ಉಕ್ರೇನ್ ತೈಲ ಸಂಗ್ರಹ ಘಟಕಗಳನ್ನು ನಾಶ ಮಾಡಿದ ರಷ್ಯಾ ಸೇನೆ?
ರಷ್ಯಾ ಸೇನೆ ತನ್ನ ದಾಳಿಯನ್ನ ಮತ್ತಷ್ಟು ಬಿಗಿಗೊಳಿಸಿ, ಉಕ್ರೇನ್ ವಿರುದ್ಧ ಮುಂದಕ್ಕೆ ನುಗ್ಗುತ್ತಿದೆ. ಉಕ್ರೇನ್ ಯುದ್ಧದಲ್ಲಿ ಮತ್ತೆ ಎಂದಿಗೂ ಮೇಲೆದ್ದು ಬರಬಾರದು ಎಂಬುದೇ ರಷ್ಯಾ ಐಡಿಯಾ, ಹೀಗಾಗಿ ರಷ್ಯಾ ಈಗ ಉಕ್ರೇನ್ ಬುಡಕ್ಕೆ ಪೆಟ್ಟು ನೀಡುತ್ತಿದೆ. ಉಕ್ರೇನ್ ಸೇನೆಗೆ ಸೇರಿದ ಆಯಕಟ್ಟಿನ ಪ್ರದೇಶಗಳನ್ನ ವಶಕ್ಕೆ ಪಡೆದಿರುವ ರಷ್ಯಾ ಈಗ ಆ ದೇಶದ ಮೂಲ ಸೌಲಭ್ಯವನ್ನೇ ನಾಶ ಮಾಡುತ್ತಿದೆ.
ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಗಿ ಇನ್ನೇನು 2.5 ವರ್ಷ ಮುಗಿಯಲಿದ್ದು, ಕೆಲವೇ ತಿಂಗಳಲ್ಲಿ 3ನೇ ವರ್ಷ ಮುಗಿಸಿ 4ನೇ ವರ್ಷಕ್ಕೆ ಕಾಲಿಡಲಿದೆ. ಹೀಗಿದ್ರೂ ಇಬ್ಬರ ನಡುವಿನ ತಿಕ್ಕಾಟ ಮಾತ್ರ ಶಾಂತವಾಗಿಲ್ಲ. ಇಬ್ಬರೂ ಹಾವು & ಮುಂಗಿಸಿ ರೀತಿ ತಿಕ್ಕಾಟ ನಡೆಸುತ್ತಿದ್ದು, ಇದೀಗ ರಷ್ಯಾ ಸೇನೆ ಉಕ್ರೇನ್ನ ತೈಲ ಘಟಕಗಳ ಮೇಲೆ ಭೀಕರ ದಾಳಿ ಮಾಡಿದೆ. ಹಾಗಾದ್ರೆ ರಷ್ಯಾ ದಾಳಿಯಿಂದ ಉಕ್ರೇನ್ಗೆ ಏನೆಲ್ಲಾ ನಷ್ಟವಾಗಿದೆ ಗೊತ್ತಾ? ಉಕ್ರೇನ್ ಈಗ ಮರು ದಾಳಿಗೆ ಸ್ಕೆಚ್ ಹಾಕಿದೆಯಾ? ಈ ಕುರಿತಾಗಿ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

8ನೇ ಅತಿದೊಡ್ಡ ದಾಳಿ?
ಅಷ್ಟಕ್ಕೂ ಉಕ್ರೇನ್ನ ಆಗ್ನೇಯ & ಪಶ್ಚಿಮ ಭಾಗದ ಇಂಧನ ಸೌಕರ್ಯ ಗುರಿಯಾಗಿಸಿರುವ ರಷ್ಯಾ ಸೇನೆ, ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಮೃತಪಟ್ಟು ಹತ್ತಾರು ಜನರಿಗೆ ಭೀಕರ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ರಷ್ಯಾ ಈ ರೀತಿಯ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ, 3 ತಿಂಗಳಲ್ಲಿ ಉಕ್ರೇನ್ ವಿದ್ಯುತ್ ಉತ್ಪಾದಕ ಘಟಕಗಳನ್ನು ಗುರಿಯಾಗಿಸಿ ನಡೆದ 8ನೇ ಅತಿದೊಡ್ಡ ದಾಳಿ ಇದಾಗಿದೆ ಎಂದು ಆರೋಪ ಮಾಡಲಾಗಿದೆ.
16 ಕ್ಷಿಪಣಿ, 13 ಡ್ರೋನ್ ಅಟ್ಯಾಕ್
ಇದೀಗ ರಷ್ಯಾ ಸೇನೆಯು 16 ಕ್ಷಿಪಣಿ & 13 ಡ್ರೋನ್ ಮೂಲಕ ದಾಳಿ ನಡೆಸಿದೆ. ಈ ಪೈಕಿ 12 ಕ್ಷಿಪಣಿಗಳು, 13 ಡ್ರೋನ್ಗಳಿಗೆ ಬ್ರೇಕ್ ಹಾಕಿದ್ದರೂ ಮಿಕ್ಕವು ಬಂದು ಉಕ್ರೇನ್ ತೈಲ ಸಂಗ್ರಹ ಘಟಕಗಳಿಗೆ ಬಡಿದಿವೆ. ಈ ಮೂಲಕ ಉಕ್ರೇನ್ ಮತ್ತಷ್ಟು ಪರದಾಡುವ ಸ್ಥಿತಿಗೆ ಇದೀಗ ನೂಕಲ್ಪಟ್ಟಿದೆ. ಯಾಕಂದ್ರೆ ಮೊದಲೇ ಉಕ್ರೇನ್ ದೇಶದಲ್ಲಿ ನೂರಾರು ಸಮಸ್ಯೆ ಇದ್ದು, ತೈಲ ಸಂಗ್ರಹ ಘಟಕಗಳ ನಾಶದಿಂದ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗ್ತಿದೆ.
ಅಲ್ಲದೆ ಅಮೆರಿಕ & ಪಾಶ್ಚಿಮಾತ್ಯ ದೇಶಗಳು ಉಕ್ರೇನ್ಗೆ ನೀಡುತ್ತಿರುವ ಸಹಾಯ ಕೂಡ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಆರೋಪಿಸಲಾಗಿದೆ. ಉಕ್ರೇನ್ ದೇಶದಲ್ಲಿ ತುತ್ತು ಅನ್ನ ಗಿಟ್ಟಿಸಿಕೊಳ್ಳಲು ಲಕ್ಷಾಂತರ ಜನರು ಪರದಾಡುತ್ತಿದ್ದರೂ ಯುದ್ಧ ನಿಲ್ಲುತ್ತಿಲ್ಲ, ಹೀಗಾಗಿ ಇನ್ನೂ ಹಲವು ವರ್ಷಗಳ ಕಾಲ ಇದೇ ರೀತಿ ಯುದ್ಧವು ಮುಂದುವರಿಯುವ ಭಯ ಆವರಿಸಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications