ಬಾಂಗ್ಲಾದಲ್ಲಿ ಹಿಂದೂ ಕಾರ್ಮಿಕ ದೀಪು ಚಂದ್ರ ದಾಸ್ ಹತ್ಯೆ: ಧರ್ಮನಿಂದನೆ ಆರೋಪ ಸುಳ್ಳು ಎಂದ ಕುಟುಂಬ
ಬಾಂಗ್ಲಾದೇಶದ ಭಾಲುಕಾ ಪ್ರದೇಶದಲ್ಲಿ 27 ವರ್ಷದ ದೀಪು ಚಂದ್ರ ದಾಸ್ ಅವರ ಹತ್ಯೆ, ವದಂತಿಗಳ ಆಧಾರದ ಮೇಲೆ ನಡೆಯುವ ಗುಂಪು ಹಿಂಸಾಚಾರದ ಪರಿಣಾಮಗಳನ್ನು ಮತ್ತೆ ಒತ್ತಿ ಹೇಳುತ್ತಿದೆ. ಇದರ ಜೊತೆಗೆ ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳಲು ವಿಫಲವಾದಾಗ ಅಲ್ಪಸಂಖ್ಯಾತರು ಎಷ್ಟು ಅಸಹಾಯಕರಾಗುತ್ತಾರೆ ಎಂಬುದನ್ನೂ ಇದು ಸ್ಪಷ್ಟಪಡಿಸಿದೆ.
ಮೈಮೆನ್ಸಿಂಗ್ ಜಿಲ್ಲೆಗೆ ಸೇರಿದ ಹಿಂದೂ ವಸ್ತ್ರ ಕಾರ್ಮಿಕ ದೀಪು ಅವರನ್ನು ಡಿಸೆಂಬರ್ 18ರಂದು ಥಳಿಸಿ ಕೊಂದು, ನಂತರ ಅವರ ಶವಕ್ಕೆ ಬೆಂಕಿ ಹಚ್ಚಲಾಗಿದೆ. ಆರಂಭದಲ್ಲಿ ಧರ್ಮನಿಂದನೆ ಆರೋಪದ ಕಾರಣದಿಂದ ಅವರನ್ನು ಗುರಿಯಾಗಿಸಲಾಯಿತು ಎಂಬ ಹೇಳಿಕೆಗಳು ಕೇಳಿಬಂದಿದ್ದವು. ಆದರೆ ಒನ್ಇಂಡಿಯಾ ನಡೆಸಿದ ಅವರ ಕುಟುಂಬದೊಂದಿಗೆ ನಡೆದ ವಿಶೇಷ ಸಂಭಾಷಣೆ, ಈ ಘಟನೆಯ ಹಿಂದೆ ಸಂಪೂರ್ಣವಾಗಿ ವಿಭಿನ್ನ ಹಾಗೂ ಅತ್ಯಂತ ಆತಂಕಕಾರಿ ಸತ್ಯವಿದೆ ಎಂಬುದನ್ನು ಬಹಿರಂಗಪಡಿಸಿದೆ. ದೀಪು ಅವರ ಸಹೋದರನ ಪ್ರಕಾರ, ಈ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ. ದೀಪು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಕಾರ್ಖಾನೆಯೊಳಗಿನ ಕೆಲಸದ ಸ್ಥಳದ ವಿವಾದದಿಂದ ಹಿಂಸಾಚಾರ ಉಂಟಾಗಿದೆ ಎಂದು ಕುಟುಂಬ ಹೇಳಿದೆ.

"ಅವರಿಗೆ ಈಗಷ್ಟೇ ಬಡ್ತಿ ಸಿಕ್ಕಿತ್ತು"
ದೀಪು ಇತ್ತೀಚೆಗೆ ಕಾರ್ಖಾನೆಯಲ್ಲಿ ಮೇಲ್ವಿಚಾರಣಾ ಹುದ್ದೆಗೆ ಬಡ್ತಿ ಪಡೆದಿದ್ದರು. ಈ ಬಡ್ತಿ ಸಹೋದ್ಯೋಗಿಗಳಲ್ಲಿ ಅಸಮಾಧಾನವನ್ನು ಉಂಟುಮಾಡಿರಬಹುದು ಎಂದು ಅವರ ಸಹೋದರ ಒನ್ ಇಂಡಿಯಾಗೆ ತಿಳಿಸಿದರು. "ಅವರು ಹೆಚ್ಚು ಮಾತನಾಡುವ ವ್ಯಕ್ತಿಯಲ್ಲ. ಯಾವುದೇ ಗಂಭೀರ ವಿವಾದ ಅಥವಾ ಬೆದರಿಕೆ ಇದ್ದಿದ್ದರೆ, ಅವರು ನಮಗೆ ಹೇಳುತ್ತಿದ್ದರು. ಅವರು ಯಾವುದೇ ಧರ್ಮವನ್ನು ಅವಮಾನಿಸುತ್ತಾರೆ ಎಂದು ನಾವು ನಂಬಲು ಸಾಧ್ಯವಿಲ್ಲ" ಎಂದು ಸಹೋದರ ಹೇಳಿದರು.
ದೀಪು ಮೇಲೆ ಮೊದಲು ಹಲ್ಲೆ ನಡೆಸಿದ್ದು ಕಾರ್ಖಾನೆ ಆವರಣದೊಳಗೆ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಆತನನ್ನು ರಕ್ಷಿಸುವ ಅಥವಾ ಅಧಿಕಾರಿಗಳಿಗೆ ತಕ್ಷಣ ಎಚ್ಚರಿಕೆ ನೀಡುವ ಬದಲು, ಕಾರ್ಖಾನೆ ಆಡಳಿತ ಮಂಡಳಿಯು ಆತನನ್ನು ಬಲವಂತವಾಗಿ ಹೊರಗೆ ತಳ್ಳಿ, ಕೋಪಗೊಂಡ ಜನಸಮೂಹಕ್ಕೆ ಒಪ್ಪಿಸಿತು ಎಂದು ಆರೋಪಿಸಲಾಗಿದೆ. ಆತನನ್ನು
ಹೊಡೆಯಲಾಯಿತು, ಎಳೆದೊಯ್ಯಲಾಯಿತು, ಸುಟ್ಟು ಹಾಕಲಾಯಿತು. ನಂತರ ನಡೆದದ್ದು ಅತ್ಯಂತ ಕ್ರೂರ ಕೃತ್ಯ.

ಸಾಯುವ ಮೊದಲೇ ಸುಟ್ಟರು!
ಕುಟುಂಬದವರ ಪ್ರಕಾರ, ದೀಪು ಅವರನ್ನು ತೀವ್ರವಾಗಿ ಥಳಿಸಿ, ಸುಮಾರು ಮೂರು ಕಿಲೋಮೀಟರ್ ಎಳೆದುಕೊಂಡು ಹೋಗಿ, ಮರಕ್ಕೆ ನೇತು ಹಾಕಿ, ಜೀವಂತವಾಗಿರುವಾಗಲೇ ಬೆಂಕಿ ಹಚ್ಚಲಾಯಿತು. "ಜನರು ಸತ್ತ ನಂತರ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ನನ್ನ ಸಹೋದರನನ್ನು ಸಾಯುವ ಮೊದಲೇ ಸುಡಲಾಯಿತು. ಪ್ರಾಣಿಗಳನ್ನು ಸಹ ಈ ರೀತಿ ನಡೆಸಿಕೊಳ್ಳುವುದಿಲ್ಲ ಎಂದು ಅವರ ಸಹೋದರ ಕಣ್ಣೀರಿಡುತ್ತಾ ಸಂಕಟ ಹೊರಹಾಕಿದರು. ಸಾವಿರಾರು ಜನರು ಹಾಜರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆದರೆ ಯಾರೂ ಮಧ್ಯಪ್ರವೇಶಿಸಲಿಲ್ಲ.
ಕುಟುಂಬವು ಪ್ರಸ್ತುತ ಸುರಕ್ಷಿತವಾಗಿದೆ ಎಂದು ಹೇಳುತ್ತದೆ, ಆದರೆ ಸುರಕ್ಷಿತ ಭಾವನೆ ಇಲ್ಲ. "ನಮ್ಮ ಇಡೀ ಮನೆ ದೀಪುವಿನ ಆದಾಯದ ಮೇಲೆ ಅವಲಂಬಿತವಾಗಿತ್ತು. ಅವನೊಬ್ಬನೇ ಜೀವನ ನಿರ್ವಹಣೆ ಮಾಡುತ್ತಿದ್ದ. ಈಗ ಎಲ್ಲವೂ ತಲೆಕೆಳಗಾಗಿದೆ" ಎಂದು ಸಹೋದರ ಹೇಳಿದರು. ಸಾಮಾಜಿಕ ಮಾಧ್ಯಮದ ತಪ್ಪು ಮಾಹಿತಿಯು ಅವರ ಆಘಾತವನ್ನು ಹೆಚ್ಚಿಸಿದೆ. ಪೊಲೀಸರು ದೀಪು ಅವರನ್ನು ಗುಂಪಿಗೆ ಒಪ್ಪಿಸಿದ್ದಾರೆ ಎಂದು ಸೂಚಿಸುವ ಸುಳ್ಳು ಹೇಳಿಕೆಗಳು ಆನ್ಲೈನ್ನಲ್ಲಿ ಹರಡಿವೆ. ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ, ಲಭ್ಯವಿರುವ ಪುರಾವೆಗಳು ಆರೋಪವನ್ನು ಬೆಂಬಲಿಸುವುದಿಲ್ಲ. ಆದರೆ ಆ ಹೊತ್ತಿಗೆ, ಹಾನಿ ನಡೆದೇ ಹೋಗಿತ್ತು.
ರಾಜಕೀಯ ಮತ್ತು ರಾಜತಾಂತ್ರಿಕ ಪರಿಣಾಮಗಳು
ಈ ಹತ್ಯೆಯು ಬಾಂಗ್ಲಾದೇಶವನ್ನು ಮೀರಿದ ಪರಿಣಾಮಗಳನ್ನು ಬೀರಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಸೇರಿದಂತೆ ವಿವಿಧ ಗುಂಪುಗಳ ನೇತೃತ್ವದಲ್ಲಿ ಭಾರತದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ ಬಾಂಗ್ಲಾದೇಶವು ದೆಹಲಿ ಮತ್ತು ಸಿಲಿಗುರಿಯಲ್ಲಿ ಕೆಲವು ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಇದು ಭಾರತ-ಬಾಂಗ್ಲಾದೇಶ ಸಂಬಂಧಗಳಿಗೆ ಒತ್ತಡವನ್ನುಂಟು ಮಾಡಿತು. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಈ ಹತ್ಯೆಯನ್ನು ಖಂಡಿಸಿದ್ದಾರೆ. ಇಲ್ಲಿಯವರೆಗೆ ಹಲವರ ಬಂಧನಗಳನ್ನು ಮಾಡಲಾಗಿದೆ. ಆದರೂ, ರಾಜ್ಯದಿಂದ ಯಾವುದೇ ಅರ್ಥಪೂರ್ಣ ಬೆಂಬಲ ಸಿಕ್ಕಿಲ್ಲ ಎನ್ನುತ್ತಿದೆ ಮೃತರ ಕುಟುಂಬ.
ಭಾಲುಕಾ ಗುಂಪು ಹಲ್ಲೆ ಒಂದು ಪ್ರತ್ಯೇಕ ಘಟನೆಯಲ್ಲ. ಧಾರ್ಮಿಕ ಅಪರಾಧದ ಪರಿಶೀಲಿಸದ ಆರೋಪಗಳು ತ್ವರಿತವಾಗಿ ಗುಂಪು ಹಿಂಸಾಚಾರಕ್ಕೆ ಕಾರಣವಾಗುತ್ತವೆ. ದೀಪು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಯಾವುದೇ ಧರ್ಮನಿಂದೆಯ ಹೇಳಿಕೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ. ಯಾವುದೇ ಸಾಮಾಜಿಕ ಮಾಧ್ಯಮ ಪೋಸ್ಟ್ ಇಲ್ಲ. ಯಾವುದೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವಿಲ್ಲ. ಕೇವಲ ವದಂತಿಗಳು ಎಂದು ತನಿಖಾಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನ್ಯಾಯ ಇನ್ನೂ ದೂರದಲ್ಲಿದೆ. ಕುಟುಂಬದ ಬೇಡಿಕೆ ಸರಳವಾಗಿದೆ, ಅದು ಹೊಣೆಗಾರಿಕೆ. "ನಮಗೆ ನ್ಯಾಯ ಬೇಕು. ನನ್ನ ಸಹೋದರನನ್ನು ಕೊಂದವರಿಗೆ ಶಿಕ್ಷೆಯಾಗಬೇಕು, ನಾವು ಕೇಳಿಕೊಳ್ಳವುದು ಇಷ್ಟೇ ಎಂದು ಅವರ ಸಹೋದರ ಹೇಳಿದರು. ದೀಪು ಚಂದ್ರ ದಾಸ್ ಅವರನ್ನು ಅಗಲಿದ್ದಾರೆ. ಅವರು ತಮ್ಮ ಪೋಷಕರು, ಒಡಹುಟ್ಟಿದವರು ಮತ್ತು ಚಿಕ್ಕ ಮಗುವನ್ನು ಬಿಟ್ಟು ಹೋಗಿದ್ದಾರೆ. ಅವರ ಸಾವು ಮತ್ತೊಂದು ಅಂಕಿಅಂಶವಾಗುತ್ತದೆಯೇ ಅಥವಾ ಹೊಣೆಗಾರಿಕೆಯನ್ನು ಒತ್ತಾಯಿಸುವ ಮಹತ್ವದ ತಿರುವು ಪಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications