಲ್ಲಿ ಇನ್ಫ್ಲೂಯೆಂಜಾ ಮತ್ತು ನಾವಲ್ ಕೊರೊನಾ ವೈರಸ್ನ ವಿರುದ್ಧದ ರಕ್ಷಣಾ ಸಾಮರ್ಥ್ಯ ದುಪ್ಪಟ್ಟಾಗುವ ಸಾಧ್ಯತೆ ಇದೆ.

ಇತರೆ ವೈರಸ್ಗಳ ನಿಯಂತ್ರಣ
ಇದರ ಜತೆಗೆ ಎಚ್1ಎನ್1, ಎಚ್3ಎನ್2 ಮತ್ತು ಬಿ ಇನ್ಫ್ಲೂಯೆಂಜಾ ವೈರಸ್ಗಳನ್ನೂ ನಾಸಿಕ ಸಿಂಪಡೆಣೆಯ ಲಸಿಕೆ ನಿಯಂತ್ರಿಸಬಲ್ಲದು. ಇದರು ಮೂರು ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಲು ಇನ್ನೂ ಒಂದು ವರ್ಷ ಬೇಕಾಗಬಹುದು ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ಮೈಕ್ರೊಬಯಾಲಜಿಸ್ಟ್ ಯುಯೆನ್ ಕ್ವೊಕ್ ಯುಂಗ್ ತಿಳಿಸಿದ್ದಾರೆ.

ಐದು ಲಸಿಕೆ ತಂತ್ರಜ್ಞಾನ
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಹೆಚ್ಚಿನ ಪರಿಶೀಲನೆಗಾಗಿ ಪರಿಗಣಿಸಿರುವ ಐದು ಲಸಿಕೆ ತಂತ್ರಜ್ಞಾನಗಳಲ್ಲಿ ಈ ನಾಸಿಕ ಸಿಂಪಡಣೆ ಲಸಿಕೆಯ ಮಾದರಿಯೂ ಸೇರಿದೆ. ಚೀನಾದ ಎಮರ್ಜಿಂಗ್ ಇನ್ಫೆಕ್ಟಿಯಸ್ ಡಿಸೀಸಸ್ ಪ್ರಯೋಗಾಲಯವು ಲಸಿಕೆಯ ಸುಧಾರಣೆಯ ಕಾರ್ಯದಲ್ಲಿ ಕ್ಸಿಯಾಮೆನ್ ವಿಶ್ವವಿದ್ಯಾಲಯ ಹಾಗೂ ಬೀಜಿಂಗ್ ವಾಂಟೈ ಬಯಾಲಾಜಿಕಲ್ ಫಾರ್ಮಸಿಯೊಂದಿಗೆ ಕೆಲಸ ಮಾಡುತ್ತಿದೆ.
Recommended Video

ನಾಲ್ಕು ಬಗೆಯ ತಂತ್ರಜ್ಞಾನ
ಈ ನಾಸಿಕ ಸಿಂಪಡಣೆ ಲಸಿಕೆಯು ಇನ್ಫ್ಲೂಯೆಂಜಾ ಲಸಿಕೆಯ ಅಂಶಗಳನ್ನೇ ಬಳಸಿಕೊಂಡಿದೆ. ಇದರ ಜತೆಗೆ ಚೀನಾವು ಇನ್ಆಕ್ಟಿವೇಟೆಡ್ ಲಸಿಕೆಗಳು, ಅಡೆನೊವೈರಲ್ ವೆಕ್ಟರ್ ಆಧಾರಿತ ಲಸಿಕೆಗಳು, ಡಿಎನ್ಎ ಮತ್ತು ಎಂಆರ್ಎನ್ಎ ಲಸಿಕೆಗಳ ಇತರೆ ನಾಲ್ಕು ತಂತ್ರಜ್ಞಾನವನ್ನು ಬಳಸಿ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ಆಕ್ಟಿವೇಟೆಡ್ ಲಸಿಕೆಗಳು ಮಾರುಕಟ್ಟೆಗೆ ಆದಷ್ಟು ಬೇಗನೆ ಬರುವ ನಿರೀಕ್ಷೆಯಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications