ಭಾರತದ ಭರತ್ ವಾಟ್ವಾನಿ, ಸೋನಮ್ ವಾಂಗ್ ಚುಕ್ ಗೆ ರಾಮನ್ ಮಾಗ್ಸೆಸೆ ಗೌರವ
ಮನಿಲಾ (ಫಿಲಿಪೈನ್ಸ್), ಜುಲೈ 26: ಏಷ್ಯಾ ಖಂಡದಲ್ಲಿ 'ನೊಬೆಲ್'ಗೆ ಸಮಾನವಾಗಿ ಪರಿಗಣಿಸುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಇಬ್ಬರು ಭಾರತೀಯರು ಆಯ್ಕೆಯಾಗಿದ್ದಾರೆ. ಮಾನಸಿಕ ಸಮಸ್ಯೆಯಿಂದ ರಸ್ತೆ ಬದಿಯಲ್ಲಿ ನರಳುತ್ತಿದ್ದವರಿಗೆ ಚಿಕಿತ್ಸೆ ಕೊಡಿಸಿ, ಅವರು ಮತ್ತೆ ತಮ್ಮ ಕುಟುಂಬವನ್ನು ಸೇರಲು ನೆರವಾದ ಭರತ್ ವಾಟ್ವಾನಿ ಅವರಿಗೆ ಗೌರವ ದೊರೆತಿದೆ.
ಇನ್ನು ಭಾರತದವರೇ ಆದ ಸೋನಮ್ ವಾಂಗ್ ಚುಕ್ ಸಮಾಜದ ಪ್ರಗತಿಗಾಗಿ ಪರಿಸರ, ಸಂಸ್ಕೃತಿ ಹಾಗೂ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ರಾಮನ್ ಮ್ಯಾಗ್ಸಸೆ ಘೋಷಿಸಲಾಗಿದೆ. ಗುರುವಾರದಂದು ಪ್ರಶಸ್ತಿ ಪುರಸ್ಕೃತರನ್ನು ಘೋಷಿಸಿದ್ದು, ಒಟ್ಟು ಆರು ಮಂದಿ ಪೈಕಿ ಭಾರತದವರು ಇಬ್ಬರಿದ್ದಾರೆ.
ಕಾಂಬೋಡಿಯಾದ ಯುಕ್ ಚಾಂಗ್, ಪೂರ್ವ ತಿಮೋರ್ ನ ಮರಿಯಾ ಡಿ ಲೌರ್ಡೆಸ್ ಮಾರ್ಟಿನ್ ಕ್ರುಜ್, ಫಿಲಿಪೈನ್ಸ್ ನ ಹೊವಾರ್ಡ್ ಡೀ, ವಿಯೆಟ್ನಾಂ ದೇಶದ ವೋ ಥಿ ಹೊಂಗ್ ಯೆನ್ ರೊಮ್ ಗೆ ಈ ಸಾಲಿನ ರಾಮನ್ ಮ್ಯಾಗ್ಸೆಸೆ ಗೌರವ ಸಂದಿದೆ.

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಷನ್ ನ ಅಧ್ಯಕ್ಷರಾದ ಕಾರ್ಮೆಂಸಿಟಾ ಅಬೆಲ್ಲಾ ಮಾತನಾಡಿ, ತಮ್ಮ ಸಮಾಜವನ್ನು ಮುನ್ನಡೆಸಿದ, ಭರವಸೆದಾಯಕ, ದೊಡ್ಡಸಮುದಾಯದ ಒಳಿತಾತಿಗಾಗಿ ಕೆಲಸ ಮಾಡಿರುವ ಈ ಬಾರಿಯ ಪ್ರಶಸ್ತಿ ವಿಜೇತರು ನಿಚ್ಚಳವಾಗಿ ಏಷ್ಯಾದ ಹೀರೋಗಳು ಎಂದಿದ್ದಾರೆ.
ಅಂದಹಾಗೆ ಏಷ್ಯಾದ ಅತ್ಯಂತ ಪ್ರತಿಷ್ಠಿತ ಗೌರವವಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು 1957ರಲ್ಲಿ ಆರಂಭವಾಗಿದ್ದು, ಫಿಲಿಪೈನ್ಸ್ ನ ಮೂರನೇ ಅಧ್ಯಕ್ಷರ ಹೆಸರಿನಲ್ಲಿ ಕೊಡಲಾಗುತ್ತಿದೆ. ಈ ವರ್ಷದ ಪ್ರಶಸ್ತಿಯು ಪ್ರಶಸ್ತಿ ಪತ್ರ, ದಿವಂಗತ ಅಧ್ಯಕ್ಷರ ಚಿತ್ರವನ್ನು ಒಳಗೊಂಡ ಪದಕ ಮತ್ತು ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ವರ್ಷದ ಆಗಸ್ಟ್ 31ರಂದು ಫಿಲಿಪೈನ್ಸ್ ನಲ್ಲಿ ನಡೆಯಲಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications