California Wildfire: ಬಿತ್ತು.. ಬಿತ್ತು.. ಮತ್ತಷ್ಟು ಕಾಡಿಗೆ ಬೆಂಕಿ ಬಿತ್ತು...
ಅಮೆರಿಕ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ, ನೋಡ ನೋಡುತ್ತಲೇ ಅಮೆರಿಕದ ಹಲವು ಕಡೆ ಕಾಡಿನ ಬೆಂಕಿ ಹಬ್ಬಿಕೊಳ್ಳುತ್ತಿದೆ. ಜನ ಕೂಡ ಈ ವಾತಾವರಣ ನೋಡಿ ಕಕ್ಕಾಬಿಕ್ಕಿ ಆಗಿದ್ದು, ಓಡಿ ಹೋಗುತ್ತಿದ್ದಾರೆ. ಅದರಲ್ಲೂ ಹಾಲಿವುಡ್ ಸೆಲೆಬ್ರಿಟಿಗಳಿಗೆ ಜೀವ ಭಯ ಶುರುವಾಗಿರುವ ಸಮಯದಲ್ಲೇ, ಅಮೆರಿಕದ ಹವಾಮಾನ ಇಲಾಖೆಯ ಅಧಿಕಾರಿಗಳು ಮತ್ತೊಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದರ ಜೊತೆಗೆ 25 ಜನರ ಜೀವ ಕಾಡಿನ ಬೆಂಕಿಗೆ ಬಲಿಯಾಗಿ ಹೋಗಿದೆ.
ಅಮೆರಿಕದ ಕಾಡುಗಳಿಗೆ ಬೆಂಕಿ ಬಿದ್ದು ಹಲವು ದಿನಗಳೇ ಕಳೆದಿವೆ. ಆದರೂ ಅಲ್ಲಿನ ಕಾಡಿನ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರ ಬದಲಾಗಿ, ಮತ್ತಷ್ಟು ಜಾಗಗಳಿಗೆ ಬೆಂಕಿಯ ಕಿಡಿ ಹಬ್ಬುತ್ತಿದೆ. ಇದು ಭಯ ಮತ್ತಷ್ಟು ಹೆಚ್ಚಾಗುವಂತೆ ಮಾಡಿರುವ ಸಮಯದಲ್ಲೇ, ಈಗ ಮತ್ತಷ್ಟು ಆತಂಕ ಹುಟ್ಟಿಸುವ ಸುದ್ದಿ ಸಿಕ್ಕಿದೆ. ಹವಾಮಾನ ಇಲಾಖೆ ಅಧಿಕಾರಿಗಳು ಈಗ ಮತ್ತೆ ಬಿಸಿ ಬಿರುಗಾಳಿ ಬೀಸುವ ವಾರ್ನಿಂಗ್ ಕೊಟ್ಟಿದ್ದಾರೆ. ಹೀಗಾಗಿ ಇನ್ನಷ್ಟು ಕಾಡಿನ ಪ್ರದೇಶಗಳಿಗೆ ಬೆಂಕಿ ಬೀಳುವ ಭಯ ಕಾಡುತ್ತಿದೆ.

ಬಿತ್ತು.. ಬಿತ್ತು.. ಮತ್ತಷ್ಟು ಬೆಂಕಿ ಬಿತ್ತು...
ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಬೆಂಕಿ ಬಿದ್ದು ನಿಯಂತ್ರಣಕ್ಕೆ ಸಿಗದಷ್ಟು ಕೈಮೀರಿ ಹೋಗಿದೆ ಪರಿಸ್ಥಿತಿ. ಹತ್ತಾರು ಸಾವಿರ ಕಟ್ಟಡಗಳು & ಮನೆಗಳು ಈಗಾಗಲೇ ಕಾಡಿನ ಬೆಂಕಿಗೆ ಸುಟ್ಟು ಭಸ್ಮವಾಗಿ ಹೋಗಿವೆ. ಇದೇ ಸಮಯದಲ್ಲಿ 25 ಜನರ ಜೀವ ಕೂಡ ಹೋಗಿದೆ ಎಂಬ ಸುದ್ದಿ ಇನ್ನಷ್ಟು ಭಯ ಹುಟ್ಟಿಸಿದೆ. ಜೋ ಬೈಡನ್ ಸರ್ಕಾರ ಇನ್ನು 5 ದಿನಗಳ ಕಾಲ ಆಡಳಿತದಲ್ಲಿ ಇರಲಿದ್ದು, ಟ್ರಂಪ್ ಸರ್ಕಾರ ಆಡಳಿತಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ಇದೇ ಸಮಯದಲ್ಲಿ ವಾತಾವರಣ ಇನ್ನಷ್ಟು ಕಠಿಣವಾಗಿದೆ.
ದಿಢೀರ್ ಬೆಂಕಿ ಬಿದ್ದಿದ್ದು ಹೇಗೆ?
ಹಾಲಿವುಡ್ ಸಿನಿಮಾ ಸ್ಟಾರ್ಸ್ ಅಂದ್ರೆ ಬರೀ ದುಡ್ಡಿನ ಮೇಲೆ ಮಲಗುತ್ತಾರೆ, ಅವರಿಗೆ ಬೇಕು ಅಂತಾ ಅನಿಸುವ ಪ್ರತಿಯೊಂದು ವಸ್ತು ಕೂಡ ಖರೀದಿ ಮಾಡುವಷ್ಟು ಶಕ್ತಿ ಅವರಲ್ಲಿ ಇರುತ್ತದೆ, ಹೀಗೆ ಏನೇನೋ ಊಹೆಗಳು ಜಗತ್ತಿನಾದ್ಯಂತ ಇರುತ್ತವೆ. ಆದರೆ ಇದೀಗ ಅಮೆರಿಕದ ಕಾಡಿನ ಬೆಂಕಿ ಹಾಲಿವುಡ್ ಸಿನಿಮಾ ಸ್ಟಾರ್ಗಳ ಬಂಡವಾಳ ಬಯಲಾಗುವಂತೆ ಮಾಡಿದೆ.
ಈ ಮಧ್ಯೆ ದಿಢೀರ್ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಕಿ ಬಿದ್ದಿದ್ದು ಹೇಗೆ? ಎಂಬ ಪ್ರಶ್ನೆ ಕೂಡ ಜಗತ್ತಿನಾದ್ಯಂತ ಕಾಡುತ್ತಿದೆ. ಹಾಗೇ ಚಳಿಗಾಲದಲ್ಲಿ ಹೀಗೆಲ್ಲಾ ಬೆಂಕಿ ಬೀಳಲು ಸಾಧ್ಯ ಇಲ್ಲ ಎಂಬ ವಾದ ಕೂಡ ಕೇಳಿ ಬಂದಿದೆ. ಒಟ್ನಲ್ಲಿ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಬಿದ್ದಿರುವ ಕಾಡ್ಗಿಚ್ಚು ಸಾಕಷ್ಟು ದೊಡ್ಡ ಅವಾಂತರ ಸೃಷ್ಟಿ ಮಾಡುತ್ತಿದ್ದು, ಈ ಪರಿಸ್ಥಿತಿಗೆ ಆದಷ್ಟು ಬೇಗ ಬ್ರೇಕ್ ಬೀಳಬೇಕಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications