ಯುಎಇಯಿಂದ ಭಾರತಕ್ಕೆ 'ಅಮಿತಾಬ್ ಬಚ್ಚನ್' ಹಸ್ತಾಂತರ
ಬೆಂಗಳೂರು, ಮೇ 18 : ಅಮಿತಾಬ್ ಬಚ್ಚನ್ ಅವರನ್ನು ಯುಎಇ ಯಿಂದ ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತಿದೆ. ಅರೇ ಇದೇನಿದು ಬಾಲಿವುಡ್ ಬಿಗ್ ಬಿ ಯನ್ನು ಯಾಕೆ ಹಸ್ತಾಂತರ ಮಾಡುತ್ತಿದ್ದಾರೆ? ಎಂದು ಆಶ್ಚರ್ಯ ಪಡುತ್ತಿದ್ದೀರಾ ಮುಂದಕ್ಕೆ ಓದಿ...
ಇದೀಗ ಉಗ್ರರ ಕಣ್ಣು ಪ್ರಖ್ಯಾತ ಸಿನಿಮಾ ನಟರ ಹೆಸರಿನ ಮೇಲೂ ಬಿದ್ದಿದೆ. ಹಿಂದೆ ರಿಯಾಜ್ ಭಟ್ಕಳ್ ಮತ್ತು ಯಾಸಿನ್ ಭಟ್ಕಳ್ ತಮ್ಮನ್ನು ಶಾರುಖ್ ಖಾನ್ ಎಂದು ಕರೆದುಕೊಂಡಿದ್ದರು. ಈಗ ಮತ್ತೊಬ್ಬ ಉಗ್ರ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೆಸರಿನ ಮೇಲೆ ಕಣ್ಣು ಹಾಕಿದ್ದಾನೆ.[ಐಎಸ್ಐಎಸ್ ಸೇರಲು ಮುಂದಾಗಿದ್ದ 21 ಯುವಕರಿಗೆ ತಡೆ]

ನಕಲಿ ಕರೆನ್ಸಿ ದಂಧೆಯಲ್ಲಿ ಭಾಗಿಯಾಗಿರುವ ಕೇರಳ ಕಾಸರಗೋಡು ಮೂಲದ ಹಜಿ ಅಬ್ದುಲ್ಲಾ ತನ್ನನ್ನು ತಾನು ಅಮಿತಾಬ್ ಬಚ್ಚನ್ ಎಂದು ಕರೆದುಕೊಂಡಿದ್ದಾನೆ. ಯುಎಇ ಯಲ್ಲಿ ವಿಚಾರಣೆ ಎದುರಿಸಿದ ಅಬ್ದುಲ್ಲಾ ನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತಿದೆ.
ಫ್ಯಾನ್ಸಿ ಹೆಸರು ಉಗ್ರರಿಗೆ ಯಾಕೆ ಬೇಕು?
ಅಲಿಯಾಸ್ ಎಂದು ಕರೆದಿಕೊಳ್ಳದಿದ್ದರೆ ಉಗ್ರರಿಗೆ ಏನಾಗುತ್ತದೋ ತಿಳಿಯದು. ಪೊಲೀಸರ ಕಣ್ಣಿಗೆ ಮಣ್ಣೆರೆಚಲು, ಭದ್ರತಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು, ದೇಶದೆಲ್ಲಡೆ ಸುಲಭವಾಗಿ ಓಡಾಡಲು ಉಗ್ರರು ತಮ್ಮ ಹೆಸರನ್ನು ಪದೇ ಪದೇ ಬದಲಾಯಿಸುತ್ತಿರುತ್ತಾರೆ.
ಯಾಸಿನ್ ಭಟ್ಕಳ್ ಬಳಿ ನೀನೇಕೆ ಶಾರುಖ್ ಖಾನ್ ಹೆಸರು ಇಟ್ಟುಕೊಂಡೆ ಎಂದದೆ ಆತ ನಾನು ಶಾರುಖ್ ನ ಅಭಿಮಾನಿ ಹಾಗಾಗಿ ಇಟ್ಟುಕೊಂಡೆ ಎಂದು ಹೇಳಿದ್ದ. ರಿಯಾಜ್ ಭಟ್ಕಳ್ ಶಾರುಖ್ ಖಾನ್ ಹೆಸರಿಟ್ಟುಕೊಳ್ಳಲು ಇದೇ ಕಾರಣವಿತ್ತು.['ಜಾಣ' ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?]
ಅಮಿತಾಬ್ ಬಚ್ಚನ್ ಇದೇ ಮೊದಲು
ಹಿಂದೆಲ್ಲ ಅಲಿಯಾಸ್ ಗಳನ್ನು ದುಷ್ಕರ್ಮಿಗಳ ಪುಂಡಾಟ ಆಧರಿಸಿ ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಹೆಸರನ್ನು ಉಗ್ರನೊಬ್ಬ ತನ್ನ ಹೆಸರಿಗೆ ಬಳಸಿಕೊಂಡಿದ್ದಾನೆ.[ಡ್ರೋನ್ ಬಳಸಿ ದೆಹಲಿ ಸ್ಫೋಟಕ್ಕೆ ಲಷ್ಕರ್ ಸಂಚು]
ಹಜಿಯನ್ನು ಭಾರತಕ್ಕೆ ಹಸ್ತಾಂತರ ಮಾಡುತ್ತಿರುವ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಅನೇಕ ಮಾಹಿತಿಗಳನ್ನು ಬಹಿರಂಗ ಮಾಡಿದೆ. ನಕಲಿ ನೋಟು ಜಾಲದ ಕಿಂಗ್ ಪಿನ್ ಈ ಹಜಿ . ಹಜಿಗೆ ಅಂತರಾಷ್ಟ್ರೀಯ ಮಾದಕ ವಸ್ತು ಸಾಗಾಟಗಾರ ಇಕ್ಬಾಲ್ ಖನ್ನಾ ಜತೆ ಸಂಬಂಧವಿರುವ ಬಗ್ಗೆಯೂ ತಿಳಿದು ಬಂದಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications