ನ್ಯೂಸ್ ಪೇಪರ್ ಜೊತೆಗೆ ಟಾಯ್ಲೆಟ್ ಪೇಪರ್ ಪ್ರಿಂಟ್ ಮಾಡಿದ ಸುದ್ದಿ ಪತ್ರಿಕೆ
ಆಸ್ಟೇಲಿಯಾ, ಮಾರ್ಚ್ 6: ಸುದ್ದಿ ಪತ್ರಿಕೆಯೊಂದು ನ್ಯೂಸ್ ಪೇಪರ್ ಜೊತೆಗೆ ಟಾಯ್ಲೆಟ್ ಪೇಪರ್ ಅನ್ನು ಪ್ರಿಂಟ್ ಮಾಡಿದೆ. ಆಸ್ಟೇಲಿಯಾದಲ್ಲಿ ಕೊರೊನಾ ವೈರಸ್ ಎಫೆಕ್ಟ್ ನಿಂದ ಈ ಘಟನೆ ನಡೆದಿದೆ.
ಕೊರೊನಾ ವೈರಸ್ನಿಂದ ಆಸ್ಟೇಲಿಯಾದಲ್ಲಿ ಟಾಯ್ಲೆಟ್ ಪೇಪರ್ ಕೊರತೆ ಎದುರಾಗಿದೆ. ದಾಸ್ತಾನುಗಳನ್ನು ಟಾಯ್ಲೆಟ್ ಪೇಪರ್ ಕಡಿಮೆ ಆಗಿದ್ದು, ಬೇಡಿಕೆಗೆ ತಕ್ಕ ಪೂರೈಕೆ ನೀಡಲು ಆಗುತ್ತಿಲ್ಲ. ಹಾಗಾಗಿ, ಟಾಯ್ಲೆಟ್ ಪೇಪರ್ಗೆ ಇರುವ ಡಿಮ್ಯಾಂಡ್ ಅನ್ನು ಸರಿದೂಗಿಸಲು ನ್ಯೂಸ್ ಪೇಪರ್ ಸಂಸ್ಥೆಯೊಂದು ಮುಂದಾಗಿದೆ.
ಎನ್ಟಿ ನ್ಯೂಸ್ ಎನ್ನುವ ಸುದ್ದಿ ಪತ್ರಿಕೆ ಎಂಟು ಪುಟಗಳನ್ನು ಅಧಿಕವಾಗಿ ಪ್ರಿಂಟ್ ಮಾಡಿದೆ. ಇದನ್ನು ಜನರು ಟಾಯ್ಲೆಟ್ ಪೇಪರ್ ಆಗಿ ಬಳಸಬಹುದು ಎಂದು ತಿಳಿಸಿದೆ. ಪತ್ರಿಕೆಯ ಸುದ್ದಿ ಮುಗಿದ ಮೇಲೆ ಟಾಯ್ಲೆಟ್ ಪೇಪರ್ ಗಳು ಇವೆ.

ಎನ್ಟಿ ನ್ಯೂಸ್ ಪತ್ರಿಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಟಾಯ್ಲೆಟ್ ಪೇಪರ್ರೊಂದಿಗೆ ಪ್ರಿಂಟ್ ಆದ ಟಾಯ್ಲೆಟ್ ಪೇಪರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎನ್ಟಿ ನ್ಯೂಸ್ ತನ್ನ ಹಾಸ್ಯಮಯ ಶೀರ್ಷಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದ ಪ್ರತಿಕೆಯಾಗಿದೆ. ಇದೀಗ ಪತ್ರಿಕೆಯ ಜೊತೆಗೆ ಟಾಯ್ಲೆಟ್ ಪೇಪರ್ ಪ್ರಿಂಟ್ ಮಾಡಿದೆ.
YES, WE ACTUALLY DID PRINT IT #toiletpapercrisis pic.twitter.com/jusP50ojYu
— The NT News (@TheNTNews) March 4, 2020
ಈ ಪತ್ರಿಕೆ ಸಂಪಾದಕ ಮ್ಯಾಟ್ ವಿಲಿಯಮ್ಸ್ ಮಾತನಾಡಿದ್ದು, ''ನಮ್ಮ ಪತ್ರಿಕೆ ತುಂಬ ಚೆನ್ನಾಗಿ ಮಾರಾಟ ಆಗುತ್ತಿದೆ. ನಾವು ನಮ್ಮ ಓದುಗರನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದನೆ ನೀಡುತ್ತಿದ್ದೇವೆ. ಈಗ ಟಾಯ್ಲೆಟ್ ಪೇಪರ್ಗೆ ದೊಡ್ಡ ಬೇಡಿಕೆ ಶುರುವಾಗಿದ್ದು, ಅದನ್ನು ಪೂರೈಸುತ್ತಿದ್ದೇವೆ'' ಎಂದಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications